ಶ್ರೀಮಂತ ಕ್ರಿಕೆಟ್​​ ಸಂಸ್ಥೆ ಎಂದೇ ಕರೆಸಿಕೊಳ್ಳುತ್ತಿದ್ದ ಬಿಸಿಸಿಐ ಈಗ ದಿಕ್ಕಪಾಲಾಗಿದೆ. ಇದರ ಬಿಸಿ ಈಗ ಭಾರತ ಜೂನಿಯರ್ಸ್​​ ತಂಡಕ್ಕೂ ತಟ್ಟಿದೆ.

ನವದೆಹಲಿ(ಫೆ.09): ಶ್ರೀಮಂತ ಕ್ರಿಕೆಟ್​​ ಸಂಸ್ಥೆ ಎಂದೇ ಕರೆಸಿಕೊಳ್ಳುತ್ತಿದ್ದ ಬಿಸಿಸಿಐ ಈಗ ದಿಕ್ಕಪಾಲಾಗಿದೆ. ಇದರ ಬಿಸಿ ಈಗ ಭಾರತ ಜೂನಿಯರ್ಸ್​​ ತಂಡಕ್ಕೂ ತಟ್ಟಿದೆ.

ಸದ್ಯ ಇಂಗ್ಲೆಂಡ್​​ ಅಂಡರ್​​ 19 ವಿರುದ್ಧ ಭಾರತದ ಜೂನಿಯರ್ಸ್​​ ಏಕದಿನ ಸರಣಿಯಲ್ಲಿ ಪಾಲ್ಗೊಂಡಿದೆ. ಈ ತಂಡವನ್ನು ಭಾರತದ ಗೋಡೆ ರಾಹುಲ್​ ದ್ರಾವಿಡ್​​​ ಕೋಚ್​ ಮಾಡುತ್ತಿದ್ದಾರೆ. ಆದರೆ ಅಂಡರ್​​ 19 ಆಟಗಾರರಿಗೆ ಮತ್ತು ಕೋಚ್​​'ಗೆ ಸಿಗಬೇಕದ ದಿನಭತ್ಯ ಇದುವರೆಗೂ ಸಿಕ್ಕಿಲ್ಲ. ಇದರಿಂದ ದ್ರಾವಿಡ್​​ ಸೇರಿದಂತೆ ಆಟಗಾರರೂ ತಮ್ಮ ದಿನನಿತ್ಯದ ಖರ್ಚಿಗಾಗಿ ಪರದಾಡುತ್ತಿದ್ದಾರೆ. ಜೊತೆಗೆ ಊಟಕ್ಕೂ ಪರದಾಡುತ್ತಿದ್ದಾರೆ.

ಅಜಯ್​​​ ಶಿರ್ಕೆ ರವರನ್ನು ಏಕಾಏಕಿ ವಜಾಗೊಳ್ಸಿದ್ರಿಂದ ಕೊಂಚ ಎಡವಟ್ಟಾಗಿದೆ. ಅದನ್ನು ಸರಿಪಡಿಸುತ್ತೇವೆ ಎಂದು ಇದಕ್ಕೆ ಬಿಸಿಸಿಐ ತಿಳಿಸಿದೆ.