ಟೀಮ್​​​ ಇಂಡಿಯಾ ಬ್ಯಾಟಿಂಗ್​​​ನಲ್ಲಿ ವಿರಾಟ್​​​ ಕೊಹ್ಲಿಯನ್ನ ಹೆಚ್ಚು ನಂಬಿಕೊಂಡಿದೆ ಎಂಬ ಟೀಕೆಗಳಿಗೆ ನಾಯಕ ಎಂ.ಎಸ್ .ಧೋನಿ ಉತ್ತರಿಸಿದ್ದಾರೆ. 

ರಾಂಚಿ(ಅ.28): ಟೀಮ್​​​ ಇಂಡಿಯಾ ಬ್ಯಾಟಿಂಗ್​​​ನಲ್ಲಿ ವಿರಾಟ್​​​ ಕೊಹ್ಲಿಯನ್ನ ಹೆಚ್ಚು ನಂಬಿಕೊಂಡಿದೆ ಎಂಬ ಟೀಕೆಗಳಿಗೆ ನಾಯಕ ಎಂ.ಎಸ್ .ಧೋನಿ ಉತ್ತರಿಸಿದ್ದಾರೆ. 

ಟೀಮ್​​ ಇಂಡಿಯಾ ನಾಯಕ ಧೋನಿ ಈ ಆರೋಪವನ್ನು ನಿರಾಕರಿಸಿದ್ದರೆ. ತಂಡದಲ್ಲಿ ಹೆಚ್ಚು ಆಟಗಾರರು ಹೊಸಬರೇ ಆಗಿದ್ದರಿಂದ ಅವರಿನ್ನೂ ಕಲಿಯುತಿದ್ದಾರೆ. 

ಆದ್ದರಿಂದ ಮಧ್ಯಮ ಕ್ರಮಾಂಕದಲ್ಲಿ ವಿಫಲವಾಗುತಿರುವುದು. ಆದರೆ ಓಪನರ್​​​ಗಳಾದ ಕೆ.ಎಲ್. ರಾಹುಲ್​​​​ ಮತ್ತು ಶಿಖರ್​​ ಧವನ್​​​ ಗಾಯಾಳುವಾಗಿರೊದ್ರಿಂದ ಕೊಹ್ಲಿಯ ಜವಬ್ದಾರಿ ಕೊಂಚ ಮಟ್ಟಿಗೆ ಹೆಚ್ಚಿದೆ ಎಂದು ಧೋನಿ 4ನೇ ಪಂದ್ಯದ ನಂತರ ಸುದ್ದಿಗೊಷ್ಟಿಯಲ್ಲಿ ತಿಳಿಸಿದ್ದಾರೆ. 

ಇದೇ ಸಂಧರ್ಭದಲ್ಲಿ ಮಾತನಾಡಿದ ಧೋನಿ ​​5ನೇ ಪಂದ್ಯವನ್ನ ಗೆದ್ದು ಸರಣಿ ವಶಪಡಿಸಕೊಳ್ಳಲಿದೆ ಎಂದು ಧೋನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.​