ಭಾರತದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಎಂಜಿ ಸೈಬರ್ಸ್ಟರ್ ಕಾರು ಬಿಡುಗಡೆಯಾಗುತ್ತಿದೆ. ಈಗಾಗಲೇ ಡೀಲರ್ ಬಳಿ ತಲುಪಿರುವ ಈ ಕಾರಿನ ಬೆಲೆ ಎಷ್ಟು?
- Home
- News
- State
- Karnataka News Live: ಕೈಗೆಟುಕುವ ದರದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಎಂಜಿ ಸೈಬರ್ಸ್ಟರ್ ಶೀಘ್ರದಲ್ಲೇ ಲಾಂಚ್
Karnataka News Live: ಕೈಗೆಟುಕುವ ದರದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಎಂಜಿ ಸೈಬರ್ಸ್ಟರ್ ಶೀಘ್ರದಲ್ಲೇ ಲಾಂಚ್

ಬೆಂಗಳೂರು: ರಾಜ್ಯ ಸರ್ಕಾರದ ಸಚಿವರು, ಅಧಿಕಾರಿಗಳ ಧೋರಣೆ ವಿರುದ್ಧ ಸ್ವಪಕ್ಷೀಯ ಶಾಸಕರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅಹವಾಲು ಆಲಿಸಲು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸತತ ಮೂರು ದಿನಗಳ ಕಾಲ 42 ಮಂದಿ ಕಾಂಗ್ರೆಸ್ ಶಾಸಕರೊಂದಿಗೆ ಮುಖಾಮುಖಿ ಚರ್ಚಿಸಿ ಅಹವಾಲು ಆಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
Karnataka News Live 30 June 2025ಕೈಗೆಟುಕುವ ದರದ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಎಂಜಿ ಸೈಬರ್ಸ್ಟರ್ ಶೀಘ್ರದಲ್ಲೇ ಲಾಂಚ್
Karnataka News Live 30 June 2025ಹುಲಿಗೆ ವಿಷ ಹಾಕುವುದನ್ನು ಹೀಗೂ ತಪ್ಪಿಸಬಹುದು,ಚಿತ್ರಕಲಾವಿದೆ ಸುನೀತಾ ಸಾಹಸಗಾಥೆ
ಮಲೆ ಮಹದೇಶ್ವರದಲ್ಲಿ ಹಸುವಿನ ಮೇಲೆ ದಾಳಿ ದ್ವೇಷಕ್ಕೆ ಮರಿ ಹಾಗೂ ತಾಯಿ ಹುಲಿ ಸೇರಿದಂತೆ ಐದು ಹುಲಿಗಳಿಗೆವ ವಿಷ ಹಾಕಿ ಕೊಂದ ಪ್ರಕರಣ ಕೋಲಾಹಲ ಸೃಷ್ಟಿಸಿದೆ. 25-30 ವರ್ಷದ ಹಿಂದೆ ಇದೇ ಪರಿಸ್ಥಿತಿ ಬಂಡಿಪುರದಲ್ಲೂ ಇತ್ತು. ಆದರೆ ಅಲ್ಲೀಗ ಈ ವಿಷದ ಮನಸ್ಥಿತಿ ಇಲ್ಲ. ಇದಕ್ಕೆ ಕಾರಣ ಚಿತ್ರಕಲಾವಿದೆ ಸುನೀತಾ.
Karnataka News Live 30 June 2025ಬಂಟ್ವಾಳ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣ, ಮತ್ತೊರ್ವ ಆರೋಪಿ ಬಂಧನ
ಮಂಗಳೂರಿನಲ್ಲಿ ನಡೆದ ಸರಣಿ ಹ-ತ್ಯೆ ಪ್ರಕರಣಗಳ ತನಿಖೆ ತೀವ್ರಗೊಂಡಿದೆ. ಸುಹಾಸ್ ಶೆಟ್ಟಿ ಹ-ತ್ಯೆ ಬಳಿಕ ನಡೆದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣ ಸಂಬಂಧ ಮತ್ತೊರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Karnataka News Live 30 June 2025ಬೆಂಗಳೂರಿಗರಿಗೆ ಮತ್ತೊಂದು ಶಾಕ್, ಶೀಘ್ರದಲ್ಲೇ ಆಟೋ ದರ ಏರಿಕೆ
ಹಾಲಿನ ದರ ಏರಿಕೆ ಸೇರಿದಂತೆ ಕರ್ನಾಟಕದ ಸಾಲು ಸಾಲು ಬೆಲೆ ಏರಿಕೆಯಾಗುತ್ತಿದೆ. ಇದೀಗ ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ಶೀಘ್ರದಲ್ಲೇ ಬೆಂಗಳೂರು ಆಟೋ ದರ ಏರಿಕೆಯಾಗುತ್ತಿದೆ.
Karnataka News Live 30 June 2025ಕಾಲ್ತುಳಿತ ಪ್ರಕರಣದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಶಾಕ್, ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಪಂದ್ಯ ನಡೆಸುವುದು ಕಷ್ಟವಾಗಲಿದೆ. ಆರ್ಸಿಬಿ ಕಾಲ್ತುಳಿತ ಪ್ರಕರಣದಿಂದ ಇದೀಗ ಕ್ರೀಡಾಂಗಣಕ್ಕೀ ಶಾಕ್ ಎದುರಾಗಿದೆ. ಅಗ್ನಿಶಾಮಕ ದಳ ಸೂಚನೆಯಂತೆ ಚಿನ್ನಸ್ವಾಮಿ ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
Karnataka News Live 30 June 2025ಭಾರತದ ಟಾಪ್ ಫುಡ್ ಬ್ರ್ಯಾಂಡ್ ಪಟ್ಟಿಯಲ್ಲಿ ನಂದಿನಿಗೆ 4ನೇ ಸ್ಥಾನ, ನಂ.1 ಯಾರು?
ಭಾರತದ ಟಾಪ್ ಆಹಾರ ಉತ್ಪನ್ನ ಬ್ರ್ಯಾಂಡ್ ಯಾವುದು? ಈ ಪ್ರಶ್ನೆಗೆ ಸರ್ವೇ ಉತ್ತರ ನೀಡಿದೆ. ವಿಶೇಷ ಅಂದರೆ ಟಾಪ್ ಫುಡ್ ಬ್ರ್ಯಾಂಡ್ ಪಟ್ಟಿಯಲ್ಲಿ ಕರ್ನಾಟಕದ ನಂದಿನಿ 4ನೇ ಸ್ಥಾನ ಪಡೆದುಕೊಂಡಿದೆ. ಹಾಗಾದರೆ ಟಾಪ್ 5 ಪಟ್ಟಿಯಲ್ಲಿ ಯಾರಿದ್ದಾರೆ.
Karnataka News Live 30 June 2025ಹಾಸನದಲ್ಲಿ ಮತ್ತೆ ರಣಕೇಕೆ ಹಾಕಿದ ಹಾರ್ಟ್ಅಟ್ಯಾಕ್; ಆಟೋ ಓಡಿಸುತ್ತಲೇ ಪ್ರಾಣ ಬಿಟ್ಟ ಡ್ರೈವರ್!
Karnataka News Live 30 June 2025ಬಿಗ್ ಬಾಸ್ ಶಾಪಗ್ರಸ್ತ ಮನೆಯೇ? ಸ್ಪರ್ಧಿಗಳ ಸಾಲು ಸಾಲು ಸಾವಿನ ಕೂಪ, ಕನ್ನಡತಿಯನ್ನೂ ಬಿಡಲಿಲ್ಲ ಸಾವು!
Karnataka News Live 30 June 2025ರಾಜ್ಯಾಧ್ಯಕ್ಷರ ಆಯ್ಕೆ ಘೋಷಣೆ ಮೊದಲೇ ಬಿಜೆಪಿಗೆ ಶಾಕ್, ಪಕ್ಷಕ್ಕೆ ಶಾಸಕ ಟಿ ರಾಜ ರಾಜೀನಾಮೆ
ಬಿಜೆಪಿಯಲ್ಲಿ ಇದೀಗ ರಾಜ್ಯಾಧ್ಯಕ್ಷರ ಆಯ್ಕೆ ಕಸರತ್ತು ಅಂತಿಮ ಹಂತ ತಲುಪಿದೆ. ಆದರೆ ಘೋಷಣೆಗೂ ಮೊದಲೇ ಬಿಜೆಪಿಗೆ ಶಾಕ್ ಎದುರಾಗಿದೆ. ಅಧ್ಯಕ್ಷ ಸ್ಥಾನ ಕೈತಪ್ಪುವ ಸಾಧ್ಯತೆ ಬೆನ್ನಲ್ಲೇ ಪ್ರಮುಖ ನಾಯಕ, ಶಾಸಕ ಟಿ ರಾಜ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
Karnataka News Live 30 June 2025ಕೆಲ ಮಕ್ಕಳು ವಯಸ್ಸಿಗೆ ತಕ್ಕಂಗೆ ಬೆಳವಣಿಗೆ ಆಗ್ದೇ ಇರೋದಕ್ಕೆ ಕಾರಣ ಏನು?
ಮಕ್ಕಳ ಬೆಳವಣಿಗೆಯಲ್ಲಿ ಪೌಷ್ಠಿಕಾಂಶ, ಹಾರ್ಮೋನುಗಳು, ದೈಹಿಕ ಚಟುವಟಿಕೆ ಮತ್ತು ನಿದ್ರೆ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳ ಬೆಳವಣಿಗೆ ಕುಂಠಿತವಾಗುವುದಕ್ಕೆ ಕಾರಣ ಏನು ಎಂದು ಈಗ ನೋಡೋಣ.
Karnataka News Live 30 June 2025ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ 10-10-10 ಫಾರ್ಮುಲಾ ಫಾಲೋ ಮಾಡಿ!
ಪ್ರತಿದಿನ ಕೇವಲ ಮೂರು ಸಣ್ಣ ಅಭ್ಯಾಸಗಳಿಂದ ಸಕ್ಕರೆ ಕಂಟ್ರೋಲ್ ಸಾಧ್ಯ. 10-10-10 ಫಾರ್ಮುಲಾ ರಕ್ತದಲ್ಲಿ ಸಕ್ಕರೆ ಮಟ್ಟನ ಸಮತೋಲನ ಮಾಡುತ್ತದೆ.
Karnataka News Live 30 June 2025ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕಿಯ ಗೂಂಡಾಗಿರಿ - ಸಿಪಿಐಎಂನ ವೃದ್ಧ ನಾಯಕನ ರಸ್ತೆಯಲ್ಲಿ ಬೀಳಿಸಿ ಹಲ್ಲೆ
ಪಶ್ಚಿಮ ಬಂಗಾಳದ ಖರಗ್ಪುರದಲ್ಲಿ ಟಿಎಂಸಿ ಮಹಿಳಾ ನಾಯಕಿ ಬೇಬಿ ಕೋಲಿ, ಸಿಪಿಐಎಂ ಹಿರಿಯ ನಾಯಕ ಅನಿಲ್ ದಾಸ್ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾರೆ.
Karnataka News Live 30 June 2025ಎಂಐಟಿ ಬೆಂಗಳೂರು ಕಾಲೇಜಿಗೆ ಹಿರಿಮೆ, ಬರೋಬ್ಬರಿ ₹52 ಲಕ್ಷದ ಪ್ಯಾಕೇಜ್ ಉದ್ಯೋಗ ಪಡೆದ ವಿದ್ಯಾರ್ಥಿ!
Karnataka News Live 30 June 2025ನಾವು ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ಆರ್ಎಸ್ಎಸ್ ಬ್ಯಾನ್; ಸಚಿವ ಪ್ರಿಯಾಂಕ್ ಖರ್ಗೆ
ಆರ್ಎಸ್ಎಸ್ ಸಂಘಟನೆಯನ್ನು ಎರಡು ಬಾರಿ ಬ್ಯಾನ್ ಮಾಡಿದ್ದೆವು. ಕೈಕಾಲು ಹಿಡಿದು ವಾಪಸ್ ಬಂದರು. ಈಗ ನಾವು ಮತ್ತೆ ಅಧಿಕಾರಕ್ಕೆ ಬಂದರೆ ಬ್ಯಾನ್ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಸಂವಿಧಾನದಿಂದ ಜಾತ್ಯಾತೀತ ಮತ್ತು ಸಮಾಜವಾದಿ ಪದ ತೆಗೆಯುವ RSS ಆಗ್ರಹವನ್ನು ಖಂಡಿಸಿದರು
Karnataka News Live 30 June 2025ಟೀಚರ್ನಿಂದ ತಪ್ಪಿಸಿಕೊಂಡು ಶಾಲೆಯಿಂದ ಎಸ್ಕೇಪ್ ಪ್ರಯತ್ನ, ಮುದ್ದು ಬಾಲಕನ ವಿಡಿಯೋ ವೈರಲ್
ಟೀಚರ್ ಕೈಯಿಂದ ತಪ್ಪಿಸಿಕೊಂಡು ನನಗೆ ಶಾಲೆ ಬೇಡ ಎಂದು ಓಡಲು ಆರಂಭಿಸಿದ ಮುದ್ದು ಬಾಲಕನ ಟೀಚರ್ ಬೆನ್ನಟ್ಟಿದ ಘಟನೆ ನಡೆದಿದೆ. ಏನು ಕೊಟ್ಟರೂ ಸಮಾಧಾನವಾಗದ ಈ ಬಾಲಕನ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.
Karnataka News Live 30 June 2025ಬಾಡಿಗೆದಾರರ ಡೆಪಾಸಿಟ್ ನಿಂದ ಶೇ.60ಕ್ಕೂ ಹೆಚ್ಚು ಕಡಿತ, ಬೆಂಗಳೂರು ಮನೆ ಮಾಲೀಕರ ಕಾರಣ ಒಂದೆರಡಲ್ಲ!
ಬೆಂಗಳೂರಿನಲ್ಲಿ ಮನೆಮಾಲೀಕರೊಬ್ಬರು ಬಾಡಿಗೆದಾರರ ಠೇವಣಿಯಿಂದ ₹60,000ಕ್ಕೂ ಹೆಚ್ಚು ಹಣವನ್ನು ಕಡಿತಗೊಳಿಸಿರುವ ಆರೋಪ ಕೇಳಿಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪೇಯಿಂಟಿಂಗ್, ದಲ್ಲಾಳಿ ಶುಲ್ಕ, ತುಕ್ಕು ಹಿಡಿದ ಅಡುಗೆಮನೆ ರ್ಯಾಕ್ನಂತಹ ಕಾರಣ ನೀಡಿ ಠೇವಣಿ ಕಡಿತಗೊಳಿಸಲಾಗಿದೆ.
Karnataka News Live 30 June 2025ಫೇಕ್ ನ್ಯೂಸ್ ಕಾನೂನು ತಡೆ ಕಾನೂನು ಬಗ್ಗೆಯೇ ಮಾಧ್ಯಮಗಳಿಂದ ತಪ್ಪು ಸುದ್ದಿ ಬಿತ್ತರ; ಸಚಿವ ಪ್ರಿಯಾಂಕ್ ಖರ್ಗೆ
Karnataka News Live 30 June 2025ಪ್ರತಿ ದಿನ ಇನ್ಸ್ಟಾಂಟ್ ಕಾಫಿ ಕುಡಿಯುತ್ತೀರಾ? ದೃಷ್ಠಿ ದೋಷ ಎಚ್ಚರಿಕೆ ನೀಡಿದ ಅಧ್ಯಯನ ವರದಿ
ಪ್ರತಿ ದಿನ ಇನ್ಸ್ಟಾಂಟ್ ಕಾಫಿ ಕುಡಿಯುವ ಅಭ್ಯಾಸವಿದೆಯಾ? ಹೊಸ ಅಧ್ಯಯನ ವರದಿ ಪ್ರಕಾರ, ಇನ್ಸ್ಟಾಂಟ್ ಕಾಫಿಯಿಂದ ದೃಷ್ಟಿದೋಷ ಸಾಧ್ಯತೆ ಇದೆ ಎಂದಿದೆ. ಹಾಗಾದಾರೆ ಯಾವ ಕಾಫಿ ಕುಡಿಯಬಹುದು?
Karnataka News Live 30 June 2025ಮಾಡಲ್ಲ ಅಂದಿದ್ರೂ ಮತ್ತೆ ಕಿಚ್ಚ ಸುದೀಪ್ 'ಬಿಗ್ ಬಾಸ್ ಕನ್ನಡ ಸೀಸನ್ 12' ಹೋಸ್ಟ್ ಮಾಡಲು ಒಪ್ಪಿದ್ದೇಕೆ?
ಇದೀಗ ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡ ಚಾನೆಲ್ ಕರೆದಿರುವ ಸುದ್ದಿಗೋಷ್ಠಿಯಲ್ಲಿ ಮುಂಬರುವ ಸೀಸನ್ 12 ಹೋಸ್ಟ್ ಮಾಡಲಿರುವ ಕಿಚ್ಚ ಸುದೀಪ್ ಅವರು ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದಾರೆ.