ಕೊಪ್ಪಳ ಜಿಲ್ಲೆಯಾದ್ಯಂತ ಕಳೆದ 1 ವಾರದಲ್ಲಿ ಹೊಲದಲ್ಲಿ ಮೇಯಲು ಹೋಗುತ್ತಿರುವ 25 ಜಿಂಕೆಗಳು ಸಾವನ್ನಪ್ಪಿವೆ.  

ಕೊಪ್ಪಳ: ಜಿಲ್ಲೆಯಾದ್ಯಂತ ಕಳೆದ 1 ವಾರದಲ್ಲಿ ಹೊಲದಲ್ಲಿ ಮೇಯಲು ಹೋಗುತ್ತಿರುವ 25 ಜಿಂಕೆಗಳು ಕಳೆದ 10 ದಿನಗಳಲ್ಲಿ ಸಾವನ್ನಪ್ಪಿವೆ. 

ಜಿಲ್ಲೆಯ ಅಳವಂಡಿ, ಬೆಟಗೇರಿ ಮತ್ತಿತರ ಗ್ರಾಮಗಳ ಹೊರವಲಯದ ಹೊಲದಲ್ಲಿ ರೈತರು ಬೆಳೆದ ಫಸಲು ತಿಂದು ಜಿಂಕೆಗಳು ಸಾಯುತ್ತಿವೆ. 

ಜಿಂಕೆಗಳು ಈ ರೀತಿ ಅಸ್ವಾಭಾವಿಕವಾಗಿ ಸಾಯಲು ರೈತರು ಮೆಕ್ಕೆಜೋಳದ ಬೆಳೆಯ ಸುತ್ತ ಸಿಂಪಡಿಸುತ್ತಿರುವ ಕ್ರಿಮಿನಾಶಕವೇ ಕಾರಣ ಎಂಬ ಶಂಕೆ ವ್ಯಕ್ತವಾಗುತ್ತಿದೆ.