ಬೇಸಿಗೆ ರಜಾ ದಿನಗಳಾಗಿರುವುದರಿಂದ ಹಿಂದೂ ಪವಿತ್ರ ಕ್ಷೇತ್ರಗಳ ತೀರ್ಥಯಾತ್ರೆ ಚಾರ್ಧಾಮ್ ಯಾತ್ರೆಗೆ ಜನ ಭಾರಿ ಸಂಖ್ಯೆಯಲ್ಲಿ ಸೇರುತ್ತಿದ್ದು, ಯಾತ್ರಾರ್ಥಿಗಳ ನಿರ್ವಹಣೆ ಮಾಡುವುದೇ ಉತ್ತರಾಖಂಡ್ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರಾಖಂಡ್ ಪೊಲೀಸರು ಕನಿಷ್ಠ ಕೆಲ ದಿನಗಳ ಮಟ್ಟಿಗಾದರೂ ಈ ಚಾರ್ಧಾಮ್ ಯಾತ್ರೆಯನ್ನು ಮುಂದೂಡುವಂತೆ ಭಕ್ತರಿಗೆ ಮನವಿ ಮಾಡುತ್ತಿದ್ದಾರೆ.
Festivals May 12, 2024, 1:46 PM IST
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಕುಮಾರ್ ಸ್ನೇಹಿತರ ಭೇಟಿಗಾಗಿ ಏ.18ರ ರಾತ್ರಿ ದೊಮ್ಮ ಲೂರಿಗೆ ಹೋಗಿದ್ದ. ಈ ವೇಳೆ ಆಕಸ್ಮಿಕವಾಗಿ ಸಿಕ್ಕ ಆರೋಪಿ ಶ್ರೀಕಾಂತ್, ಸ್ನೇಹಿತರು ಮದ್ಯ ಸೇವಿಸಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ಶ್ರೀಕಾಂತ್, ಸತೀಶ್ ಕುಮಾರ್ ನಡುವೆ ಜಗಳವಾಗಿ ವಿಕೋಪಕ್ಕೆ ತಿರುಗಿದಾಗ ಕೋಪಗೊಂಡ ಶ್ರೀಕಾಂತ್, ಹಳೇ ದ್ವೇಷದ ವಿಚಾರ ಪ್ರಸ್ತಾಪಿಸಿ ಸತೀಶ್ ಕುಮಾರ್ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆಗೈದು ಪರಾರಿಯಾಗಿದ್ದ.
CRIME May 12, 2024, 12:33 PM IST
ಪ್ರಕಾಶ್ ನಗರದ ನಿವಾಸಿ ಆರ್.ವಿಠಲ್ ಅಲಿಯಾಸ್ ಪಾಂಡು ಬಂಧಿತನಾಗಿದ್ದು, ಹಣಕಾಸು ವಿಚಾರವಾಗಿ ತನ್ನ ಗೆಳೆಯ ದಿಲೀಪ್ನನ್ನು ಆತ ಕೊಲೆ ಮಾಡಿ ಪರಾರಿಯಾಗಿದ್ದ. ಈ ತನಿಖೆಗಿಳಿದ ಇನ್ಸೆಕ್ಟರ್ ಪೂಣಚ್ಚ ಹಾಗೂ ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ನೇತೃತ್ವದ ತಂಡವು ಆರೋಪಿಯನ್ನು ಪತ್ತೆ ಹಚ್ಚಿದೆ.
CRIME May 12, 2024, 12:03 PM IST
ನಗರದಲ್ಲಿ ಓಯೋ ರೂಮ್ಗಳನ್ನು ಓಯೋ ಹೊಟೇಲ್ಗಳನ್ನು ಬಂದ್ ಮಾಡಿಸಿದ್ದಕ್ಕೆ ಸಿಟ್ಟಿಗೆದ್ದ ಜೋಡಿಯೊಂದು ಪ್ರತಿಭಟನಾ ರೂಪವಾಗಿ ಬಿಜೆಪಿ ಶಾಸಕನ ಕಚೇರಿ ಮುಂದೆಯೇ ಪರಸ್ಪರ ಕಿಸ್ಸಿಂಗ್ನಲ್ಲಿ ತೊಡಗಿದ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.
India May 12, 2024, 9:54 AM IST
ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ರವರು ನಮ್ಮದಲ್ಲದ ತಪ್ಪಿಗೆ ನಮ್ಮನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ನಮಗೆ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಕಿರುಕುಳ ಮತ್ತು ಆನ್ಯಾಯವಾಗಿದೆ. ಅಮಾನತುಗೊಳಿಸಿ ಆರು ತಿಂಗಳು ಕಳೆದಿವೆ. ಅಮಾನತು ಆದೇಶ ಹಿಂಪಡೆದಿಲ್ಲ. ನಮಗೆ ನ್ಯಾಯ ಒದಗಿಸಬೇಕು. ನಮ್ಮ ಮೇಲಿನ ಆರೋಪದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಎಸ್ಪಿ ಡಿ.ಎಲ್.ನಾಗೇಶ್ ವಿರುದ್ಧ ಪೊಲೀಸ್ ಪೇದೆಗಳು ಆಕ್ರೋಶ ವ್ಯಕ್ತಪಡಿಸಿದರು.
Karnataka Districts May 12, 2024, 7:58 AM IST
ಚೈತ್ರಾ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಮೃತರ ಪತಿ ಶಿವಕುಮಾರ್ ಅವರು ಫಾರ್ಮ್ ಹೌಸ್ಗೆ ತೆರಳಿದ್ದರು. ಹೀಗಾಗಿ ಶುಕ್ರವಾರ ರಾತ್ರಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ. ಮನೆಯಲ್ಲಿ ಪತ್ತೆಯಾದ ಡೆತ್ನೋಟ್ನಲ್ಲಿ ತಮ್ಮ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದಿದ್ದಾರೆ.
CRIME May 12, 2024, 7:06 AM IST
ಹೆಂಡತಿ ಕೂಲಿ ಕೆಲಸಕ್ಕೆ ಹೊರಗಡೆ ಹೋದಾಗ ತನ್ನ 13 ವರ್ಷದ ಮಗಳ ಮೇಲೆ ತಂದೆ ಅತ್ಯಾಚಾರ ಮಾಡಿದ್ದಾನೆ ಎಂದು ಆತನ ಹೆಂಡತಿ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
CRIME May 12, 2024, 6:00 AM IST
ಪ್ರೀತಿ, ಪ್ರೇಮಲ್ಲಿ ಅಪ್ರಾಪ್ತ ಬಾಲಕಿ ಹಿಂದೆ ಬಿದ್ದವನು ಆಕೆಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದೇಕೆ ಎನ್ನುವ ವಿಷಯವೇ ಅಚ್ಚರಿ. ಬಾಲಕಿಯ ತಲೆ ಕಡಿದುಕೊಂಡು ಹೋದವನು ಒಂದು ದಿನವೆಲ್ಲಾ ಏನೇನು ಮಾಡಿದ ಎನ್ನುವುದನ್ನು ಕೇಳಿದರೆನೇ ನೀವು ಬೆಚ್ಚಿ ಬೀಳುತ್ತೀರ.
CRIME May 11, 2024, 9:58 PM IST
ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಉದ್ದೇಶಪೂರ್ವಕವಾಗಿ ಲಾಠಿಚಾರ್ಜ್ ನಡೆಸಿರುವ ಆರೋಪ ಕೇಳಿಬಂದಿರುವ ಹಿನ್ನೆಲೆ ವಿವಿಧ ಹಿಂದೂ ಸಂಘಟನೆಗಳಿಂದ ಮೇ.13 ರಂದು ಬಾಗಲಕೋಟೆಯ ನವನಗರದ ನಗರ ಸಭೆ ಮುಂದೆ ಪ್ರತಿಭಟನ ನಡೆಸಲು ನಿರ್ಧರಿಸಿವೆ.
state May 11, 2024, 4:18 PM IST
ಬೆಂಗಳೂರಿನಲ್ಲಿ 20 ಸಾವಿರ ರೂ. ಸಾಲ ಕೊಟ್ಟು ವಾಪಸ್ ಕೇಳಿದ ಸ್ನೇಹಿತನನ್ನೇ ಕೊಲೆಗೈದು ಬೀದಿ ಹೆಣ ಮಾಡಿದ ದುರ್ಘಟನೆ ಶ್ರೀರಾಮ್ಪುರದಲ್ಲಿ ನಡೆದಿದೆ.
CRIME May 11, 2024, 4:15 PM IST
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಅಂಗ ಎಂದು ಕೇಂದ್ರ ಬಿಜೆಪಿ ನಾಯಕರ ಪದೇ ಪದೇ ಹೇಳಿಕೆ ನೀಡುತ್ತಿದ್ದರೆ, ಇತ್ತ ಕಾಂಗ್ರೆಸ್ ನಾಯಕರು, ಕಾಶ್ಮೀರದ ಫಾರೂಕ್ ಅಬ್ದುಲ್ಲಾ ಸೇರಿದಂತೆ ಹಲವರು ಭಾರತಕ್ಕೆ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಇದರ ನಡುವೆ ಪಿಒಕೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ರಾಜನಾಥ್ ಸಿಂಗ್ ಹೇಳಿದಂತೆ, ಪಿಒಕೆ ತಾನಾಗೆ ಭಾರತದೊಂದಿಗೆ ವಿಲೀನಗೊಳ್ಳುವ ಲಕ್ಷಣಗಳು ಗೋಚರಿಸಿದೆ.
International May 11, 2024, 12:52 PM IST
ಕುಡಿದ ಮತ್ತಿನಲ್ಲಿ ಮೂವರು ಮಹಿಳೆಯರು ಪೊಲೀಸ್ ಮೇಲೆ ಹಲ್ಲೆ ಮಾಡಿ ಗಲಾಟೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಗುಂಡಿನ ಮತ್ತಿನಲ್ಲಿ ಮಹಿಳೆಯರು ಪೊಲೀಸ್ ಸಿಬ್ಬಂದಿ ಜೊತೆ ಉದ್ಧಟತನ ತೋರಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Woman May 11, 2024, 12:30 PM IST
ಹಾಸನದಲ್ಲಿ ಮಹಿಳೆಯಿಂದ ದಾಖಲಾದ ಲೈಂಗಿಕ ದೌರ್ಜನ್ಯ ಕೇಸ್ನಡಿ ವಕೀಲ ದೇವರಾಜೇಗೌಡ ಅವರನ್ನು ಹಾಸನ ಪೊಲೀಸರು ಚಿತ್ರದುರ್ಗದಲ್ಲಿ ಬಂಧಿಸಿದ್ದಾರೆ. ಆದರೆ, ಎಸ್ಐಟಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ.
CRIME May 11, 2024, 12:22 PM IST
ಶುಕ್ರವಾರ ಬೆಳಗ್ಗೆ ಮಿಷನ್ ರಸ್ತೆಯ ಕಟ್ಟಡವೊಂದರ ಮೆಟ್ಟಿಲ ಕೆಳಗೆ ಸತ್ಯನ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಅಸಹಜ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು
CRIME May 11, 2024, 11:35 AM IST
ಕೆಂಗೇರಿ ಬಳಿಯ ಕೋನಸಂದ್ರ ನಿವಾಸಿ ದಿವ್ಯಾ ಕೊಲೆಯಾದ ದುರ್ದೈವಿ, ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದ 2 ಗಂಟೆ ನಡುವೆ ಈ ಕೃತ್ಯ ನಡೆದಿದೆ. ಮೃತಳ ಪತಿ ಗುರುಮೂರ್ತಿ ಮಧ್ಯಾಹ್ನ ಪತ್ನಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ, ಅನುಮಾನಗೊಂಡು ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.
CRIME May 11, 2024, 7:23 AM IST