ಡಿಕೆ ಸಹೋದರರಿಗೆ ಹೆದರಿ ಕನಕಪುರ ತೊರೆದ ಬಿಜೆಪಿ ಅಭ್ಯರ್ಥಿಗಳು!
ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಸಹೋದರರಿಗೆ ಬಿಜೆಪಿ ಅಭ್ಯರ್ಥಿಗಳು ಕನಕಪುರವನ್ನು ತೊರೆದಿದ್ದಾರೆ. ಇದಕ್ಕೆ ಕಾರಣ ಏನು.? ಇಲ್ಲಿದೆ ಫುಲ್ ಡೀಟೇಲ್ಸ್
ಡಿಕೆ ಸಹೋದರರಿಗೆ ಹೆದರಿ ಕನಕಪುರ ತೊರೆದ ಬಿಜೆಪಿ ಅಭ್ಯರ್ಥಿಗಳು!
ರಾಮನಗರ [ನ.03]: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರ ಭಯಕ್ಕೆ ಕನಕಪುರ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಕನಕಪುರ ತೊರೆದು ಪ್ರವಾಸ ಹೊರಟಿದ್ದಾರೆ.
ಕನಕಪುರ ನಗರಸಭೆಯ 31 ವಾರ್ಡುಗಳ ಪೈಕಿ 26 ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ 27ನೇ ವಾರ್ಡಿನಿಂದ ಕೃಷ್ಣಯ್ಯ ಶೆಟ್ಟಿಸಲ್ಲಿಸಿದ್ದ ಉಮೇದುವಾರಿಕೆ ತಿರಸ್ಕೃತಗೊಂಡು ಅಂತಿವಾಗಿ 25 ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಎಚ್ಚರಿಕೆ: ಡಿಕೆ ಸಹೋದರರು ಜೆಡಿಎಸ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ನಗರಸಭೆ ಚುನಾವಣೆ ಎದುರಿಸುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಹೊರತುಪಡಿಸಿ ಬೇರೆ ಪಕ್ಷದ ಅಭ್ಯರ್ಥಿಗಳಾಗಲಿ ಅಥವಾ ಪಕ್ಷೇತರರಾಗಿ ಯಾರೂ ನಾಮಪತ್ರ ಸಲ್ಲಿಸದಂತೆ ಎಚ್ಚರ ವಹಿಸಿದ್ದರು.
ಆದರೂ ಬಿಜೆಪಿ 26 ವಾರ್ಡುಗಳಲ್ಲಿ ತನ್ನ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸಿತ್ತು. ಅದರಲ್ಲೀಗ ಒಂದು ನಾಮಪತ್ರ ತಿರಸ್ಕೃತಗೊಂಡು 25 ನಾಮಪತ್ರಗಳು ಊರ್ಜಿತಗೊಂಡಿವೆ. ಕಣದಲ್ಲಿ ಉಳಿದಿರುವ ಬಿಜೆಪಿ ಅಭ್ಯರ್ಥಿಗಳಿಗೆ ಆಮಿಷವೊಡ್ಡುವ ಅಥವಾ ಒತ್ತಡ ಹೇರುತ್ತಾರೆಂಬ ಭಯದಿಂದ ಪಕ್ಷದ ನಾಯಕರು ಅಭ್ಯರ್ಥಿಗಳನ್ನು ಕನಕಪುರದಿಂದ ಅಜ್ಞಾತ ಸ್ಥಳಕ್ಕೆ ಪ್ರವಾಸ ಕರೆದೊಯ್ದಿದ್ದಾರೆ.
ಹೆಚ್ಚಿನ ಮತಗಳು: ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದ ಡಿ.ಕೆ. ಸುರೇಶ್ ಸ್ಪರ್ಧಿಸಿದರೂ ಸಹ ಇವರ ವಿರುದ್ಧ ಪಟ್ಟಣದ ಏಳೆಂಟು ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳು ಲಭಿಸಿತ್ತು. ಇದರಿಂದ ಆತಂಕಗೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣದಲ್ಲಿ ಉಳಿಯದಂತೆ ಆಮಿಷ ಅಥವಾ ಒತ್ತಡ ಹೇರುವ ತಂತ್ರ ರೂಪಿಸಿದ್ದರು.
ಸೋಮವಾರ (ನ.4)ನಾಮಪತ್ರ ವಾಪಸ್ಸು ಪಡೆಯಲು ಅಂತಿಮ ದಿನವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಅಪಹರಿಸಿ ಗುಪ್ತ ಸ್ಥಳದಲ್ಲಿಟ್ಟು ಉಮೇದುವಾರಿಕೆ ವಾಪಸು ಪಡೆಯಬಹುದೆಂಬ ವದಂತಿ ಹರಿದಾಡಿತ್ತು. ಇದರಿಂದ ಹೆದರಿರುವ ಬಿಜೆಪಿ ಅಭ್ಯರ್ಥಿಗಳು ಮುನ್ನೆಚ್ಚರಿಕೆ ತಂತ್ರವಾಗಿ ಪ್ರವಾಸ ಕೈಗೊಂಡಿದ್ದಾರೆ.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ್, ಆದಿತ್ಯಮಹೇಶ್, ನಾಗಾನಂದ, ತಾಲೂಕು ಅಧ್ಯಕ್ಷ ಶಿವರಾಂ ನೇತೃತ್ವದಲ್ಲಿ ಅಭ್ಯರ್ಥಿಗಳು ಪ್ರವಾಸಕ್ಕೆ ತೆರಳಿದ್ದಾರೆ. ನಾಮಪತ್ರ ವಾಪಾಸ್ ಪಡೆಯುವ ದಿನಾಂಕ ಮುಗಿದ ಬಳಿಕ ಕನಕಪುರಕ್ಕೆ ಹಿಂದಿರುಗಿ ಬರಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಕನಕಪುರ ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹೈಜಾಕ್ ಮಾಡುತ್ತಾರೆಂದು ಬೆದರಿಕೆ ಬಿಜೆಪಿ ಪಕ್ಷದವರು ಅವರನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿರುವುದು.
ಕನಕಪುರ ನಗರಸಭೆ ಚುನಾವಣೆ: 89 ಮಂದಿ ಕಣದಲ್ಲಿ
ಕನಕಪುರ: ನಗರಸಭೆ 31 ವಾರ್ಡುಗಳಲ್ಲಿ ಸ್ಪರ್ಧೆ ಬಯಸಿ ಅಭ್ಯರ್ಥಿಗಳು ಸಲ್ಲಿಸಿದ್ದ 96 ನಾಮಪತ್ರಗಳಲ್ಲಿ 2 ಉಮೇದುವಾರಿಕೆ ತಿರಸ್ಕೃತಗೊಂಡಿದ್ದು, ಅಂತಿಮವಾಗಿ 89 ಮಂದಿ ಕಣದಲ್ಲಿ ಉಳಿದಿದ್ದಾರೆ. ಶನಿವಾರ ನಡೆದ ನಾಮಪತ್ರ ಪರಿಶೀಲನೆ ಕಾರ್ಯದಲ್ಲಿ 27ನೇ ವಾರ್ಡಿನಿಂದ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ಕೃಷ್ಣಯ್ಯಶೆಟ್ಟಿಹಾಗೂ 3ನೇ ವಾರ್ಡಿನ ಅಭ್ಯರ್ಥಿಯೊಬ್ಬರು ಸಲ್ಲಿಸಿದ್ದ ಉಮೇದುವಾರಿಕೆ ತಿರಸ್ಕೃತಗೊಂಡಿವೆ. ಅಭ್ಯರ್ಥಿಗಳು ಸಲ್ಲಿಸಿದ್ದ ಎರಡೆರೆಡು ಉಮೇದುವಾರಿಕೆ ಒಂದು ತಿರಸ್ಕೃತಗೊಂಡು ಅಂತಿಮವಾಗಿ 89 ಮಂದಿಯ ನಾಮಪತ್ರಗಳು ಊರ್ಜಿತಗೊಂಡವು.
ನವೆಂಬರ್ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: