23 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ| ಹೊಸ DGP- IG ನೇಮಕ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ

ಬೆಂಗಳೂರು[ಫೆ.01]: ಡಿಜಿಪಿ-ಐಜಿ ನೇಮಕಾತಿ ಬೆನ್ನಲ್ಲೇ ರಾಜ್ಯ ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ ನಡೆಸಿರುವ ಸರ್ಕಾರವು, ಸೇವಾ ಹಿರಿತನ ಹೊಂದಿದ ಆರು ಐಪಿಎಸ್‌ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಹಾಗೂ 23 ಅಧಿಕಾರಿಗಳನ್ನು ಶುಕ್ರವಾರ ಸಾಮೂಹಿಕವಾಗಿ ವರ್ಗಾವಣೆಗೊಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವರ್ಗಾವಣೆಗೊಂಡವರ ವಿವರ ಹೀಗಿದೆ

ಎಡಿಜಿಪಿಗಳಾದ ಪಿ.ಎಸ್‌.ಸಂಧು- ಐಎಸ್‌ಡಿ, ಟಿ.ಸುನೀಲ್‌ ಕುಮಾರ್‌- ಎಸಿಬಿ, ಸಿ.ಎಚ್‌.ಪ್ರತಾಪ್‌ ರೆಡ್ಡಿ- ಪೊಲೀಸ್‌ ಆಧುನೀಕರಣ ವಿಭಾಗ, ಐಜಿಪಿಗಳಾದ ಸೀಮಂತ್‌ ಕುಮಾರ್‌ ಸಿಂಗ್‌- ಪಶ್ಚಿಮ ವಲಯ, ಪಿ.ಹರಿಶೇಖರನ್‌- ತರಬೇತಿ, ಸೌಮೇಂದು ಮುಖರ್ಜಿ- ಬೆಂಗಳೂರು ನಗರ ಹೆಚ್ಚುವರಿ ಆಯುಕ್ತ (ಪಶ್ಚಿಮ), ಎಸ್‌.ರವಿ- ಐಎಸ್‌ಡಿ, ಡಿಐಜಿಗಳಾದ ಪವಾರ್‌ ಪ್ರವೀಣ್‌ ಮಧುಕರ್‌- ಆಡಳಿತ ಡಿಜಿಪಿ ಕಚೇರಿ, ಕೆ.ಟಿ.ಬಾಲಕೃಷ್ಣ- ತರಬೇತಿ, ಡಾ.ಚಂದ್ರಗುಪ್ತ- ಮೈಸೂರು ಆಯುಕ್ತ, ಎಸ್ಪಿಗಳಾದ ಅನುಪಮ್‌ ಅಗರ್‌ವಾಲ್‌- ವಿಜಯಪುರ, ಡಾ.ರಾಮ್‌ ನಿವಾಸ್‌ ಸಪೆಟ್‌-ಎಸಿಬಿ, ಪಾಟೀಲ್‌ ವಿನಾಯಕ್‌ ವಸಂತರಾವ್‌- ಎಫ್‌ಎಸ್‌ಎಲ್‌, ನಿಕ್ಕಂ ಪ್ರಕಾಶ್‌ ಅಮೃತ್‌- ಗುಪ್ತದಳ, ಡಾ.ಕೆ.ಅರುಣ್‌- ಬಿಎಂಟಿಸಿ, ಡಿ.ಎಲ್‌.ನಾಗೇಶ್‌ -ಬೀದರ್‌, ಆರ್‌.ಶ್ರೀನಿವಾಸ್‌ ಗೌಡ- ಹಾಸನ, ಎನ್‌.ಯತೀಶ್‌- ಗದಗ, ಪಿ.ಶ್ರೀಧರ್‌- ಗುಪ್ತದಳ, ಜಿನೇಂದ್ರ ಖಣಗಾವಿ- ಪೊಲೀಸ್‌ ತರಬೇತಿ ಶಾಲೆ ಚನ್ನಪಟ್ಟಣ, ಕೆ.ವಿ.ಜಗದೀಶ್‌- ಡಿಜಿಪಿ ಕಚೇರಿ, ನಾರಾಯಣ- ಬೆಂಗಳೂರು ಸಂಚಾರ (ಪೂರ್ವ) ಡಿಸಿಪಿ.