Asianet Suvarna News Asianet Suvarna News

ಡೆಲ್ಲಿ ನಾಯಕತ್ವದಿಂದ ಕೆಳಗಿಳಿದ ಗಂಭೀರ್

ಕಳೆದ ಋತುವಿನ ವಿಜಯ್ ಹಜಾರೆ ಪಂದ್ಯಾವಳಿ ವೇಳೆ ಗಂಭೀರ್’ರನ್ನು ನಾಯಕತ್ವದಿಂದ ಕೆಳಗಿಳಿಸಿ ಯುವ ಕ್ರಿಕೆಟಿಗ ರಿಷಭ್ ಪಂತ್’ಗೆ ಪಟ್ಟ ಕಟ್ಟಲಾಗಿತ್ತು. ಈ ವೇಳೆ ಕೋಚ್ ಕೆ.ಪಿ. ಬಾಸ್ಕರ್ ಹಾಗೂ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿತ್ತು, ಅಲ್ಲದೇ ಗಂಭೀರ್ ಅವರನ್ನು 4 ಪಂದ್ಯಗಳ ಮಟ್ಟಿಗೆ ತಂಡದಿಂದ ಹೊರಗಿಡಲಾಗಿತ್ತು.

Gautam Gambhir makes way for Ishant Sharma as Delhi skipper youngsters in middle order

ನವದೆಹಲಿ(ಸೆ.23): ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್, ಡೆಲ್ಲಿ ರಣಜಿ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.

2016-17ನೇ ಸಾಲಿನ ಆವೃತ್ತಿಯ ರಣಜಿ ಟೂರ್ನಿಯಲ್ಲಿ ಡೆಲ್ಲಿ ತಂಡವನ್ನು ಅನುಭವಿ ಬೌಲರ್ ಇಶಾಂತ್ ಶರ್ಮಾ ಮುನ್ನಡೆಸಲಿದ್ದಾರೆ. ಕಳೆದ 4 ವರ್ಷಗಳ ಕಾಲ ಡೆಲ್ಲಿ ತಂಡವನ್ನು ಮುನ್ನಡೆಸಿದ್ದ ಗಂಭೀರ್, ಈ ಬಾರಿ ಕೇವಲ ಆಟಗಾರನಾಗಿ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.

ಕಳೆದ ಋತುವಿನ ವಿಜಯ್ ಹಜಾರೆ ಪಂದ್ಯಾವಳಿ ವೇಳೆ ಗಂಭೀರ್’ರನ್ನು ನಾಯಕತ್ವದಿಂದ ಕೆಳಗಿಳಿಸಿ ಯುವ ಕ್ರಿಕೆಟಿಗ ರಿಷಭ್ ಪಂತ್’ಗೆ ಪಟ್ಟ ಕಟ್ಟಲಾಗಿತ್ತು. ಈ ವೇಳೆ ಕೋಚ್ ಕೆ.ಪಿ. ಬಾಸ್ಕರ್ ಹಾಗೂ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿತ್ತು, ಅಲ್ಲದೇ ಗಂಭೀರ್ ಅವರನ್ನು 4 ಪಂದ್ಯಗಳ ಮಟ್ಟಿಗೆ ತಂಡದಿಂದ ಹೊರಗಿಡಲಾಗಿತ್ತು.   

Follow Us:
Download App:
  • android
  • ios