ನಾಳೆ 1.30ಕ್ಕೆ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೆ ಏಕದಿನ ಪಂದ್ಯ ನಡೆಯಲಿದೆ. ಟೀ ಇಂಡಿಯಾ ಈಗಾಗಲೇ 3-0 ಸರಣಿ ಜಯಿಸಿದೆ.

ಬೆಂಗಳೂರು(ಸೆ.27): ನಾಳೆ ಭಾರತ - ಆಸ್ಟ್ರೇಲಿಯಾ ಕ್ರಿಕೆಟ್ ಮ್ಯಾಚ್ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಸಾವಿರಾರು ಪೊಲೀಸರ ನಿಯೋಜಿಸಲಾಗಿದೆ. 3 ಡಿಸಿಪಿ, 11 ಎಸಿಪಿ, 37 ಇನ್ಸ್ಪೆಕ್ಟರ್, 84 ಸಬ್ ಇನ್ಸ್ಪೆಕ್ಟರ್, 1500 ಪೇದೆಗಳು, 6 ಕೆಎಸ್ಆರ್ ಪಿ ಮತ್ತು ಡಿಆರ್ ತುಕಡಿಗಳ ನಿಯೋಜಿಸಲಾಗಿದೆ . ಹೆಚ್ಚುವರಿಯಾಗಿ ಗರುಡ ಫೋರ್ಸ್ ಬಳಕೆ ಮಾಡಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ತಿಳಿಸಿದ್ದಾರೆ. ನಾಳೆ 1.30ಕ್ಕೆ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೆ ಏಕದಿನ ಪಂದ್ಯ ನಡೆಯಲಿದೆ. ಟೀ ಇಂಡಿಯಾ ಈಗಾಗಲೇ 3-0 ಸರಣಿ ಜಯಿಸಿದೆ.