Asianet Suvarna News Asianet Suvarna News

ಡಿಕೆ ಸಹೋ​ದ​ರ​ರಿಗೆ ಹೆದರಿ ಕನ​ಕ​ಪುರ ತೊರೆದ ಬಿಜೆ​ಪಿ​ ಅ​ಭ್ಯ​ರ್ಥಿ​ಗಳು!

ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಸಹೋದರರಿಗೆ ಬಿಜೆಪಿ ಅಭ್ಯರ್ಥಿಗಳು ಕನಕಪುರವನ್ನು ತೊರೆದಿದ್ದಾರೆ. ಇದಕ್ಕೆ ಕಾರಣ ಏನು.? ಇಲ್ಲಿದೆ ಫುಲ್ ಡೀಟೇಲ್ಸ್ 

Town Municipality Election BJP Candidate Escape from Kanakapura
Author
Bengaluru, First Published Nov 3, 2019, 2:11 PM IST

ಡಿಕೆ ಸಹೋ​ದ​ರ​ರಿಗೆ ಹೆದರಿ ಕನ​ಕ​ಪುರ ತೊರೆದ ಬಿಜೆ​ಪಿ​ ಅ​ಭ್ಯ​ರ್ಥಿ​ಗಳು!

ರಾಮ​ನ​ಗರ [ನ.03]:  ಮಾಜಿ ಸಚಿವ ಡಿ.ಕೆ.​ಶಿ​ವ​ಕು​ಮಾರ್‌ ಮತ್ತು ಸಂಸದ ಡಿ.ಕೆ.​ಸು​ರೇಶ್‌ ಅವರ ಭಯಕ್ಕೆ ಕನ​ಕ​ಪುರ ನಗ​ರ​ಸಭೆ ಚುನಾ​ವ​ಣೆ​ಯಲ್ಲಿ ಸ್ಪರ್ಧಿ​ಸಿ​ರುವ ಅಭ್ಯ​ರ್ಥಿ​ಗಳು ಕನ​ಕ​ಪುರ ತೊರೆದು ಪ್ರವಾಸ ಹೊರ​ಟಿ​ದ್ದಾರೆ.

ಕನ​ಕ​ಪುರ ನಗ​ರ​ಸ​ಭೆಯ 31 ವಾರ್ಡು​ಗಳ ಪೈಕಿ 26 ವಾರ್ಡು​ಗ​ಳಲ್ಲಿ ಬಿಜೆಪಿ ಅಭ್ಯ​ರ್ಥಿ​ಗ​ಳು ನಾಮ​ಪತ್ರ ಸಲ್ಲಿ​ಸಿ​ದ್ದರು. ಇದ​ರಲ್ಲಿ 27ನೇ ವಾರ್ಡಿನಿಂದ ಕೃಷ್ಣಯ್ಯ ಶೆಟ್ಟಿಸಲ್ಲಿ​ಸಿದ್ದ ಉಮೇ​ದು​ವಾ​ರಿಕೆ ತಿರ​ಸ್ಕೃ​ತ​ಗೊಂಡು ಅಂತಿ​ವಾಗಿ 25 ಬಿಜೆಪಿ ಅಭ್ಯ​ರ್ಥಿಗಳು ಕಣ​ದಲ್ಲಿ ಉಳಿ​ದಿ​ದ್ದಾರೆ.

ಎಚ್ಚರಿಕೆ:  ಡಿಕೆ ಸಹೋ​ದ​ರರು ಜೆಡಿ​ಎಸ್‌ನೊಂದಿಗೆ ಹೊಂದಾ​ಣಿಕೆ ಮಾಡಿ​ಕೊಂಡು ನಗ​ರ​ಸಭೆ ಚುನಾ​ವಣೆ ಎದು​ರಿ​ಸು​ತ್ತಿದೆ. ಕಾಂಗ್ರೆಸ್‌ ಮತ್ತು ಜೆಡಿ​ಎಸ್‌ ಅಭ್ಯ​ರ್ಥಿ​ಗ​ಳನ್ನು ಹೊರತುಪಡಿಸಿ ಬೇರೆ ಪಕ್ಷದ ಅಭ್ಯ​ರ್ಥಿ​ಗ​ಳಾ​ಗಲಿ ಅಥವಾ ಪಕ್ಷೇ​ತ​ರ​ರಾಗಿ ಯಾರೂ ನಾಮ​ಪತ್ರ ಸಲ್ಲಿ​ಸ​ದಂತೆ ಎಚ್ಚರ ವಹಿ​ಸಿ​ದ್ದರು.

ಆದರೂ ಬಿಜೆಪಿ 26 ವಾರ್ಡು​ಗ​ಳಲ್ಲಿ ತನ್ನ ಅಭ್ಯ​ರ್ಥಿ​ಗ​ಳಿಂದ ನಾಮ​ಪತ್ರ ಸಲ್ಲಿ​ಸಿತ್ತು. ಅದ​ರ​ಲ್ಲೀಗ ಒಂದು ನಾಮ​ಪತ್ರ ತಿರ​ಸ್ಕೃ​ತ​ಗೊಂಡು 25 ನಾಮ​ಪ​ತ್ರ​ಗಳು ಊರ್ಜಿ​ತ​ಗೊಂಡಿವೆ. ಕಣ​ದ​ಲ್ಲಿ​ ಉಳಿ​ದಿ​ರುವ ಬಿಜೆಪಿ ಅಭ್ಯರ್ಥಿ​ಗಳಿಗೆ ಆಮಿ​ಷ​ವೊ​ಡ್ಡುವ ಅಥವಾ ಒತ್ತಡ ಹೇರು​ತ್ತಾ​ರೆಂಬ ಭಯ​ದಿಂದ ಪಕ್ಷದ ನಾಯ​ಕರು ಅಭ್ಯ​ರ್ಥಿ​ಗ​ಳನ್ನು ಕನ​ಕ​ಪು​ರ​ದಿಂದ ಅಜ್ಞಾತ ಸ್ಥಳಕ್ಕೆ ಪ್ರವಾಸ ಕರೆ​ದೊ​ಯ್ದಿ​ದ್ದಾರೆ.

ಹೆಚ್ಚಿನ ಮತಗಳು:  ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದ ಡಿ.ಕೆ. ಸುರೇಶ್‌ ಸ್ಪರ್ಧಿಸಿದರೂ ಸಹ ಇವರ ವಿರುದ್ಧ ಪಟ್ಟಣದ ಏಳೆಂಟು ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತ​ಗ​ಳು ಲಭಿ​ಸಿತ್ತು. ಇದ​ರಿಂದ ಆತಂಕ​ಗೊಂಡಿ​ರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಚುನಾ​ವ​ಣೆ​ಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣದಲ್ಲಿ ಉಳಿಯದಂತೆ ಆಮಿಷ ಅಥವಾ ಒತ್ತ​ಡ ಹೇರುವ ತಂತ್ರ ರೂಪಿ​ಸಿ​ದ್ದರು.

ಸೋಮವಾರ (ನ.4)ನಾಮಪತ್ರ ವಾಪಸ್ಸು ಪಡೆಯಲು ಅಂತಿಮ ದಿನ​ವಾ​ಗಿ​ರುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯ​ರ್ಥಿ​ಗ​ಳನ್ನು ಅಪಹರಿಸಿ ಗುಪ್ತ ಸ್ಥಳದಲ್ಲಿಟ್ಟು ಉಮೇ​ದು​ವಾ​ರಿಕೆ ವಾಪಸು ಪಡೆಯಬಹುದೆಂಬ ವದಂತಿ ಹರಿ​ದಾ​ಡಿತ್ತು. ಇದ​ರಿಂದ ಹೆದರಿರುವ ಬಿಜೆಪಿ ಅಭ್ಯ​ರ್ಥಿ​ಗಳು ಮುನ್ನೆಚ್ಚರಿಕೆ ತಂತ್ರವಾಗಿ ಪ್ರವಾಸ ಕೈಗೊಂಡಿದ್ದಾರೆ.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ್‌, ಆದಿತ್ಯಮಹೇಶ್‌, ನಾಗಾನಂದ, ತಾಲೂಕು ಅಧ್ಯಕ್ಷ ಶಿವರಾಂ ನೇತೃತ್ವದಲ್ಲಿ ಅ​ಭ್ಯ​ರ್ಥಿ​ಗಳು ಪ್ರವಾಸಕ್ಕೆ ತೆರಳಿದ್ದಾರೆ. ನಾಮಪತ್ರ ವಾಪಾಸ್‌ ಪಡೆಯುವ ದಿನಾಂಕ ಮುಗಿದ ಬಳಿಕ ಕನಕಪುರಕ್ಕೆ ಹಿಂದಿ​ರುಗಿ ಬರ​ಲಿ​ದ್ದಾರೆ ಎಂದು ಬಿಜೆಪಿ ಮೂಲ​ಗಳು ತಿಳಿ​ಸಿವೆ.

ಕನಕಪುರ ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹೈಜಾಕ್‌ ಮಾಡುತ್ತಾರೆಂದು ಬೆದರಿಕೆ ಬಿಜೆಪಿ ಪಕ್ಷದವರು ಅವರನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿರುವುದು.

ಕನ​ಕ​ಪುರ ನಗ​ರ​ಸಭೆ ಚುನಾ​ವಣೆ: 89 ಮಂದಿ ಕಣ​ದ​ಲ್ಲಿ

ಕನ​ಕ​ಪುರ:  ನಗ​ರ​ಸಭೆ 31 ವಾರ್ಡು​ಗ​ಳಲ್ಲಿ ಸ್ಪರ್ಧೆ ಬಯಸಿ ಅಭ್ಯರ್ಥಿ​ಗಳು ಸಲ್ಲಿ​ಸಿದ್ದ 96 ನಾಮ​ಪ​ತ್ರ​ಗ​ಳಲ್ಲಿ 2 ಉಮೇ​ದು​ವಾ​ರಿಕೆ ತಿರ​ಸ್ಕೃ​ತ​ಗೊಂಡಿದ್ದು, ಅಂತಿ​ಮ​ವಾಗಿ 89 ಮಂದಿ ಕಣ​ದಲ್ಲಿ ಉಳಿ​ದಿ​ದ್ದಾರೆ. ಶನಿ​ವಾರ ನಡೆದ ನಾಮ​ಪತ್ರ ಪರಿ​ಶೀ​ಲನೆ ಕಾರ್ಯ​ದಲ್ಲಿ 27ನೇ ವಾರ್ಡಿ​ನಿಂದ ನಾಮ​ಪತ್ರ ಸಲ್ಲಿ​ಸಿದ್ದ ಬಿಜೆಪಿ ಅಭ್ಯರ್ಥಿ ಕೃಷ್ಣ​ಯ್ಯ​ಶೆಟ್ಟಿಹಾಗೂ 3ನೇ ವಾರ್ಡಿನ ಅಭ್ಯ​ರ್ಥಿ​ಯೊ​ಬ್ಬರು ಸಲ್ಲಿ​ಸಿದ್ದ ಉಮೇ​ದು​ವಾ​ರಿಕೆ ತಿರ​ಸ್ಕೃ​ತ​ಗೊಂಡಿವೆ. ಅಭ್ಯ​ರ್ಥಿ​ಗಳು ಸಲ್ಲಿ​ಸಿದ್ದ ಎರ​ಡೆ​ರೆಡು ಉಮೇ​ದು​ವಾ​ರಿಕೆ ಒಂದು ತಿರ​ಸ್ಕೃ​ತ​ಗೊಂಡು ಅಂತಿ​ಮ​ವಾಗಿ 89 ಮಂದಿಯ ನಾಮ​ಪ​ತ್ರ​ಗಳು ಊರ್ಜಿ​ತ​ಗೊಂಡವು.

ನವೆಂಬರ್ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us:
Download App:
  • android
  • ios