*   ಬ್ರಶ್‌, ಇನ್ನಿತರೆ ವಸ್ತುಗಳನ್ನಿರಿಸಿದ್ದ ಪ್ಲಾಸ್ಟಿಕ್‌ ಚೀಲದಲ್ಲಿ ಕಂತೆ ಕಂತೆ ಹಣ ಪತ್ತೆ*   ಎಸಿಬಿ ಅಧಿಕಾರಿಗಳು ದಂಗು*  ಬಿ.ವೈ.ಪವಾರ್‌ ಮನೆ, ಕಚೇರಿ ಸೇರಿದಂತೆ ಒಟ್ಟು 6 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ  

ಬೆಳಗಾವಿ(ಜೂ.18):  ಬೆಳಗಾವಿಯ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿ ಬಿ.ವೈ.ಪವಾರ್‌ ಅವರ ವಿಶ್ವೇಶ್ವರಯ್ಯ ನಗರದ ಸರ್ಕಾರಿ ನಿವಾಸದಲ್ಲಿ ಲಕ್ಷಾಂತರ ನಗದು ಹಣವನ್ನು ಎಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಅಧಿಕಾರಿಗಳಿಗೆ ತಿಳಿಯಬಾರದು ಎಂಬ ಕಾರಣಕ್ಕೆ ಒಂದು ಪ್ಲಾಸ್ಟಿಕ್‌ ಕವರ್‌ನಲ್ಲಿ 5 ಲಕ್ಷ ರು. ಹಣ ಇಟ್ಟು ಅದನ್ನು ಬಾತ್‌ರೂಮ್‌ನಲ್ಲಿರುವ ಮೊಳೆಗೆ ನೇತು ಹಾಕಿದ್ದರು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಜೂ.30ರಂದು ನಿವೃತ್ತಿಯಾಗಬೇಕಿದ್ದ ಬಿ.ವೈ.ಪವಾರ್‌ ಮನೆ, ಕಚೇರಿ ಸೇರಿದಂತೆ ಒಟ್ಟು 6 ಕಡೆಗಳಲ್ಲಿ ಏಕಕಾಲಕ್ಕೆ ಶುಕ್ರವಾರ ದಾಳಿ ನಡೆಸಿದ್ದಾರೆ. ಬೆಳಗಾವಿ ಜಕ್ಕೇರಿ ಹೊಂಡದಲ್ಲಿರುವ ಸ್ವಂತ ಮನೆ ತಪಾಸಣೆ ವೇಳೆ ಪವಾರ್‌ ಹಣವನ್ನು ಬಾತ್‌ರೂಂನಲ್ಲಿ ಇಟ್ಟಿದ್ದರು. ನೇತು ಹಾಕಿರುವ ಪ್ಲಾಸ್ಟಿಕ್‌ ಕವರ್‌ನಲ್ಲಿ ಬ್ರಶ್‌ ಮತ್ತು ಇನ್ನಿತರೆ ವಸ್ತುಗಳು ಇಡುತ್ತಾರೆಂದುಕೊಂಡು ಅದನ್ನು ಎಸಿಬಿ ಅಧಿಕಾರಿಗಳು ಗಮನಿಸದೇ ಇರಬಹುದು ಎಂಬ ಲೆಕ್ಕಾಚಾರ ಅಧಿಕಾರಿಯದ್ದಾಗಿತ್ತು. ಆದರೆ ಎಸಿಬಿ ಅಧಿಕಾರಿಗಳು ಅದನ್ನು ಪತ್ತೆ ಮಾಡಿ ಅದರಲ್ಲಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂ‌ ಬೆಳಗ್ಗೆ ಎಸಿಬಿ ಬಿಗ್ ಶಾಕ್: ರಾಜ್ಯದ 80 ಕಡೆ ದಾಳಿ!

ಎಸಿಬಿ ದಾಳಿಯಾದರೂ ತಲೆಕೆಡಿಸಿಕೊಳ್ಳದ ಪವಾರ್‌ ಅವರು ಮೊಬೈಲ್‌ನಲ್ಲಿ ಮಾತನಾಡುತ್ತ ಕೂಲ್‌ ಕೂಲ್‌ ಆಗಿರುವುದು ಕಂಡುಬಂದಿತು. ಬಳಿಕ ಅವರ ಅವರ ಮೊಬೈಲ್‌ನ್ನು ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದರು.