Asianet Suvarna News Asianet Suvarna News

ಕಾರ್ಗಿಲ್ ವಿಜಯ ದಿವಸ್: ತ್ಯಾಗ, ಬಲಿದಾನಕ್ಕೆ ಕ್ರಿಕೆಟಿಗರ ಸಲ್ಯೂಟ್!

ದೇಶವೇ ಕಾರ್ಗಿಲ್ ವಿಜಯ್ ದಿವಸ್ ಆಚರಿಸುತ್ತಿದೆ. ಇಂದು(ಜುಲೈ 26,1999) ಬದ್ಧವೈರಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾರತ ವಿಜಯ ಪತಾಕೆ ಹಾರಿಸಿದ ದಿನ. ಇದೀಗ 20ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಭಾರತೀಯ ಸೈನಿಕರ ತ್ಯಾಗ, ಬಲಿದಾನವನ್ನು ಕೊಂಡಾಡಿದ್ದಾರೆ.

Kargil vijay diwas Team India cricketers tribute Indian armed forces
Author
Bengaluru, First Published Jul 26, 2019, 3:35 PM IST

ನವದೆಹಲಿ(ಜು.26): ಕಾರ್ಗಿಲ್ ವಿಜಯೋತ್ಸವಕ್ಕೆ ಇದೀಗ 20ನೇ ವರ್ಷದ  ಸಂಭ್ರಮ.  1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿ, ಟೈಗರ್ ಹಿಲ್‌ ಪರ್ವತದ ಮೇಲೆ ತ್ರಿವರ್ಣ ಧ್ವಜ ಹಾರಾಡಿಸಿದ ದಿನ. ಜುಲೈ 26 ರಂದು ಕಾರ್ಗಿಲ್ ಹೋರಾಟ ಅಂತ್ಯಗೊಂಡಿತ್ತು. ಈ ದಿನವನ್ನು ಪ್ರತಿ ವರ್ಷ ಭಾರತ ಕಾರ್ಗಿಲ್ ವಿಜಯ್ ದಿವಸ್ ಆಗಿ ಆಚರಿಸುತ್ತಿದೆ. ಭಾರತೀಯ ಸೈನಿಕರ ಕೆಚ್ಚೆದೆಯ ಹೋರಾಟ, ತ್ಯಾಗ, ಬಲಿದಾನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ. ಇದೀಗ 20ನೇ ವರ್ಷದ ಸಂಭ್ರಮಾಚರಣೆ ದಿನ, ಟೀಂ ಇಂಡಿಯಾ ಕ್ರಿಕೆಟಿಗರು ಭಾರತೀಯರ ಪರಾಕ್ರಮಕ್ಕೆ ಸಲ್ಯೂಟ್ ಅರ್ಪಿಸಿದ್ದಾರೆ.


 

Follow Us:
Download App:
  • android
  • ios