Asianet Suvarna News Asianet Suvarna News

ಪ್ರವಾಹಕ್ಕೆ ಸಿಲುಕಿದ ಪ್ರಾಣಿಗಳ ನೆರವಿಗೆ ಧಾವಿಸಿದ ಕೊಹ್ಲಿ-ಅನುಷ್ಕಾ

ಕೇರಳ ಸಂತ್ರಸ್ತರಿಗೆ ಟೀಂ ಇಂಡಿಯಾ ಗೆಲುವನ್ನ ಅರ್ಪಿಸಿದ ನಾಯಕ ವಿರಾಟ್ ಕೊಹ್ಲಿ ಇದೀಗ ಪತ್ನಿ ಅನುಷ್ಕಾ ಶರ್ಮಾ ಜೊತೆಗೂಡಿ ಪ್ರವಾಹಕ್ಕೆ ಸಿಲುಕಿದ ಪ್ರಾಣಿ ಪಕ್ಷಿಗಳ ರಕ್ಷಣಗೆ ಮುಂದಾಗಿದ್ದಾರೆ.
 

Kohli and anushka sharma helps flood affected animals
Author
Bengaluru, First Published Aug 23, 2018, 9:26 PM IST

ನಾಟಿಂಗ್‌ಹ್ಯಾಮ್(ಆ.23): ಪ್ರವಾಹಕ್ಕೆ ಸಿಲುಕಿ ಕೇರಳ ತತ್ತರಿಸಿ ಹೋಗಿದೆ. ಇದೀಗ ಕೇರಳ ಮತ್ತೆ ಬದುಕು ಕಟ್ಟಿಕೊಳ್ಳಲು ತಯಾರಿ ನಡೆಸುತ್ತಿದೆ. ಕೇರಳ ಸಹಜ ಸ್ಥಿತಿಗೆ ಮರಳು ಇನ್ನು ಕೆಲ ತಿಂಗಳುಗಳೇ ಬೇಕಾಗಿದೆ. ಕೇರಳ ಪುನರುಜ್ಜೀವನಕ್ಕೆ ಇದೀಗ ಎಲ್ಲಡೆಗಳಿಂದ ನೆರವು ಹರಿದು ಬರುತ್ತಿದೆ.

ಪ್ರವಾಹದಲ್ಲಿ ಸಿಲುಕಿದ ಜನರಿಗೆ ಆಹಾರ, ಬಟ್ಟೆ, ಕುಡಿಯುವ ನೀರು ಸೇರಿದಂತೆ ಬಹುತೇಕ ಸಾಮಾಗ್ರಿಗಳು ಇದೀಗ ಕೇರಳ ತಲುಪಿದೆ. ಇದರ ಜೊತೆಗೆ ಸಿಗುತ್ತಿರೋ ಆರ್ಥಿಕ ನೆರವು ಕೂಡ ಕೇರಳಗೆ ಸಹಕಾರಿಯಾಗಿದೆ. ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕ ಶರ್ಮಾ ಪ್ರವಾಹಕ್ಕೆ ಸಿಲುಕಿದ ಪ್ರಾಣಿಗಳ ನೆರವಿಗೆ ಧಾವಿಸಿದ್ದಾರೆ.

ಪ್ರವಾಹದಲ್ಲಿ ಸಿಲುಕಿ ಗಾಯಗೊಂಡ ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಕೊಹ್ಲಿ ಹಾಗೂ ಅನುಷ್ಕಾ ಮುಂದಾಗಿದ್ದಾರೆ. ನಾಯಿ, ದನ-ಕರುಗಳು ಸೇರಿದಂತೆ ಪ್ರಾಣಿ ಪಕ್ಷಿಗಳು ಪ್ರವಾಹದಿಂದ ನಲುಗಿ ಹೋಗಿದೆ. ಹೀಗಾಗಿ ಗಾಯಗೊಂಡ, ಅಸ್ವಸ್ಥಗೊಂಡಿರುವ ಪ್ರಾಣಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಅವುಗಳಿಗೆ ಆಹಾರ ಒದಗಿಸಲು ವಿರುಷ್ಕಾ ಜೋಡಿ ಎಲ್ಲಾ ತಯಾರಿ ಮಾಡಿಕೊಂಡಿದೆ.

ಸಾಕು ಪ್ರಾಣಿಗಳ ಜೊತೆಗೆ ವನ್ಯ ಮೃಗಳು ಕೂಡ ಅಸ್ವಸ್ಥವಾಗಿದೆ. ಹೀಗಾಗಿ ಈ ಪ್ರಾಣಿಗಳಿಗೆ ಎಲ್ಲಾ ರೀತಿಯ ನೆರವು ನೀಡಲು ಕೊಹ್ಲಿ ಹಾಗೂ ಅನುಷ್ಕಾ ಕೇರಳದ ಎನ್‌ಜಿಓ ಜೊತೆ ಕೈಜೋಡಿಸಿದ್ದಾರೆ. ಪ್ರಾಣಿಗಳಿಗೆ ಬೇಕಾದ ಎಲ್ಲಾ ರೀತಿಯ ನೆರವಿಗೆ ಕೊಹ್ಲಿ ಹಾಗೂ ಅನುಷ್ಕಾ ಹಣ ನೀಡಿದ್ದಾರೆ. 

ಟೀಂ ಇಂಡಿಯಾ ಗೆಲುವನ್ನ ಕೇರಳ ಪ್ರವಾಹ ಸಂತ್ರಸ್ತರಿಗೆ ಅರ್ಪಿಸಿದ್ದದ ಕೊಹ್ಲಿ ಇದೀಗ ಪ್ರಾಣಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಈ ಮೂಲಕ ವಿರುಷ್ಕಾ ಜೋಡಿ ಮಹತ್ ಕಾರ್ಯಕ್ಕೆ ಕೈಜೋಡಿಸಿದೆ.

Follow Us:
Download App:
  • android
  • ios