ಬಯಲಾಯ್ತು ಟೀಂ ಇಂಡಿಯಾದ ಹಿಟ್'ಮ್ಯಾನ್ ಬಿಗ್ ಸೀಕ್ರೆಟ್
ಮೊನ್ನೆಯ ನ್ಯೂಜಿಲೆಂಡ್ ವಿರುದ್ಧದ ಸೋಲು ಟೀಂ ಇಂಡಿಯಾಗೆ ನುಂಗಲಾರದ ತುತ್ತಾಗಿದ್ರೂ ಪುಟಿದೇಳೋ ಕನಸು ಕಾಣ್ತಿದೆ. ಆದ್ರೆ ಮೊನ್ನೆಯ ಮ್ಯಾಚ್ನಿಂದ ನಾಯಕ ವಿರಾಟ್ ಕೊಹ್ಲಿ ಮತ್ತು ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ಕಾಡ್ತಿದ್ದ ಕೆಲ ಡೌಟ್ಗಳು ನಿವಾರಣೆಯಾಗಿದೆ. ಹಾಗಾದ್ರೆ ಯಾವೆಲ್ಲಾ ಡೌಟ್ಗಳಿಗೆ ಮೊದಲ ಮ್ಯಾಚ್ ಉತ್ತರ ನೀಡಿದೆ? ಇಲ್ಲಿದೆ ಉತ್ತರ
ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಹುಡುಗರ ಕೆಲ ಎಡವಟ್ಟುಗಳು ಭಾರತದ ಕ್ರಿಕೆಟ್ ಪ್ರೇಮಿಗಳನ್ನ ಬೇಸರದ ಕಡಲಿಗೆ ತಳ್ಳಿ ಬಿಟ್ಟಿತ್ತು. ಫೇವರೇಟ್ಸ್ ಎನ್ನಿಸಿಕೊಂಡಿದ್ದ ಟೀಂ ಇಂಡಿಯಾ ಮಕಾಡೆ ಮಲಗಿಬಿಡ್ತು. ಇದೊಂದು ಸೋಲು ಈಗ ಕೊಹ್ಲಿ ಆಂಡ್ ಟೀಂ ಅನ್ನ ವಿಲನ್'ಗಳನ್ನಾಗಿಸಿಬಿಡ್ತು. ಆದ್ರೆ ಮೊನ್ನೆಯ ಪಂದ್ಯದಿಂದ ಟೀಂ ಇಂಡಿಯಾ ನಾಯಕ ಕೊಹ್ಲಿ ಮತ್ತು ಅಭಿಮಾನಿಗಳಿಗೆ ಕಾಡ್ತಿದ್ದ ಕೆಲ ಡೌಟ್'ಗಳಿಗೆ ತೆರೆಬಿತ್ತು. ಕೆಲವು ಟೀಂ ಇಂಡಿಯಾ ವೀಕ್'ನೆಸ್'ಗಳು ಬಹಿರಂಗವಾಯ್ತು.
ಟೀಂ ಇಂಡಿಯಾದ ಹಿಟ್ನ್ಯಾನ್ ಸೀಕ್ರೆಟ್ ರಿವೀಲ್
ಲೆಫ್ಟ್ ಆರ್ಮ್ ಫಾಸ್ಟ್ ಬೌಲರ್ಸ್ ಅಂದ್ರೆ ಟೀಂ ಇಂಡಿಯಾ ಗಢಗಢ ನಡಗುತ್ತೆ ಅನ್ನೋದು ಹಳೆಯ ವಿಷ್ಯ. ಆದ್ರೆ ಇಡೀ ಟೀಂ ಇಂಡಿಯಾದಲ್ಲಿ ಲೆಫ್ಟಿಗಳಿಗೆ ಹೆಚ್ಚು ಹೆದರೋದು ಯಾರು ಅನ್ನೋದು ಗೊತ್ತಿರಲ್ಲಿಲ್ಲ ಈಗ ಅದಕ್ಕೆ ಉತ್ತರ ಸಿಕ್ಕಿದೆ. ಟೀಂ ಇಂಡಿಯಾದ ಹಿಟ್'ಮ್ಯಾನ್ ಅಂತ ಕರೆಯಿಸಿಕೊಂಡು ಶ್ರೇಷ್ಠ ಬ್ಯಾಟ್ಸ್ಮನ್ ಎಂದೆನಿಸಿರೋ ಆರಂಭಿಕ ಬ್ಯಾಟ್ಸ್'ಮನ್ ರೋಹಿತ್ ಶರ್ಮಾ.
ರೋಹಿತ್ ಕೇವಲ ನಿನ್ನೆ ಮಾತ್ರ ಎಡಗೈ ವೇಗಿ ಟ್ರೆಂಟ್ ಬೋಲ್ಟ್'ಗೆ ಔಟಾಗಿಲ್ಲ, ಎರಡು ವಾರದ ಹಿಂದೆಯಷ್ಟೇ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ಎಡಗೈ ವೇಗಿಗೆ ಔಟಾಗಿದ್ರು. ಅದಕ್ಕೂ ಮುನ್ನ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊಹಮ್ಮದ್ ಆಮಿರ್ ಎದುರು ತಲೆಬಗ್ಗಿಸಿ ನಿಂತಿದ್ರು. ಈ ವಿಷ್ಯ ಈಗ ಕನ್ಫರ್ಮ್ ಆಗಿದ್ದು ಶರ್ಮಾನ ಬಿಗ್ ಸೀಕ್ರೆಟ್ ರಿವೀಲ್ ಆಯ್ತು.
4ನೇ ಕ್ರಮಾಂಕಕ್ಕೆ ಜಾಧವ್ ಲಾಯಕ್ಕಿಲ್ಲ: ಶುರುವಾಯ್ತು ಕೇದರ್ನ ಕೌಂಟ್ ಡೌನ್
ಟೀಂ ಇಂಡಿಯಾಗೆ ಕಳೆದ 2 ವರ್ಷದಿಂದ ಕಾಡುತ್ತಿರುವ 4ನೇ ಕ್ರಮಾಂಕದ ಸಮಸ್ಯೆಗೆ ಇಂದಿಗೂ ಉತ್ತರ ಸಿಗ್ತಿಲ್ಲ. ಟೀಂ ಮ್ಯಾನೇಜ್'ಮೆಂಟ್ ಅಂತೂ ಮಾಡಿಬಹುದ್ದಾದ್ದುದನೆಲ್ಲಾ ಮಾಡಿ ಆಗಿದೆ. ಆದ್ರೆ ಲಾಸ್ಟ್ ಆಪ್ಷನ್ ಅಂತಿದ್ದ ಜಾಧವ್'ರನ್ನೂ ಕೂಡ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮತ್ತು ನಿನ್ನೆ ಸೇರಿ ಎರಡು ಬಾರಿ 4 ನೇ ಕ್ರಮಾಂಕಕ್ಕೆ ಬಡ್ತಿ ನೀಡ್ತು. ಆದ್ರೆ ಜಾಧವ್ ಕೂಡ ಫ್ಲಾಪ್ ಆದ್ರು. 4ನೇ ಕ್ರಮಾಂಕಕ್ಕೆ ಅವರು ಸೂಕ್ತರಲ್ಲ ಎನ್ನುವುದು ಖಚಿತವಾಗಿದೆ.
ಇದೊಂದೇ ಅಲ್ಲ ಜಾಧವ್'ರ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಕಾರಣ ಕಳೆದ 15 ಏಕದಿನ ಪಂದ್ಯಗಳಲ್ಲಿ ಜಾಧವ್ ಗಳಿಸಿರೋದು ಕೇವಲ 2 ಅರ್ಧಶತಕ. ಅಷ್ಟೇ ಅಲ್ಲ ಅಗತ್ಯವಿರುವ ಸಂಧರ್ಭದಲ್ಲಿ ಜಾಧವ್ ತಂಡಕ್ಕೆ ಕೈ ಕೊಡ್ತಾನೆ ಇದ್ದಾರೆ. ಇದು ಅವರ ಕೊನೆಗಾಲಕ್ಕೆ ನಾಂದಿಯಾಗಿದೆ ಅನ್ನೋದು ಈಗ ಸ್ಪಷ್ಠವಾಗಿದೆ.
ಭುವಿ ಈಗ ಬೌಲಿಂಗ್ ಆಲ್'ರೌಂಡರ್
ಮೊನ್ನೆಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಟೀಂ ಇಂಡಿಯಾದ ಭುವನೇಶ್ವರ್ ಕೂಮಾರ್'ಗೆ ಬೌಲಿಂಗ್ ಆಲ್'ರೌಂಡರ್ ಎನ್ನುವ ಪಟ್ಟ ತಂದುಕೊಡ್ತು. ಶ್ರೀಲಂಕಾ ಮತ್ತು ಆಸೀಸ್ ಸರಣಿಯಲ್ಲಿ ಭುವಿ ಬ್ಯಾಟಿಂಗ್ನಲ್ಲಿ ಗಮನ ಸೆಳದಿದ್ರೂ ಕೇವಲ 2 ಸರಣಿಯಿಂದ ಅವರ ಡೆಸಿಗನೇಷನ್ ಚೇಂಜ್ ಮಾಡೋದು ಅಸಮಂಜಸ. ಆದ್ರೆ ಯಾವಾಗ ನ್ಯೂಜಿಲೆಂಡ್ ವಿರುದ್ಧ ಭುವಿ ಕೊನೆಯ ಘಳಿಗೆಯಲ್ಲಿ ಅಬ್ಬರಿಸಿದ್ರೋ ಅವರು ಹಾರ್ದಿಕ್ ಪಾಂಡ್ಯನ ಜೊತೆ ಆಲ್ರೌಂಡರ್ ಲಿಸ್ಟ್ಗೆ ಸೇರ್ಪಡೆಯಾಗಿದ್ದಾರೆ.
ಟೀಂ ಇಂಡಿಯಾಗೆ ಈಗಲೂ ಧೋನಿಯೇ ನಾಯಕ
ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ಯಾರು ಅಂದ್ರೆ ಥಟ್ ಅಂತ ವಿರಾಟ್ ಕೊಹ್ಲಿ ಅಂತ ಹೇಳಿ ಬಳಿಕ ಧೋನಿ ಅವರಿಗೆ ಸಪೋರ್ಟ್ ಮಾಡ್ತಾರೆ ಅಷ್ಟೇ ಅಂತಿದ್ರು. ಆದ್ರೆ ಮೊನ್ನೆಯ ಪಂದ್ಯದ ನಂತರ ಎಲ್ರೂ ಈಗಲೂ ಧೋನಿಯೇ ನಾಯಕ ಅಂತಿದ್ದಾರೆ. ಪ್ರತೀ ಡಿಸಿಷೆನ್ ತಗೆದುಕೊಳ್ಳಬೇಕಾದ್ರೂ ನಾಯಕನೆನಿಸಿರೋ ಕೊಹ್ಲಿ ನೋಡೋದು ಮಹಿ ಮುಖವನ್ನ. ಅವರು ಹು ಅಂದ್ರೆ ಕೊಹ್ಲಿಯೂ ಹು ಅಂತಾರೆ. ಒಟ್ಟಾರೆಯಾಗಿ ಹೇಳಬೇಕಂದ್ರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮಹಿ ಈಗಲೂ ಟೀಂ ಇಂಡಿಯಾವನ್ನ ಕಂಟ್ರೋಲ್ ಮಾಡುತ್ತಿರೋದು ಸ್ಪಷ್ಟವಾಯ್ತ.
ಒಟ್ಟಿನಲ್ಲಿ ಒಂದೇ ಒಂದು ಮ್ಯಾಚ್ ಟೀಂ ಇಂಡಿಯಾವನ್ನ ಬೆತ್ತಲೆ ಮಾಡಿದೆ. ಯಾರ ಸ್ಟ್ರೆಂಥ್ ಎಷ್ಟು, ಯಾರು ತಂಡದಲ್ಲಿರಲು ನಾಲಾಯಕ್ಕು ಅನ್ನೋದೆಲ್ಲಾ ಒಂದು ಸೋಲು ಬಹಿರಂಗ ಪಡಿಸಿದೆ, ಒಂದೇ ಸೋಲಿಗೆ ಇಷ್ಟೆಲ್ಲಾ ಸತ್ಯಗಳು ಹೊರಬಂದ್ರೆ ಇನ್ನೇನಾದ್ರೂ ಸರಣಿ ಸೋತುಬಿಟ್ರೆ ದೇವರೇ ಗತಿ.