ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 13 ಐಪಿಎಸ್ ಅಧಿಕಾರಿಗಳ ಎತ್ತಂಗಡಿ
ಕೊರೋನಾ ಕಾಟ ಮಧ್ಯೆ ರಾಜ್ಯ ಸರ್ಕಾರ 13 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಈ ಮೂಲಕ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲು ಮುಂದಾಗಿದೆ.
ಬೆಂಗಳೂರು (ಜೂನ್ 26): 13 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು (ಶುಕ್ರವಾರ) ಆದೇಶ ಹೊರಡಿಸಿದೆ.
ಮಂಗಳೂರು ಪೊಲೀಸ್ ಕಮಿಷನರ್ ಪಿ.ಎಸ್. ಹರ್ಷ ಅವರನ್ನು ಮತ್ತೆ ವಾರ್ತಾ ಇಲಾಖೆ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಅವರು ವಾರ್ತಾ ಇಲಾಖೆ ಆಯುಕ್ತರಾಗಿದ್ದರು.
ಬೆಂಗಳೂರಲ್ಲಿ ಲಾಕ್ಡೌನ್ ಇಲ್ಲ, ಪೆಟ್ರೋಲ್-ಡೀಸೆಲ್ ಕೈಗೆಟುಕುತ್ತಿಲ್ಲ; ಜೂ.26ರ ಟಾಪ್ 10 ಸುದ್ದಿ!
ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿ
1. ಪಿ.ಎಸ್. ಹರ್ಷ- ವಾರ್ತಾ ಇಲಾಖೆ ಕಮಿಷನರ್
2. ಸೀಮಂತ್ಕುಮಾರ್ ಸಿಂಗ್ - ಕೇಂದ್ರ ವಲಯ ಐಜಿಪಿ
3. ಕೆ.ವಿ ಶರತ್ಚಂದ್ರ - ಐಜಿಪಿ ಆಡಳಿತ ವಿಭಾಗ ಬೆಂಗಳೂರು
4. ಸುಮನ್ ಪನೇಕರ್- ಡಿಸಿಪಿ ಸಿಎಆರ್ ಬೆಂಗಳೂರು,
5. ಹೆಚ್.ಡಿ ಆನಂದ ಕುಮಾರ್- ಎಸ್.ಪಿ ಐಎಸ್ಡಿ
6. ವಿಕಾಸ್ ಕುಮಾರ್ - ಮಂಗಳೂರು ಕಮಿಷನರ್
7. ಎಸ್.ಎನ್ ಸಿದ್ದರಾಮಪ್ಪ - ಡಿಐಜಿ ಸಿಐಡಿ ಆರ್ಥಿಕ ಅಪರಾಧ ವಿಭಾಗ
8. ಬಿ.ಎಸ್ ಲೋಕೇಶ್ ಕುಮಾರ್ - ಡಿಐಜಿ ಐಎಸ್ಡಿ
9. ಡಾ.ಕೆ.ತ್ಯಾಗರಾಜನ್ - ಬೆಳಗಾವಿ ಸಿಟಿ ಪೊಲೀಸ್ ಕಮಿಷನರ್
10. ಕ್ಷಮಾ ಮಿಶ್ರಾ - ಕೊಡಗು ಎಸ್.ಪಿ
11. ಹರೀಶ್ ಪಾಂಡೆ - ಎಸ್.ಪಿ ಗುಪ್ತಚರ ಇಲಾಖೆ ಬೆಂಗಳೂರು
12. ದಿವ್ಯಾ ಸಾರಾ ಥಾಮಸ್ - ಎಸ್.ಪಿ ಚಾಮರಾಜನಗರ
13. ಹಾಕಯ್ ಅಕ್ಷಯ್ ಮಚ್ಚೀಂದ್ರ - ಎಸ್.ಪಿ ಚಿಕ್ಕಮಗಳೂರು