65 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
ಇಂದು ರಾಜಭವನದಲ್ಲಿ ಪೊಲೀಸ್ ಇಲಾಖೆಯಲ್ಲಿ ಶೌರ್ಯ, ಶ್ಲಾಘನೀಯ ಹಾಗೂ ವಿಶಿಷ್ಠ ಸೇವೆ ಸಲ್ಲಿಸಿದವರಿಗೆ ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಯಿತು.
ಬೆಂಗಳೂರು(ಜು.31): ಇಂದು ರಾಜಭವನದಲ್ಲಿ ಪೊಲೀಸ್ ಇಲಾಖೆಯಲ್ಲಿ ಶೌರ್ಯ, ಶ್ಲಾಘನೀಯ ಹಾಗೂ ವಿಶಿಷ್ಠ ಸೇವೆ ಸಲ್ಲಿಸಿದವರಿಗೆ ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಯಿತು. ಪೊಲೀಸ್ ಇಲಾಖೆಯ ವಿವಿದ ವಿಭಾಗದ 65 ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಬಾರಿ ಪದಕ್ಕೆ ಬಾಜನಾರಾದರು.
ಎಡಿಜಿಪಿ ಎಎಸ್ ಎನ್ ಮೂರ್ತಿ, ಸಲೀಂ. ಮಾಲಿನಿ ಕೃಷ್ಣಮೂರ್ತಿ, ಮಂಡ್ಯ ಎಎಸ್’ಪಿ ಬಲರಾಮೇಗೌಡ, ಡಿವೈಎಸ್ಪಿ ಮರಿಯಪ್ಪ, ಬದ್ರಿನಾಥ್ ವೆಲೆಂಟೆನ್ ಡಿಸೋಜಾ. ಇನ್ಸ್ ಪೆಕ್ಟರ್ ಸಿದ್ದಲಿಂಗಯ್ಯ. ಪಿಎಸ್ ಐ ಸುನಿತಾ ಸೇರಿದಂತೆ. 65 ಅಧಿಕಾರಿಗಳಿಗೆ ಪದಕ ನೀಡಿ ಗೌರವಿಸಲಾಯಿತು.
ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲ ಪದಕ ವಿತಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಥಿಯಾಗಿ ಆಗಮಿಸಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಮಾಣಪತ್ರ ವಿತರಿಸಿದರು.
"
ಡಿಜಿ ನೀಲಮಣಿರಾಜು ಸರ್ಕಾರದ ಅಪರ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.