‘‘ಧೋನಿ ಅನುಭವಿ ಆಟಗಾರ. ಅವರ ಸಲಹೆಗಳು ತಂಡಕ್ಕೆ ಅಗತ್ಯ''

ನವದೆಹಲಿ(ಮೇ.26): ಭಾರತ ತಂಡದ ಹಿರಿಯ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌, ತಮ್ಮನ್ನು ಚಾಂಪಿಯನ್ಸ್‌ ಟ್ರೋಫಿ ತಂಡದಿಂದ ಕೈಬಿಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ತಂಡದ ಆಯ್ಕೆಯಲ್ಲಿ ಧೋನಿಗಿರುವ ಸವಲತ್ತುಗಳು ನನಗೇಕಿಲ್ಲ ಎಂದು ಪ್ರಶ್ನಿ­ಸಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿ­ರುವ ಸಂದರ್ಶನದಲ್ಲಿ ಹರ್ಭಜನ್‌, ‘ತಂಡದ ಆಯ್ಕೆ ವಿಷಯ ಬಂದಾಗ ಧೋನಿಯ ಸಲಹೆಗಳನ್ನು ಪರಿಗಣಿಸ­ಲಾಗುತ್ತದೆ. ನಾನೂ 19 ವರ್ಷಗಳಿಂದ ಭಾರತೀಯ ಕ್ರಿಕೆಟ್‌'ನಲ್ಲಿ ಸಕ್ರಿಯನಾಗಿದ್ದೇನೆ. 2 ಬಾರಿ ವಿಶ್ವಕಪ್‌ ಗೆದ್ದ ತಂಡದಲ್ಲಿದ್ದೆ. ನನ್ನ ಸಲಹೆಯನ್ನೇಕೆ ಕೇಳುವುದಿಲ್ಲ. ಧೋನಿ ನಾಯಕರಾಗಿದ್ದವರು ನಿಜ. ಆದರೆ ನಾಯಕತ್ವದಿಂದ ಕೆಳಗಿಳಿದ ರೂ ಅವರ ಮಾತಿಗೆ ಮನ್ನಣೆ ಇದೆ ಎಂದಿದ್ದಾರೆ.

ನಾಯಕತ್ವದ ನಂತರ ತಂಡದಿಂದ ಕೆಳಗಿಳಿದ ಮೇಲೆ ಬಿಸಿಸಿಐನಲ್ಲಿ ಧೋನಿ ಪಾತ್ರವೇನು ಎನ್ನುವ ಪ್ರಶ್ನೆಗೆ ಈ ಮೊದಲು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ.ಪ್ರಸಾದ್‌ ‘‘ಧೋನಿ ಅನುಭವಿ ಆಟಗಾರ. ಅವರ ಸಲಹೆಗಳು ತಂಡಕ್ಕೆ ಅಗತ್ಯ'' ಎಂದಿದ್ದರು.

ಹರ್ಭಜನ್‌ ತಾವೂ ಅನುಭವಿ ಆಟಗಾರರಾಗಿದ್ದು ತಮಗೇಕೆ ಸಿಗಬೇಕಿರುವ ಗೌರವ ಸಿಗುತ್ತಿಲ್ಲ ಎಂದಿದ್ದಾರೆ.