Asianet Suvarna News Asianet Suvarna News

ಮುಂಬೈ ತೊರೆದು ಪುದುಚೇರಿ ಸೇರಿಕೊಂಡ ಟೀಂ ಇಂಡಿಯಾ ಕ್ರಿಕೆಟಿಗ!

ಆತ ಟೀಂ ಇಂಡಿಯಾ ಪರ ಮಿಂಚಿದ ಕ್ರಿಕೆಟಿಗ, ಮುಂಬೈ ರಣಜಿ ತಂಡವನ್ನ ಮುನ್ನಡೆಸಿದ ನಾಯಕ. ಆಲ್ರೌಂಡರ್ ಕ್ರಿಕೆಟಿಗನಾಗಿ ಅದ್ಬುತ ಪ್ರದರ್ಶನ ನೀಡಿದ ಸ್ಟಾರ್ ಕ್ರಿಕೆಟಿಗ ಇದೀಗ 20 ವರ್ಷಗಳಿಂದ ಆಡುತ್ತಿದ್ದ ಮುಂಬೈ ತಂಡವನ್ನ ತೊರೆದು ಹೊಸ ತಂಡ ಸೇರಿಕೊಳ್ಳುತ್ತಿದ್ದಾರೆ. ಹಾಗಾದರೆ ಹೊಸ ತಂಡ ಸೇರಿಕೊಳ್ಳುತ್ತಿರುವ ಆ ಕ್ರಿಕೆಟಿಗ ಯಾರು? ಇಲ್ಲಿದೆ.

Team india cricketer shift from Mumbai to puducherry
Author
Bengaluru, First Published Aug 20, 2018, 4:50 PM IST

ಮುಂಬೈ(ಆ.20): ಮುಂಬೈ ರಣಜಿ ಕ್ರಿಕೆಟ್ ತಂಡದ ಆಲ್ರೌಂಡರ್ ಆಗಿ, ನಾಯಕನಾಗಿ ಅದ್ಬುತ ಕೊಡುಗೆ ನೀಡಿದ ಕ್ರಿಕೆಟಿಗ. ಟೀಂ ಇಂಡಿಯಾ ಪರ ಏಕದಿನ ಪಂದ್ಯ ಆಡಿದ ಮುಂಬೈ ಮೂಲದ ಅಭಿಷೇಕ್ ನಾಯರ್ ಇದೀಗ ಮುಂಬೈ ತಂಡ ತೊರೆದು ನೂತನ ಪುದುಚೇರಿ ತಂಡ ಸೇರಿಕೊಂಡಿದ್ದಾರೆ. 

ಈ ಬಾರಿಯ ರಣಜಿ ಟೂರ್ನಿಗೆ ಪುದುಚೇರಿ ತಂಡ ಹೊಸದಾಗಿ ಸೇರ್ಪಡೆಗೊಂಡಿದೆ. ಮುಂಬೈ ತಂಡದಲ್ಲಿ ಅವಕಾಶದ ಕೊರತೆಯಿಂದ ಅಭಿಷೇಕ್ ನಾಯರ್ ಇದೀಗ ಪುದುಚೇರಿ  ತಂಡದ ಪರ ಕಣಕ್ಕಿಳಿಯಲಿದ್ದಾರೆ.

ವಿಶೇಷ ಅಂದರೆ ಅಭಿಷೇಕ್ ನಾಯರ್ 99 ಪ್ರಥಮ ದರ್ಜೆ ಪಂದ್ಯಗಳನ್ನ ಆಡಿದ್ದಾರೆ. ಇದೀಗ ಪುದುಚೇರಿ ಪರ ಕಣಕ್ಕಿಳಿಯಲಿರುವ ಅಭಿಷೇಕ್ ನಾಯರ್ 100ನೇ ಪಂದ್ಯ ಆಡುತ್ತಿರುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 

ಮುಂಬೈ ತೊರೆದು ಪುದುಚೇರಿ ತಂಡ ಸೇರಿಕೊಳ್ಳುತ್ತಿರುವ ಅಭಿಷೇಕ್ ನಾಯರ್ ಟ್ವಿಟರ್ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮುಂಬೈ ತಂಡದಲ್ಲಿ ಸಹಕರಿಸಿದ, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

 

 

ಅಭಿಷೇಕ್ ನಾಯರ್ ಟ್ವೀಟ್‌ಗೆ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.  ನೂತನ ತಂಡ ಸೇರಿಕೊಳ್ಳುತ್ತಿರುವ ನಾಯರ್‌ಗೆ ಶುಭಾಶಯ ಹೇಳಿದ್ದಾರೆ.


 

Follow Us:
Download App:
  • android
  • ios