ಇದುವರೆಗೂ ರಾಜ್ಯದ ಉತ್ತರ ಭಾಗ, ಕರಾವಳಿ, ಮಲೆನಾಡಿನಲ್ಲಿ ಅಬ್ಬರಸಿ ಬೊಬ್ಬಿರಿದಿದ್ದ ಮಳೆರಾಯ ಈಗ ಸಿಲಿಕಾನ್‌ ಸಿಟಿಯತ್ತ ಹೋಗಿದ್ದಾನೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು ಮುಳುಗಿ ಹೋಗಿದೆ. ಪ್ರಾಣಹಾನಿಯಾಗಿಲ್ಲವಾದರೂ ಸುಮಾರು 780 ಮನೆಗಳು ಮುಳುಗಿ ಹೋಗಿವೆ. 

ಬೆಂಗಳೂರು (ಅ. 24): ಇದುವರೆಗೂ ರಾಜ್ಯದ ಉತ್ತರ ಭಾಗ, ಕರಾವಳಿ, ಮಲೆನಾಡಿನಲ್ಲಿ ಅಬ್ಬರಸಿ ಬೊಬ್ಬಿರಿದಿದ್ದ ಮಳೆರಾಯ ಈಗ ಸಿಲಿಕಾನ್‌ ಸಿಟಿಯತ್ತ ಹೋಗಿದ್ದಾನೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು ಮುಳುಗಿ ಹೋಗಿದೆ. ಪ್ರಾಣಹಾನಿಯಾಗಿಲ್ಲವಾದರೂ ಸುಮಾರು 780 ಮನೆಗಳು ಮುಳುಗಿ ಹೋಗಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ಹೊಸಕೆರೆಹಳ್ಳಿ ಬಹುತೇಕ ಮುಳುಗಡೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ವೃಷಭಾವತಿ ಕಾಲುವೆಗೆ ಸಂಪರ್ಕಿಸುವ ಬೃಹತ್ ರಾಜಕಾಲುವೆ ಕಾಮಗಾರಿ ನೀರಿನ ದಿಕ್ಕನ್ನೇ ಬದಲಿಸಿದೆ. ಪರಿಣಾಮ ರಾಜಕಾಲುವೆ ಸಮೀಪದ ಮನೆಗಳು, ಕಟ್ಟಡಗಳು ಜಲಾವೃತವಾಗಿವೆ.