Asianet Suvarna News Asianet Suvarna News

ಕ್ಯಾನ್ಸರ್‌ ಪೀಡಿತ ಸ್ನೇಹಿತನ ಚಿಕಿತ್ಸೆಗೆ ಸರ ಕದ್ದ ಗೆಳೆಯರು

ಸರ​ಗ​ಳ್ಳ​ತನ ಮಾಡು​ತ್ತಿದ್ದ ಇಬ್ಬರು ಆರೋ​ಪಿ​ಗ​ಳು ಅರೆಸ್ಟ್ |ಕ್ಯಾನ್ಸ​ರ್‌​ನಿಂದ ಬಳ​ಲು​ತ್ತಿ​ದ್ದ  ಸ್ನೇಹಿ​ತನ ಚಿಕಿತ್ಸೆಗಾಗಿ ಕಳ್ಳತನ 

men in Bengaluru stole chain for treatment of their friend who is a cancer patient dpl
Author
Bangalore, First Published Jan 5, 2021, 7:56 AM IST

ಬೆಂಗಳೂರು(ಜ.05): ಅನಾ​ರೋ​ಗ್ಯ​ಕ್ಕೀ​ಡಾ​ಗಿದ್ದ ಸ್ನೇಹಿ​ತನ ಚಿಕಿ​ತ್ಸೆ​ಗಾಗಿ ಸರ​ಗ​ಳ್ಳ​ತನ ಮಾಡು​ತ್ತಿದ್ದ ಇಬ್ಬರು ಆರೋ​ಪಿ​ಗ​ಳನ್ನು ವಿ.ವಿ​.ಪುರ ಠಾಣೆ ಪೊಲೀ​ಸರು ಬಂಧಿ​ಸಿ​ದ್ದಾ​ರೆ. ಮಂಡ್ಯದ ಮಳ​ವಳ್ಳಿ ಮೂಲದ ಮಂಜು​ನಾಥ್‌ ಮತ್ತು ಮೈಸೂ​ರಿನ ನರ​ಸೀ​ಪುರ ನಿವಾಸಿ ಮರಿ​ಸ್ವಾ​ಮಿ ಬಂಧಿ​ತರು. ಆರೋ​ಪಿ​ಗ​ಳಿಂದ ಒಂದು ಚಿನ್ನದ ಸರ ವಶಕ್ಕೆ ಪಡೆ​ಯ​ಲಾ​ಗಿದೆ ಎಂದು ಪೊಲೀ​ಸರು ಹೇಳಿ​ದ​ರು.

ಇತ್ತೀ​ಚೆಗೆ ವಿವಿ​ಪು​ರಂನ ಸಜ್ಜ​ನ್‌​ರಾವ್‌ ರಸ್ತೆ ಬಳಿ ಆರೋ​ಪಿ​ಗ​ಳಿ​ಬ್ಬರು ಅನು​ಮಾ​ನಾ​ಸ್ಪ​ದ​ವಾಗಿ ನಿಂತಿ​ದ್ದರು. ಇದೇ ವೇಳೆ ಗಸ್ತಿ​ನ​ಲ್ಲಿದ್ದ ಎಎ​ಸ್‌ಐ ಶಿವ​ಕು​ಮಾರ್‌ ವಿಚಾ​ರಣೆ ನಡೆ​ಸಿದ್ದು, ಗೊಂದಲದ ಹೇಳಿಕೆ ನೀಡಿ​ದ್ದರು.

ಏಪ್ರಿಲ್‌ನಿಂದ ಮತ್ತಷ್ಟು ತೆರಿಗೆ ಭಾರ: ಶೇ.2ರಷ್ಟು ಹೊಸದಾಗಿ ಭೂ ಸಾರಿಗೆ ಉಪ ಕರ

ಅನು​ಮಾ​ನ​ಗೊಂಡು ಠಾಣೆಗೆ ಕರೆ​ದೊಯ್ದು ಪ್ರಶ್ನಿ​ಸಿ​ದಾಗ ಸ್ನೇಹಿ​ತ ಕ್ಯಾನ್ಸ​ರ್‌​ನಿಂದ ಬಳ​ಲು​ತ್ತಿ​ದ್ದು, ಆತನ ಚಿಕಿ​ತ್ಸೆ​ಗಾಗಿ ಸರ​ಗ​ಳ್ಳ​ತನ ಮಾಡು​ತ್ತಿ​ರು​ವು​ದಾ​ಗಿ​ ಹೇ​ಳಿಕೆ ನೀಡಿದ್ದರು. ಆದರೆ, ಈ ಬಗ್ಗೆ ಯಾವುದೇ ದಾಖ​ಲೆ​ಗಳು ಇಲ್ಲ

 ಚಾಮ​ರಾ​ಜ​ನ​ಗ​ರ​ ಜಿಲ್ಲೆ​ಯಲ್ಲಿ ಚಿನ್ನದ ಸರ ಕಳವು ಮಾಡಿ, ಬೆಂಗ​ಳೂ​ರಿ​ನ​ಲ್ಲಿ ಮಾರಾ​ಟಕ್ಕೆ ಸಿದ್ಧತೆ ನಡೆ​ಸಿ​ದ್ದರು ಎಂಬುದು ಗೊತ್ತಾ​ಗಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀ​ಸರು ತಿಳಿಸಿದರು.

Follow Us:
Download App:
  • android
  • ios