ವಿಧಾನಸೌಧದ ಮೂರನೇ ಮಹಡಿಯಲ್ಲಿರೋ ಕ್ಯಾಬಿನೆಟ್ ಹಾಲ್ ಗೆ ತೆರಳಿದ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯಗೆ ಜಮೀರ್ ಅಹ್ಮದ್, ಎಂಬಿ ಪಾಟೀಲ್, ಶರಣ ಪ್ರಕಾಶ ಪಾಟೀಲ್ , ಬೋಸರಾಜ್ ಸೇರಿ ಹಲವು ಶಾಸಕರು ಸಾಥ್.
- Home
- News
- State
- Karnataka Budget 2026 Live: ಇಂದು ಕರ್ನಾಟಕ ಬಜೆಟ್, ದಾಖಲೆಯ 17ನೇ ಬಾರಿಗೆ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ
Karnataka Budget 2026 Live: ಇಂದು ಕರ್ನಾಟಕ ಬಜೆಟ್, ದಾಖಲೆಯ 17ನೇ ಬಾರಿಗೆ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ

ಬೆಂಗಳೂರು (ಮಾ.6): ಹಣದ ಬರ, ಗ್ಯಾರಂಟಿಗಳ ಭಾರ, ನಿರೀಕ್ಷೆಗಳ ಹೊರ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 17ನೇ ಬಜೆಟ್ ಮಂಡನೆಗೆ ಅಣಿಯಾಗಿದ್ದು, ಆರ್ಥಿಕ ಶಿಸ್ತು ಸರಿದಾರಿಗೆ ತರುವ ಜತೆ ಜನರ ನಿರೀಕ್ಷೆ ಈಡೇರಿಕೆಗೂ ಆದ್ಯತೆ ನೀಡುವ ಸಾಧ್ಯತೆಯಿದೆ. ರಾಜ್ಯದ ಮಟ್ಟಿಗೆ ಅತಿ ಹೆಚ್ಚು ಹಾಗೂ ದೇಶದಲ್ಲಿ ಎರಡನೇ ಅತಿ ಹೆಚ್ಚು ಆಯವ್ಯಯ ಮಂಡಿಸಿರುವ ಸಿದ್ದರಾಮಯ್ಯ ಅವರು ಶುಕ್ರವಾರ ಬೆಳಗ್ಗೆ 10.15 ಗಂ ಟೆಗೆ ತಮ್ಮ ಆಯ-ವ್ಯಯ ಲೆಕ್ಕ ಬಿಚ್ಚಿಡಲಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಕಡಿವಾಣ ಹಾಕದೆ ಆರ್ಥಿಕ ಶಿಸ್ತು ಪಾಲನೆಗೆ ಬಜೆಟ್ನಲ್ಲಿ ಸಿಎಂ ಒತ್ತು ನೀಡುವ ಸಾಧ್ಯತೆ ಇದೆ.
Karnataka Budget Live: ಬಜೆಟ್ ಪುಸ್ತಕ ತೆಗೆದುಕೊಂಡು ವಿಧಾನಸೌಧಕ್ಕೆ ತೆರಳಿದ ಸಿಎಂ ಸಿದ್ದರಾಮಯ್ಯ
Karnataka Budget Live: Karnataka Budget 2026-27: ಧಾರವಾಡಕ್ಕೆ ಕೊಟ್ಟಿದ್ದು ಬೆಟ್ಟದಷ್ಟು, ಅನುಷ್ಠಾನ ಮಾತ್ರ ಎಳ್ಳಷ್ಟು!
ಕಳೆದ ವರ್ಷದ ಬಜೆಟ್ನಲ್ಲಿ ಧಾರವಾಡ ಜಿಲ್ಲೆಗೆ ನೀಡಿದ ಭರವಸೆಗಳ ಪೈಕಿ ಬೆಣ್ಣಿಹಳ್ಳ ಕಾಮಗಾರಿ ಮತ್ತು ಶಾಲಾ ಉನ್ನತೀಕರಣದಂತಹ ಕೆಲವು ಕಾರ್ಯಗಳು ಆರಂಭ ಆದರೆ, ತಂತ್ರಜ್ಞಾನ ಕೇಂದ್ರ, ಆರೋಗ್ಯ ಕೇಂದ್ರಗಳ ಪ್ರತ್ಯೇಕ ಪಾಲಿಕೆಯಂತಹ ಪ್ರಮುಖ ಘೋಷಣೆ ಇನ್ನೂ ಅನುಷ್ಠಾನಗೊಂಡಿಲ್ಲ ಅಥವಾ ವಿವಾದದಲ್ಲಿ ಸಿಲುಕಿವೆ.
Karnataka Budget Live: Karnataka Budget 2026-27: ಇಂದಿನ ಬಜೆಟ್ನಲ್ಲಿ ಬೆಳಗಾವಿಗೆ ಸಿಗುತ್ತಾ ಬಂಪರ್? ಬೇಡಿಕೆಗಳೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ನಲ್ಲಿ ಬೆಳಗಾವಿ ಜಿಲ್ಲೆಯು ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಜಿಲ್ಲಾ ವಿಭಜನೆ, ರಿಂಗ್ ರಸ್ತೆ, ಮಹದಾಯಿ ಸೇರಿದಂತೆ ನೀರಾವರಿ ಯೋಜನೆಗಳು, ಐಟಿ ಪಾರ್ಕ್ ಸೇರಿ ಹಲವು ಸುಧಾರಣೆಯಂತಹ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಜನರು ಕಾಯುತ್ತಿದ್ದಾರೆ.
Karnataka Budget Live: Karnataka Budget 2026–27 ಸಿದ್ದು ದಾಖಲೆಯ 17ನೇ ಬಜೆಟ್: ಇಂದು ಬೆಳಗ್ಗೆ 10.15ಕ್ಕೆ ಮಂಡನೆಗೆ ಕ್ಷಣಗಣನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 17ನೇ ಬಜೆಟ್ ಮಂಡಿಸುತ್ತಿದ್ದು, ಆರ್ಥಿಕ ಶಿಸ್ತು ಮತ್ತು ಜನಪರ ಯೋಜನೆಗಳ ನಡುವೆ ಸಮತೋಲನ ಸಾಧಿಸುವ ಸವಾಲು ಎದುರಿಸುತ್ತಿದ್ದಾರೆ. ಗ್ಯಾರಂಟಿಗಳ ನಡುವೆಯೂ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಿಂದುಳಿದ ತಾಲೂಕುಗಳಿಗೆ ಅನುದಾನ ನೀಡುವ ನಿರೀಕ್ಷೆಯಿದೆ.