Asianet Suvarna News Asianet Suvarna News

ಮಂಗಳೂರು- ಬೆಂಗಳೂರು ವಿಮಾನದಲ್ಲಿ ಹೊಗೆ!

ಮಂಗಳೂರಿಗೆ ಹೊರಟ್ಟಿದ್ದ ಫ್ಲೈಟಲ್ಲಿ ಕಾಣಿಸಿಕೊಂಡ ಹೊಗೆ| ಪ್ರಯಾಣಿಕರು ಸೇಫ್

Jet Flight Grounded In Bengaluru After Smoke Alert All Passengers Safe
Author
Bangalore, First Published Dec 28, 2018, 9:45 AM IST

ಬೆಂಗಳೂರು[ಡಿ.28]: ಬೆಂಗಳೂರಿನಿಂದ ಮಂಗಳೂರಿಗೆ ಹೊರಟ್ಟಿದ್ದ ಜೆಟ್‌ ಏರವೇಸ್‌ ವಿಮಾನದಲ್ಲಿ ತಾಂತ್ರಿಕ ದೋಷದ ಕಾರಣದಿಂದ ಹೊಗೆ ಕಾಣಿಸಿಕೊಂಡ ಘಟನೆ ಗುರುವಾರ ನಡೆದಿದೆ.

ತಕ್ಷಣವೇ ದೋಷಕ್ಕೆ ತುತ್ತಾದ ವಿಮಾನದಲ್ಲಿದ್ದ 71 ಪ್ರಯಾಣಿಕರನ್ನು ಬೇರೆ ವಿಮಾನಕ್ಕೆ ಸ್ಥಳಾಂತರಿಸಿ ಮಂಗಳೂರಿಗೆ ಕಳುಹಿಸಕೊಡಲಾಗಿದೆ. ಗುರುವಾರ ಬೆಳಗ್ಗೆ 7ರ ವೇಳೆಗೆ ಘಟನೆ ನಡೆದಿದೆ. ಬ್ರೇಕ್‌ನಲ್ಲಿ ಅತಿಯಾದ ಉಷ್ಣತೆಯ ಕಾರಣ ಹೊಗೆ ಕಾಣಿಸಿಕೊಂಡಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆಯಿಂದ ವಿಮಾನವು 1 ಗಂಟೆ 20 ನಿಮಿಷ ವಿಳಂಬವಾಗಿ ಪ್ರಯಾಣ ಆರಂಭಿಸಿತು.

Follow Us:
Download App:
  • android
  • ios