ಅದ್ಭುತ ಫಾರ್ಮ್ನಲ್ಲಿದ್ದರೂ ಲಂಕಾ ಟಿಕೆಟ್ ಮಿಸ್: ಯಾರಿಗೆಲ್ಲ ನಿರಾಸೆಯಾಗಿದೆ ಗೊತ್ತಾ..?
ಶ್ರೀಲಂಕಾ ಟೆಸ್ಟ್ ಸಿರೀಸ್ಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. ಆದರೆ ಐವರು ಪ್ರಮುಖ ಆಟಗಾರರು ಟೆಸ್ಟ್ ಟೀಮ್'ಗೆ ಸೆಲೆಕ್ಟ್ ಆಗಲು ವಿಫಲರಾಗಿದ್ದಾರೆ. ಅದ್ಭುತ ಆಟಗಾರರಾಗಿದ್ದರೂ ಅವರಿಗೆ ಆಡುವ ಅವಕಾಶ ಸಿಕ್ಕಿಲ್ಲ. ಹಾಗಾದರೆ ಲಂಕಾ ಫ್ಲೈಟ್ ಮಿಸ್ ಮಾಡಿಕೊಂಡವರು ಯಾರ್ಯಾರು? ಇಲ್ಲಿದೆ ವಿವರ.
ಮುಂಬೈ(ಜು.13): ಶ್ರೀಲಂಕಾ ಟೆಸ್ಟ್ ಸಿರೀಸ್ಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. ಆದರೆ ಐವರು ಪ್ರಮುಖ ಆಟಗಾರರು ಟೆಸ್ಟ್ ಟೀಮ್'ಗೆ ಸೆಲೆಕ್ಟ್ ಆಗಲು ವಿಫಲರಾಗಿದ್ದಾರೆ. ಅದ್ಭುತ ಆಟಗಾರರಾಗಿದ್ದರೂ ಅವರಿಗೆ ಆಡುವ ಅವಕಾಶ ಸಿಕ್ಕಿಲ್ಲ. ಹಾಗಾದರೆ ಲಂಕಾ ಫ್ಲೈಟ್ ಮಿಸ್ ಮಾಡಿಕೊಂಡವರು ಯಾರ್ಯಾರು? ಇಲ್ಲಿದೆ ವಿವರ.
ಕ್ರಿಕೆಟ್ನಲ್ಲಿ ಕೇವಲ ಪ್ರತಿಭೆ ಇದ್ದರೆ ಸಾಲದು. ಅದೃಷ್ಟವೂ ಇರಬೇಕು. ಶ್ರೀಲಂಕಾ ಟೂರ್ಗೆ ಸೆಲೆಕ್ಟ್ ಆಗಿರೂ ಭಾರತ ಟೆಸ್ಟ್ ತಂಡದಲ್ಲಿ ಇರುವವರೆಲ್ಲಾ ಅದ್ಭುತ ಆಟಗಾರರೇ. ಆದ್ರೆ ಅವರಷ್ಟೇ ಪ್ರತಿಭೆ ಇರುವ ಐವರು ಆಟಗಾರರು ಲಂಕಾ ಪ್ಲೈಟ್ ಮಿಸ್ ಮಾಡಿಕೊಂಡಿದ್ದಾರೆ. ಪ್ರತಿಭೆ ಇದ್ದರೂ ಅವರಿಗೆ ಅವಕಾಶ ಮಾತ್ರ ಸಿಕ್ಕಿಲ್ಲ. ಹೀಗಾಗಿ ಭಾರೀ ನಿರಾಸೆಯಾಗಿದ್ದಾರೆ.
ಲಂಕಾ ಫ್ಲೈಟ್ ಮಿಸ್ - ಶಿಖರ್ ಧವನ್
ಓಪನರ್ ಶಿಖರ್ ಧವನ್ ಕಳಪೆ ಫಾರ್ಮ್'ನಲ್ಲಿ ಇರುವ ಕಾರಣಕ್ಕೆ ಟೀಂ ಇಂಡಿಯಾದಿಂದ ಕಿಕೌಟ್ ಆಗಿದ್ದರು. ಆದರೆ ಕೆಎಲ್ ರಾಹುಲ್ ಇಂಜುರಿಯಾಗಿದ್ದರಿಂದ ಚಾಂಪಿಯನ್ಸ್ ಟ್ರೋಫಿಗೆ ಸೆಲೆಕ್ಟ್ ಆದರು. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್'ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರೂ ಅವರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಅಭಿನವ್ ಮುಕುಂದ್ ಬದಲು ಗಬ್ಬರ್ ಸಿಂಗ್'ಗೆ ಚಾನ್ಸ್ ಕೊಡಬೇಕಿತ್ತು ಎನ್ನುವ ಮಾತು ಕೇಳಿ ಬರುತ್ತಿದೆ.
ಲಂಕಾ ಫ್ಲೈಟ್ ಮಿಸ್ - ಕರುಣ್ ನಾಯರ್
ಟೆಸ್ಟ್ ಕ್ರಿಕೆಟ್'ನಲ್ಲಿ ಭಾರತದ ಪರ ತ್ರಿಶತಕ ಬಾರಿಸಿದ 2ನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿರುವುದು ಕನ್ನಡಿಗ ಕರುಣ್ ನಾಯರ್. ಆದರೆ ತ್ರಿವಿಕ್ರಮನಾದ ಬಳಿಕ ಅವರೆಕೋ ಕಳಪೆ ಫಾರ್ಮ್'ನಿಂದ ಬಳಲುತ್ತಿದ್ದಾರೆ. ಆಸ್ಟ್ರೇಲಿಯಾ ಸಿರೀಸ್'ನಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ. ಐಪಿಎಲ್'ನಲ್ಲೂ ಮುಗ್ಗರಿಸಿದರು. ಹೀಗಾಗಿ ಅವರನ್ನು ಡ್ರಾಪ್ ಮಾಡಿ ರೋಹಿತ್ ಶರ್ಮಾಗೆ ಚಾನ್ಸ್ ಕೊಡಲಾಗಿದೆ. ರೋಹಿತ್ಗೆ ಹೋಲಿಸಿದರೆ, ಕರುಣ್'ಗೆ ಚಾನ್ಸ್ ಕೊಡಬೇಕಿತ್ತು.
ಲಂಕಾ ಫ್ಲೈಟ್ ಮಿಸ್ - ಶ್ರೇಯಸ್ ಅಯ್ಯರ್
ಮಿಡ್ಲ್ ಆರ್ಡರ್ ಸ್ಥಾನಕ್ಕೆ ಮುಂಬೈನ ಶ್ರೇಯಸ್ ಅಯ್ಯರ್ ಸಹ ರೇಸ್'ನಲ್ಲಿದ್ದರು. ಕರುಣ್ ನಾಯರ್ ಬದಲಿಗೆ ಅವರೇ ಆಯ್ಕೆಯಾಗ್ತಾರೆ ಎನ್ನುವ ನಿರೀಕ್ಷೆಗಳಿದ್ದವು. ಆದರೆ ರೋಹಿತ್ ಶರ್ಮಾಗೆ ಚಾನ್ಸ್ ಕೊಡಲಾಯ್ತು. ರೋಹಿತ್ ಮತ್ತು ಕರುಣ್ಗೆ ಹೋಲಿಸಿದ್ರೆ ಶ್ರೇಯಸ್ ಅಯ್ಯರ್ ಅದ್ಭುತ ಫಾರ್ಮ್ನಲ್ಲಿದ್ದರು. ಆಸ್ಟ್ರೇಲಿಯಾ ವಿರುದ್ಧ ಕೊನೆ ಟೆಸ್ಟ್ಗೂ ಸೆಲೆಕ್ಟ್ ಆಗಿದ್ದರು. ಡೊಮೆಸ್ಟಿಕ್'ನಲ್ಲಿ ರನ್ ಕೊಳ್ಳೆ ಹೊಡೆದಿದ್ದಾರೆ. ಅವರಿಗೂ ನಿರಾಸೆಯಾಗಿದೆ.
ಲಂಕಾ ಫ್ಲೈಟ್ ಮಿಸ್ - ಅಮಿತ್ ಮಿಶ್ರಾ
ಅನಿಲ್ ಕುಂಬ್ಳೆ ಆಡುವಾಗ್ಲೇ ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ಅಮಿತ್ ಮಿಶ್ರಾ, ಆಡಿರುವುದು ಕೆಲವೇ ಕೆಲ ಟೆಸ್ಟ್ಗಳನ್ನ ಮಾತ್ರ. ಯಾರಾದರೂ ಗಾಯಾಳುವಾದರೆ ಮಾತ್ರ ಅವರಿಗೆ ಚಾನ್ಸ್ ನೀಡಲಾಗುತ್ತದೆ. ಆದರೆ ಸಿಕ್ಕ ಅವಕಾಶದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೂ ಅವರಿಗೆ ಲಂಕಾ ಪ್ಲೈಟ್ ಮಿಸ್ ಆಗಿದೆ. ಮಿಶ್ರಾ ಸ್ಥಾನಕ್ಕೆ ಕುಲ್ದೀಪ್ ಯಾದವ್ ಕುತ್ತು ತಂದಿದ್ದಾರೆ. ವೆಸ್ಟ್ ಇಂಡೀಸ್'ನಲ್ಲಿ ಪ್ರದರ್ಶನದಿಂದ ಕುಲ್ದೀಪ್ ಸೆಲೆಕ್ಟ್ ಆದ್ರೆ ಅಮಿತ್ ಕಿಕೌಟ್ ಆಗಿದ್ದಾರೆ.
ಲಂಕಾ ಫ್ಲೈಟ್ ಮಿಸ್ - ಜಯಂತ್ ಯಾದವ್
ಟೀಂ ಇಂಡಿಯಾ ಕಳೆದ ವರ್ಷ ತವರಿನಲ್ಲಿ ಟೆಸ್ಟ್ ಸರಣಿ ಗೆಲ್ಲಲು ಮೂವರು ಸ್ಪಿನ್ನರ್ಸ್ ಕಾರಣ. ಅದರಲ್ಲಿ ಜಯಂತ್ ಯಾದವ್ ಸಹ ಒಬ್ಬರು. ಆಲ್ರೌಂಡ್ ಆಟಗಾರರಾಗಿರುವ ಜಯಂತ್, ಸ್ಪಿನ್ ಜೊತೆ ಬ್ಯಾಟಿಂಗ್ನಲ್ಲೂ ಕಮಾಲ್ ಮಾಡಿದ್ದಾರೆ. ಆದ್ರೆ ಅವರ ಸ್ಥಾನಕ್ಕೂ ಕುತ್ತು ತಂದಿದ್ದು ಅದೇ ಕುಲ್ದೀಪ್ ಯಾದವ್. ಅಮಿತ್ ಮಿಶ್ರಾ ಮತ್ತು ಜಯಂತ್ ಯಾದವ್ ಅವರನ್ನ ಓವರ್ಟೇಕ್ ಮಾಡಿ ಸ್ಥಾನ ಗಿಟ್ಟಿಸಿಕೊಂಡ್ರು ಕುಲ್ದೀಪ್. ಜಯಂತ್ ನಿರಾಸೆ ಅನುಭವಿಸಿದ್ರು.
ಈ ಐವರು ಆಟಗಾರರು ಆಯ್ಕೆ ಲಿಸ್ಟ್ನಲ್ಲಿದ್ದಾರೆ. ಯಾರಾದರೂ ಇಂಜುರಿಯಾದರೆ ಇವರಿಗೆ ಲಂಕಾ ಪ್ಲೈಟ್ ಟಿಕೆಟ್ ಸಿಗಲಿದೆ. ಅದಕ್ಕಾಗಿ ಇವರು ಕಾಯುತ್ತಿದ್ದಾರೆ. ಬ್ಯಾಡ್ ಲಕ್ ಪ್ಲೇಯರ್ಸ್.