‘ನಾನು ಹೆಚ್ಚಾಗಿ ತಪ್ಪು ಮಾಡಿಲ್ಲ. ಆದಕಾರಣ ಅವಕಾಶಗಳು ನನ್ನ ಮನೆ ಬಾಗಿಲಿಗೆ ಹುಡುಕಿಕೊಂಡು ಬರಲಿವೆ ಎನ್ನುವ ನಂಬಿಕೆ ಇದೆ. ನನಗೆ ಅವಕಾಶ ಸಿಕ್ಕಾಗ, ಅದನ್ನು ಸದುಪಯೋಗ ಪಡಿಸಿಕೊಳ್ಳಲಿದ್ದೇನೆ’

ಚೆನ್ನೈ(ಅ.10): ಅವಕಾಶಗಳು ನನ್ನ ಮನೆ ಬಾಗಿಲಿಗೆ ಹುಡುಕಿಕೊಂಡು ಬರಲಿವೆ ಎಂದು ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಭರವಸೆ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಲ್ಲಿ ಅಶ್ವಿನ್'ಗೆ ಸ್ಥಾನ ನೀಡಲಾಗಿಲ್ಲ. ಅಲ್ಲದೇ ಅವರ ಬದಲಿಗೆ ತಂಡ ಕೂಡಿಕೊಂಡಿರುವ ಕುಲ್ದೀಪ್ ಯಾದವ್, ಯುಜುವೇಂದ್ರ ಚಾಹಲ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದು ಅಶ್ವಿನ್‌'ರ ಭವಿಷ್ಯದ ಕುರಿತು ಪ್ರಶ್ನೆ ಉದ್ಭವಿಸಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅಶ್ವಿನ್, ‘ನಾನು ಹೆಚ್ಚಾಗಿ ತಪ್ಪು ಮಾಡಿಲ್ಲ. ಆದಕಾರಣ ಅವಕಾಶಗಳು ನನ್ನ ಮನೆ ಬಾಗಿಲಿಗೆ ಹುಡುಕಿಕೊಂಡು ಬರಲಿವೆ ಎನ್ನುವ ನಂಬಿಕೆ ಇದೆ. ನನಗೆ ಅವಕಾಶ ಸಿಕ್ಕಾಗ, ಅದನ್ನು ಸದುಪಯೋಗ ಪಡಿಸಿಕೊಳ್ಳಲಿದ್ದೇನೆ’ ಎಂದಿದ್ದಾರೆ.