ಸಚಿನ್ ಟ್ವೀಟ್ ವಿರುದ್ಧ ಹರಿಹಾಯ್ದ ಕರ್ಮಾಕರ್..!
ಜೋಯ್'ದೀಪ್ 2012ರ ಲಂಡನ್ ಒಲಿಂಪಿಕ್'ನಲ್ಲಿ ಶೂಟಿಂಗ್ ವಿಭಾಗದಲ್ಲಿ ಕೂದಲೆಳೆಯಂತರದಲ್ಲಿ ಕಂಚಿನ ಪದಕ ವಂಚಿತರಾಗಿದ್ದರು.
ಬೆಂಗಳೂರು(ಜು.11): ನಿನ್ನೆಯಷ್ಟೇ ಅಮರನಾಥ ಯಾತ್ರಿಕರ ಮೇಲೆ ಭಯೋತ್ಫಾದಕರು ನಡೆಸಿದ ಅಮಾನವೀಯ ದಾಳಿಯಲ್ಲಿ ಏಳು ಜನ ಮೃತಪಟ್ಟು ಡಜನ್'ಗೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಉಗ್ರರ ಈ ದಾಳಿಯನ್ನು ಇಡೀ ದೇಶವೇ ಒಕ್ಕೋರಿನಿಂದ ಖಂಡಿಸಿದ್ದು ಮಾತ್ರವಲ್ಲದೇ, ಮೃತ ಯಾತ್ರಿಕ ಕುಟುಂಬದವರ ಜೊತೆ ನಾವಿದ್ದೇವೆ ಎಂಬಂತಹ ಸಾಂತ್ವನದ ಮಾತುಗಳನ್ನು ಆಡಿದ್ದಾರೆ.
ಇದೇವೇಳೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಮರನಾಥ ಯಾತ್ರೀಕರ ಮೇಲಿನ ದಾಳಿಯನ್ನು ಖಂಡಿಸಿದ್ದು, ಮೃತ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ಕುಟುಂಬಕ್ಕೆ ದೇವರು ನೀಡಲಿ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು.
Deeply disturbed by the terror attack on #AmarnathYatra pilgrims. Thoughts and prayers go out to all the victims and their families.
— sachin tendulkar (@sachin_rt) 10 July 2017
ಈ ಟ್ವೀಟ್'ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಒಲಿಂಪಿಯನ್ ಶೂಟರ್ ಜೋಯ್'ದೀಪ್ ಕರ್ಮಾಕರ್, ಎಷ್ಟು ವ್ಯಾಕರಣಬದ್ಧವಾಗಿ ಟ್ವೀಟ್ ಮಾಡಿದ್ದೀರ... ನೀವು ಭಾರತ ರತ್ನ ಪಡೆದಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ರೀಟ್ವೀಟ್ ಮಾಡಿದ್ದಾರೆ.
Deeply disturbed by the terror attack on #AmarnathYatra pilgrims. Thoughts and prayers go out to all the victims and their families.
— sachin tendulkar (@sachin_rt) 10 July 2017
ಜೋಯ್'ದೀಪ್ 2012ರ ಲಂಡನ್ ಒಲಿಂಪಿಕ್'ನಲ್ಲಿ ಶೂಟಿಂಗ್ ವಿಭಾಗದಲ್ಲಿ ಕೂದಲೆಳೆಯಂತರದಲ್ಲಿ ಕಂಚಿನ ಪದಕ ವಂಚಿತರಾಗಿದ್ದರು.