Asianet Suvarna News Asianet Suvarna News

ಡಿಕೆಶಿ ಬಿಡು​ಗ​ಡೆ : ದರ್ಗಾ​ದಲ್ಲಿ ವಿಶೇಷ ಪೂಜೆ

ಅಕ್ರಮ ಹಣ ಸಂಗ್ರಹಣೆ ಪ್ರಕರಣದಿಂದ ಜೈಲು ಸೇರಿದ್ದ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರು ಜೈಲಿನಿಂದ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಎಲ್ಲೆಡೆ ಪೂಜೆ ನಡೆಯುತ್ತಿದೆ. 

Special Pooja For DK Shivakumar In Dargah
Author
Bengaluru, First Published Oct 26, 2019, 10:55 AM IST

ರಾಮ​ನ​ಗರ [ಅ.26]:  ಕಾಂಗ್ರೆಸ್‌ ನಾಯಕ ಡಿ.ಕೆ.​ಶಿ​ವ​ಕು​ಮಾರ್‌ ತಿಹಾರ್‌ ಜೈಲಿ​ನಿಂದ ಬಿಡು​ಗ​ಡೆ​ಯಾದ ಹಿನ್ನೆ​ಲೆ​ಯಲ್ಲಿ ಜಿಲ್ಲಾ ಅಲ್ಪ​ಸಂಖ್ಯಾ​ತ ಕಾಂಗ್ರೆಸ್‌ ಘಟ​ಕದ ಪದಾ​ಧಿ​ಕಾ​ರಿ​ಗಳು ಹಾಗೂ ಅಭಿ​ಮಾ​ನಿ​ಗಳು ನಗ​ರದ ಪೀರನ್‌ ಷಾ ವಲಿ ದರ್ಗಾ​ದಲ್ಲಿ ವಿಶೇಷ ಪೂಜೆ ಸಲ್ಲಿ​ಸಿ​ದರು.

ದರ್ಗಾ​ದಲ್ಲಿ ವಿಸೇಷ ಪೂಜೆ ಸಲ್ಲಿ​ಸಿದ ತರು​ವಾಯ ರಾಜ​ಕೀಯ ದ್ವೇಷ​ದಿಂದ ನಮ್ಮ ನಾಯ​ಕ​ರನ್ನು ಜಾರಿ ನಿರ್ದೇ​ಶ​ನಾ​ಲಯ (ಇ​ಡಿ) ಬಂಧಿ​ಸಿತ್ತು. ಆದರೆ, ನ್ಯಾಯಾ​ಲ​ಯ​ದಲ್ಲಿ ನಮಗೆ ಜಯ ಸಿಕ್ಕಿದೆ ಎಂದು ಪದಾ​ಧಿ​ಕಾ​ರಿ​ಗಳು ಹಾಗೂ ಅಭಿ​ಮಾ​ನಿ​ಗಳು ಪರ​ಸ್ಪರ ಸಿಹಿ ತಿನಿ​ಸುವ ಮೂಲಕ ಸಂತಸ ವ್ಯಕ್ತ​ಪ​ಡಿ​ಸಿ​ದರು.

ಈ ವೇಳೆ ಮಾತ​ನಾ​ಡಿದ ಅಲ್ಪ​ಸಂಖ್ಯಾತ ಕಾಂಗ್ರೆಸ್‌ ಘಟಕ ಜಿಲ್ಲಾ​ಧ್ಯಕ್ಷ ನಿಜಾಂ ಮುದ್ದೀನ್‌ ಷರೀಫ್‌, ಡಿ.ಕೆ. ಶಿ​ವ​ಕು​ಮಾರ್‌, ದೆಹ​ಲಿ​ಯಿಂದ ಅ. 26 ಬೆಂಗ​ಳೂ​ರಿಗೆ ಆಗ​ಮಿ​ಸು​ತ್ತಿ​ದ್ದಾರೆ. ಅವ​ರನ್ನು ಅದ್ಧೂ​ರಿ​ಯಾಗಿ ಸ್ವಾಗ​ತಿಸಲು ನಿರ್ಧ​ರಿ​ಸ​ಲಾ​ಗಿದೆ. ರಾಮ​ನ​ಗ​ರ​ದಿಂದಲೂ 200ಕ್ಕೂ ಹೆಚ್ಚು ವಾಹ​ನ​ಗ​ಳಲ್ಲಿ ತೆರ​ಳ​ಲಿ​ದ್ದೇವೆ ಎಂದು ತಿಳಿ​ಸಿ​ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರೋಪ ಮುಕ್ತರು :  ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದಾರೆ. ಹಾಗಾಗಿ ಅವ​ರನ್ನು ರಾಜ​ಕೀ​ಯ​ವಾಗಿ ಹಿನ್ನಡೆ ಉಂಟು ಮಾಡ​ಬೇ​ಕೆಂಬ ಉದ್ದೇ​ಶ​ದಿಂದಲೇ ಬಿಜೆಪಿ ಇಡಿ ಮತ್ತು ಐಟಿ ದಾಳಿ​ಯಂತ​ಹ ಷಡ್ಯಂತ್ರ ನಡೆ​ಸಿ​ದ್ದರು. ಅದೆ​ಲ್ಲ​ವನ್ನು ಧೈರ್ಯ​ವಾಗಿ ಎದು​ರಿ​ಸಿ​ ಶಿವ​ಕು​ಮಾರ್‌ ಹೊರ ಬಂದಿ​ದ್ದಾರೆ. ಅವರು ಎಲ್ಲಾ ಆರೋ​ಪ​ಗ​ಳಿಂದಲೂ ಮುಕ್ತ​ರಾ​ಗು​ತ್ತಾರೆ ಎಂದು ವಿಶ್ವಾಸ ವ್ಯಕ್ತ​ಪ​ಡಿ​ಸಿ​ದ​ರು.

ಭ್ರಷ್ಟರು, ಆರ್ಥಿಕ ಅಪರಾಧ ಮಾಡಿರುವವರು ಕೇವಲ ಕಾಂಗ್ರೆಸ್‌ನವರು ಮಾತ್ರ ಎಂಬ ರೀತಿಯಲ್ಲಿ ಬಿಜೆಪಿ ನಾಯಕರು ವರ್ತಿಸುತ್ತಿರುವುದು ಸರಿಯಲ್ಲ. ಬಿಜೆಪಿ ಧೋರಣೆ ಸಹಿಸಲು ಸಾಧ್ಯವೇ ಇಲ್ಲ. ಇಂತಹ ದ್ವೇಷದ ರಾಜಕಾರಣವನ್ನು ಬಿಜೆಪಿ ಬಿಡದಿದ್ದರೆ ಭವಿ​ಷ್ಯ​ದಲ್ಲಿ ಇದು ಅವ​ರಿಗೆ ತಿರು​ಗು​ಬಾ​ಣ​ವಾ​ಗ​ಲಿದೆ ಎಂದು ಎಚ್ಚ​ರಿಕೆ ನೀಡಿ​ದರು.

ಅಲ್ಪ​ಸಂಖ್ಯಾತ ಮುಖಂಡ ಸಮದ್‌ ಮಾತ​ನಾಡಿ, ಬಿಜೆ​ಪಿ​ಯ​ವರು ಎಷ್ಟೇ ಷಡ್ಯಂತ್ರ ರೂಪಿ​ಸಿ​ದರೂ, ಡಿಕೆ ​ಶಿ​ವ​ಕು​ಮಾರ್‌ ಅವ​ರನ್ನು ರಾಜ​ಕೀ​ಯ​ವಾಗಿ ಹಣಿ​ಯಲು ಸಾಧ್ಯ​ವಿಲ್ಲ. ಶಿವ​ಕು​ಮಾರ್‌ ಕಾಂಗ್ರೆಸ್‌ ನಾಯ​ಕ​ರಾ​ಗಿ​ದ್ದರೂ, ಅವ​ರನ್ನು ಎಲ್ಲಾ ಪಕ್ಷದ ನಾಯ​ಕರು, ಕಾರ್ಯ​ಕರ್ತರು ಹಾಗೂ ಎಲ್ಲಾ ಸಮು​ದಾ​ಯದ ಜನರು ಪ್ರೀತಿ ವಿಶ್ವಾ​ಸ​ದಿಂದ ಕಾಣು​ತ್ತಾರೆ ಎಂಬು​ದನ್ನು ಮರೆ​ಯ​ಬಾ​ರದು ಎಂದರು.

ದ್ವೇಷ ಸಾಧನೆ:  ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ದ್ವೇಷ ಸಾಧಿಸುತ್ತಿದೆ. ತಮ್ಮ ಮೇಲಿನ ಎಲ್ಲಾ ಆರೋ​ಪ​ಗ​ಳಿಂದ ಮುಕ್ತ​ರಾ​ಗು​ತ್ತಾರೆ ಎಂಬ ವಿಶ್ವಾ​ಸ​ವಿದೆ. ಈ ಘಟ​ನೆ​ಗಳು ಶಿವ​ಕು​ಮಾರ್‌ ಶಕ್ತಿ​ಯನ್ನು ಮತ್ತಷ್ಟುಹೆಚ್ಚಿ​ಸಿದ್ದು, ಕಾಂಗ್ರೆಸ್‌ನಲ್ಲಿ ಅವರು ಭವಿಷ್ಯದ ಮುಖ್ಯ​ಮಂತ್ರಿ ಆಗಿ​ದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗ​ರ​ಸಭೆ ಮಾಜಿ ಉಪಾ​ಧ್ಯಕ್ಷ ಮುತ್ತು​ರಾಜ್‌, ಮಾಜಿ ಸದಸ್ಯ ಬಾಸಿದ್‌, ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷ ಉನ್ನು ಷರೀಫ್‌, ಮುಖಂಡ​ರಾದ ನವೀನ್‌, ಕನ್ನಡ ರಾಜು, ಷಫೀಕ್‌ ಅಹ​ಮದ್‌, ತಂಜ್ಹಿಲ್‌, ಔರನ್‌ ಮತ್ತಿ​ತ​ರರು ಹಾಜ​ರಿ​ದ್ದ​ರು.

Follow Us:
Download App:
  • android
  • ios