ಮಹೇಶ್ ಭೂಪತಿ ಡೇವೀಸ್ ಕಪ್'ನ ನಾಯಕ
ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಡೆವೀಸ್ ಕಪ್ ಟಿನಿಸ್ ಟೂರ್ನಿಯ ಏಷ್ಯಾ ಒಸಿಯಾನಿಕ್ ವಿಭಾಗದ ನ್ಯೂಜಿಲ್ಯಾಂಡ್ ವಿರುದ್ಧದ ಟೈ ನಂತರ ಮಹೇಶ್ ಭೂಪತಿ ಭಾರತ ತಂಡದ ನಾಯಕನ್ನಾಗಿ ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ ನಿರ್ಧಾರಿಸಿದೆ.
ಮುಂಬೈ (ಡಿ. 23): ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಡೆವೀಸ್ ಕಪ್ ಟಿನಿಸ್ ಟೂರ್ನಿಯ ಏಷ್ಯಾ ಒಸಿಯಾನಿಕ್ ವಿಭಾಗದ ನ್ಯೂಜಿಲ್ಯಾಂಡ್ ವಿರುದ್ಧದ ಟೈ ನಂತರ ಮಹೇಶ್ ಭೂಪತಿ ಭಾರತ ತಂಡದ ನಾಯಕನ್ನಾಗಿ ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ ನಿರ್ಧಾರಿಸಿದೆ.
ಸದ್ಯ ನಾಯಕನ್ನಾಗಿರುವ ಆನಂದ್ ಅಮೃತ್ರಾಜ್ರನ್ನ ಫೆಬ್ರವರಿಯ ನ್ಯೂಜಿಲೆಂಡ್ ವಿರುದ್ಧದ ಟೈವರೆಗೆ ಮುಂದುವರೆಸಲು ಅಸೋಸಿಯೇಷನ್ ನಿರ್ಧರಿಸಿದೆ. ಆನಂದ್ ಅಮೃತ್ರಾಜ್ ನಾಯಕನ್ನಾಗಿದ್ದಾಗ ತಂಡದಲ್ಲಿ ಶಿಸ್ತು ಇರದಿದ್ದನ್ನ ಮನಗಂಡ ಭಾರತ ಟೆನಿಸ್ ಅಸೋಸಿಯೇಷನ್ ನಿನ್ನೆ ದೆಹಲಿಯಲ್ಲಿ ಸಭೆ ಸೇರಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಮಹೇಶ್ ಭೂಪತಿ ಫೆಬ್ರವರಿ ನಂತರ ಡೆವೀಸ್ ಕಪ್ನ ಭಾರತದ ನಾಯಕನ್ನಾಗಿ ಅಧಿಕಾರ ಸ್ವಿಕರಿಸಲಿದ್ದಾರೆ.