Asianet Suvarna News Asianet Suvarna News

ಡಿ.ಕೆ.ಶಿಕುಮಾರ ಬಿಡು​ಗ​ಡೆ​ : ಬಿಜೆ​ಪಿ ನಾಯ​ಕರ ಲೆಕ್ಕಾ​ಚಾರ ಉಲ್ಟಾ!

ಅಕ್ರಮ ಹಣ ಸಂಗ್ರಹಣೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದೀಗ ಡಿಕೆಶಿ ಹೊರಬಂದಿರುವುದು ಕಾಂಗ್ರೆಸಿಗೆ ಇನ್ನಷ್ಟು ಶಕ್ತಿ ತುಂಬಿದಂತಾಗಿದೆ. 

DK Shivakumar Congress Strengthen Congress
Author
Bengaluru, First Published Oct 24, 2019, 11:47 AM IST

ಎಂ.ಅ​ಫ್ರೋಜ್ ಖಾನ್‌ 

ರಾಮ​ನ​ಗರ [ಅ.24]:  ಅಕ್ರಮ ಹಣ ವರ್ಗಾ​ವಣೆ ಪ್ರಕ​ರ​ಣ​ದಲ್ಲಿ ತಿಹಾರ್‌ ಜೈಲು ಪಾಲಾ​ಗಿದ್ದ ಕಾಂಗ್ರೆಸ್‌ ನಾಯಕ ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ದೆಹ​ಲಿ ಹೈಕೋರ್ಟ್‌ ಜಾಮೀನು ಮಂಜೂ​ರು ಮಾಡಿ​ರು​ವುದು ಕಾಂಗ್ರೆ​ಸ್ಸಿ​ಗ​ರಲ್ಲಿ ಸಂತ​ಸದ ಜತೆಗೆ ಹೊಸ ಚೈತನ್ಯ ತುಂಬಿ​ದಂತಾ​ಗಿ​ದೆ.

ಜಾರಿ ನಿರ್ದೇ​ಶ​ನಾ​ಲಯ (ಇ​ಡಿ​) ವಿಚಾ​ರ​ಣೆ​ಗೆಂದು ಕರೆ​ಸಿ​ಕೊಂಡಿದ್ದ ಮಾಜಿ ಸಚಿವ ಡಿ.ಕೆ.​ಶಿ​ವ​ಕು​ಮಾರ್‌ ಅವ​ರನ್ನು ಕಳೆದ ಸೆಪ್ಟೆಂಬರ್‌ 3 ರಂದು ಬಂಧಿ​ಸಿತ್ತು. ಐವ​ತ್ತು ದಿನ​ಗಳ ಕಾಲ ಬಂಧ​ನ​ದ​ಲ್ಲಿದ್ದ ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಬುಧ​ವಾರ ಜಾಮೀನು ದೊರ​ಕಿ​ರು​ವುದರಿಂದ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯ​ಕ​ರ್ತರು ಸಂಭ್ರ​ಮಾಚ​ರ​ಣೆ​ಯಲ್ಲಿ ಮುಳು​ಗಿ​ದ್ದಾರೆ.

ದೆಹ​ಲಿ​ಯಿಂದ ಆಗ​ಮಿ​ಸುವ ಡಿ.ಕೆ.​ಶಿ​ವ​ಕು​ಮಾರ್‌ ಅವ​ರನ್ನು ಬೆಂಗ​ಳೂರಿನ ವಿಮಾನ ನಿಲ್ದಾಣ ಮತ್ತು ರಾಮ​ನ​ಗ​ರದಲ್ಲಿ ಅದ್ಧೂ​ರಿ​ಯಾಗಿ ಸ್ವಾಗ​ತ​ಕೋರಿ ಬರ​ಮಾ​ಡಿ​ಕೊ​ಳ್ಳಲು ಕಾಂಗ್ರೆಸ್‌ ನಾಯ​ಕರು ಸಿದ್ಧತೆ ನಡೆ​ಸಿ​ದ್ದಾರೆ. ಈ ಕ್ಷಣ​ಕ್ಕಾಗಿ ಮುಖಂಡರು ಹಾತೊ​ರೆ​ಯು​ತ್ತಿ​ದ್ದಾ​ರೆ. ಕೆಲ ನಾಯ​ಕರು ಶಿವ​ಕು​ಮಾರ್‌ ಸಹೋ​ದರ ಡಿ.ಕೆ.​ಸು​ರೇಶ್‌ ಅವ​ರೊಂದಿಗೆ ನಿರಂತ​ರ​ವಾಗಿ ಸಂಪ​ರ್ಕ​ದ​ಲ್ಲಿ​ದ್ದಾರೆ.

ದೂರ​ವಾದ ಅನಾ​ಥ ಪ್ರಜ್ಞೆ:  ರಾಜ​ಕೀಯ ಕ್ಷೇತ್ರಕ್ಕೆ ಘಟ​ನಾ​ಘಟಿ ನಾಯ​ಕ​ರನ್ನು ಕೊಡು​ಗೆ​ಯಾಗಿ ನೀಡಿದ ರಾಮ​ನ​ಗ​ರ​ ಜಿಲ್ಲೆ​ಯಲ್ಲಿ ಡಿ.ಕೆ.​ಶಿ​ವ​ಕು​ಮಾರ್‌ ಬಂಧ​ನದ ತರು​ವಾಯ ರಾಜ​ಕೀ​ಯ ಅನಾಥ ಪ್ರಜ್ಞೆ ಕಾಡಲು ಆರಂಭಿ​ಸಿ​ತ್ತು. ಕಳೆದ ಮೂರು ದಶಕಗಳಿಂದಲೂ ಜಿಲ್ಲೆಯಲ್ಲಿ ಕಾಂಗ್ರೆಸ್‌ ನಾಯಕತ್ವವನ್ನು ಡಿ.ಕೆ. ಶಿವಕುಮಾರ್‌ ವಹಿಸಿಕೊಂಡಿದ್ದಾರೆ.

ಯಾವುದೇ ಚುನಾ​ವ​ಣೆ​ಗ​ಳಾ​ಗಲಿ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕಿದ್ದರೂ ಡಿ.ಕೆ.​ಶಿ​ವ​ಕು​ಮಾರ್‌ ನಿರ್ಧಾ​ರವೇ ಅಂತಿಮವಾಗಿ​ರು​ತ್ತಿತ್ತು. ಹೀಗಿರುವಾಗ ಡಿಕೆಶಿ ಜೈಲು ಪಾಲದ ನಂತರ ಸ್ಥಳೀಯ ಕಾಂಗ್ರೆಸ್‌ ಮುಖಂಡರಿಗೆ ದಿಕ್ಕು ತೋಚದಂತೆ ಆಗಿತ್ತು.

ಕೇವಲ ಮೂರು ತಿಂಗಳ ಹಿಂದಷ್ಟೇ ರಾಜ್ಯ ರಾಜಕಾರಣದ ಶಕ್ತಿ ಕೇಂದ್ರ ಎನಿಸಿದ್ದ ರಾಮನಗರವು ಸಮ್ಮಿಶ್ರ ಸರ್ಕಾರ ಪತನವಾಗುತ್ತಲೇ ನಿರ್ವಾತ ಆವರಿಸಿತ್ತು. ಅದರ ಬೆನ್ನಲ್ಲೇ ಶಿವ​ಕು​ಮಾರ್‌ ತಿಹಾರ್‌ ಜೈಲು ಪಾಲಾ​ಗಿ​ದ್ದರೆ, ಸಹೋ​ದ​ರ​ನನ್ನು ಬಿಡಿ​ಸಿ​ಕೊಂಡು ಬರ​ಲು ಸಂಸ​ದ ಡಿ.ಕೆ.​ಸು​ರೇಶ್‌ ದೆಹ​ಲಿ​ಯಲ್ಲಿ ಠಿಕಾಣಿ ಹೂಡಿ​ದ್ದರು. ಮಾಜಿ ಸಿಎಂ ಕುಮಾ​ರ​ಸ್ವಾಮಿ ಅನರ್ಹ ಶಾಸ​ಕರ ಉಪ​ಚು​ನಾ​ವ​ಣೆ​ ಎದು​ರಿ​ಸಲು ಪಕ್ಷ ಸಂಘ​ಟ​ನೆ​ಯಲ್ಲಿ ತೊಡ​ಗಿ​ದ್ದರು. ಇದ​ರಿಂದಾಗಿ ಇಲ್ಲಿನ ರಾಜಕಾರಣಕ್ಕೆ ಮಂಕು ಬಡಿದಂತೆ ಆಗಿತ್ತು.

ಇನ್ನು ರಾಮ​ನ​ಗರ ಜಿಲ್ಲೆಯ ಉಸ್ತು​ವಾರಿ ಸಚಿ​ವ​ರಾ​ಗಿರುವ ಉಪ​ಮು​ಖ್ಯ​ಮಂತ್ರಿ ಅಶ್ವತ್ಥ್ ನಾರಾ​ಯಣ ಅವ​ರು ಜಿಲ್ಲೆಯ ಬಗ್ಗೆ ಅಷ್ಟಾಗಿ ಕಾಳಜಿ ವಹಿ​ಸಿ​ರ​ಲಿಲ್ಲ. ಒತ್ತ​ಡಕ್ಕೆ ಕಟ್ಟು​ಬಿದ್ದು ಒಂದೇ ದಿನ​ (ಅ.21)ದಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರ​ಗ​ಳಲ್ಲಿ ಪ್ರವಾಸ ಕೈಗೊಂಡಿ​ದ್ದರು. ಅಲ್ಲದೆ ಬಿಜೆಪಿ ಮುಖಂಡರ ಸಭೆ ನಡೆಸಿ ಪಕ್ಷ ಸಂಘ​ಟ​ನೆಗೆ ಶಕ್ತಿ ತುಂಬಿ​ದ್ದ​ರು.

ಅಲ್ಲದೆ ಬಿಜೆಪಿ ಸ್ಥಳೀಯ ಸಂಸ್ಥೆ ಚುನಾ​ವ​ಣೆ​ಯಲ್ಲಿ ಡಿಕೆ ಸಹೋ​ದ​ರರ ಅನು​ಪ​ಸ್ಥಿ​ತಿ​ಯ ಲಾಭ ಪಡೆ​ಯುವ ಲೆಕ್ಕಾ​ಚಾ​ರ​ದಲ್ಲಿದ್ದರು. ಆದ​ರೀಗ ಕಾಂಗ್ರೆಸ್‌ ಟ್ರಬಲ್‌ ಶೂಟರ್‌ ವಾಪ​ಸ್ಸಾ​ಗು​ತ್ತಿ​ರು​ವುದರಿಂದ ಕಮಲ ಪಡೆ ನಾಯ​ಕರು ಕೊಂಚ ವಿಚ​ಲಿ​ತ​ರಾ​ಗಿ​ದ್ದಾರೆ.

 ಅಶ್ವತ್ಥ್ ಗೆ ಡಿಕೆ ಸಹೋ​ದ​ರರ ಟಕ್ಕರ್‌:

ಜೆಡಿ​ಎಸ್‌ ವರಿಷ್ಠ ಕುಮಾ​ರ​ಸ್ವಾಮಿ, ಕಾಂಗ್ರೆಸ್‌ ನಾಯ​ಕ​ರಾದ ಡಿಕೆ ಸಹೋ​ದ​ರ​ರಿಗೆ ಪರ್ಯಾ​ಯ​ವಾಗಿ ಸಿ.ಪಿ.​ಯೋ​ಗೇ​ಶ್ವರ್‌ ಅವ​ರೊಂದಿಗೆ ಮತ್ತೊಂದು ಶಕ್ತಿಯ ಅವ​ಶ್ಯ​ಕತೆ ಇರುವ ಕಾರ​ಣ​ದಿಂದಲೇ ಬಿಜೆಪಿ ವರಿ​ಷ್ಠರು ಅಶ್ವತ್‌್ಥ ನಾರಾ​ಯಣ ಅವ​ರನ್ನು ಜಿಲ್ಲಾ ಉಸ್ತು​ವಾರಿ ಸಚಿ​ವ​ರ​ನ್ನಾಗಿ ನೇಮಿ​ಸಿ​ದ್ದಾರೆ. ಇದರ ಹಿಂದೆ ಒಕ್ಕ​ಲಿಗ ಜಾತಿ ರಾಜ​ಕೀ​ಯವೂ ಅಡ​ಗಿದೆ.

ಡಿ.ಕೆ.​ಶಿ​ವ​ಕು​ಮಾರ್‌ ಮತ್ತು ಡಿ.ಕೆ.​ಸು​ರೇಶ್‌ ಅವರು ಸ್ಥಳೀಯ ಸಂಸ್ಥೆ ಚುನಾ​ವಣೆ ಮೂಲಕವೇ ಉಪ​ಮು​ಖ್ಯ​ಮಂತ್ರಿ ಅಶ್ವತ್‌್ಥ ನಾರಾ​ಯಣ ಮತ್ತು ಮಾಜಿ ಸಚಿವ ಸಿ.ಪಿ.​ಯೋ​ಗೇ​ಶ್ವರ್‌ ಅವ​ರಿಗೆ ಟಕ್ಕರ್‌ ನೀಡ​ಲಿ​ದ್ದಾರೆ. ಜೆಡಿ​ಎಸ್‌, ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷ​ಗಳ ಕಾದಾ​ಟಕ್ಕೆ ವೇದಿ​ಕೆ​ಯಾ​ಗ​ಲಿ​ರುವ ಮಿನಿ ಸಮರದಲ್ಲಿ ಕಮಲ ಪಡೆಗೆ ಮುಖ​ಭಂಗ ಮಾಡಲು ಡಿಕೆ ಸಹೋ​ದ​ರರು ದಳ​ಪ​ತಿ​ಗ​ಳೊಂದಿಗೆ ಕೈ ಜೋಡಿ​ಸಿ​ದರೂ ಅಚ್ಚ​ರಿ​ಯಿಲ್ಲ ಎಂಬ ಮಾತು​ಗಳು ಕೇಳಿ ಬರು​ತ್ತಿವೆ.

ಉಪ ಚುನಾವಣೆ ರಂಗು:  ಅನ​ರ್ಹ ಶಾಸ​ಕರ ಕ್ಷೇತ್ರ​ಗ​ಳ ಉಪ​ಚು​ನಾ​ವಣೆ ಕಾಂಗ್ರೆಸ್‌ನ ಟ್ರಬಲ್‌ ಶೂಟರ್‌ ಡಿ.ಕೆ.​ಶಿ​ವ​ಕು​ಮಾರ್‌ ಅವರ ಆಗ​ಮ​ನ​ದಿಂದ ರಂಗು ಪಡೆ​ಯ​ಲಿದೆ. ಸಮ್ಮಿಶ್ರ ಸರ್ಕಾ​ರ​ವನ್ನು ಉಳಿಸಿಕೊಳ್ಳಲು ಶಿವಕುಮಾರ್‌, ಸಾಕಷ್ಟುಪ್ರಯತ್ನಪಟ್ಟಿದ್ದರು. ಆದಾಗ್ಯೂ ಸರ್ಕಾರ ಪತನಗೊಂಡ ಸಂದರ್ಭ ಅತೃಪ್ತ ಶಾಸಕರಿಗೆ ಡಿಕೆಶಿ ಬಹಿರಂಗವಾಗಿ​ಯೇ ಸವಾಲು ಹಾಕಿದ್ದರೆ. ಅದರಲ್ಲೂ ಎಂಟಿಬಿ ನಾಗರಾಜು ವಿರುದ್ಧ ಕಿಡಿಕಾರಿದ್ದ ಶಿವಕುಮಾರ್‌, ಇನ್ನು ನನ್ನ ನಿನ್ನ ಭೇಟಿ ಏನಿದ್ದರೂ ಚುನಾವಣಾ ರಣಾಂಗಣದಲ್ಲಿ ಎಂದು ತೊಡೆ ತಟ್ಟಿದ್ದರು. ಇದೀಗ ಶಿವಕುಮಾರ್‌ ರಾಜ್ಯ ರಾಜಕಾರಣಕ್ಕೆ ವಾಪಸ್‌ ಆಗುತ್ತಿ​ರು​ವುದು ಅನರ್ಹ ಶಾಸಕರ ಕ್ಷೇತ್ರಗಳಲ್ಲಿನ ಉಪಚುನಾವಣೆಯ ರಂಗು ಹೆಚ್ಚಲಿದೆ ಎಂಬ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ.

ಬಿಜೆಪಿ ನಾಯ​ಕರ ಸಂಚಿನಿಂದಾಗಿ ಡಿ.ಕೆ.ಶಿವಕುಮಾರ್‌ ಬಂಧನಕ್ಕೆ ಒಳಗಾಗಿದ್ದರು. ಅವರಿಗೆ ಜಾಮೀನು ಸಿಕ್ಕಿರುವುದು ಎಲ್ಲರಿಗೂ ನಿರಾಳತೆ ತಂದಿದೆ. ಮುಂದಿನ ಕಾನೂನು ಹೋರಾಟದಲ್ಲೂ ಅವರು ಗೆದ್ದು ಬರಲಿದ್ದಾರೆ. ಡಿ.ಕೆ.​ಶಿ​ವ​ಕು​ಮಾರ್‌ ಆಗ​ಮ​ನ​ದಿಂದ ಕಾಂಗ್ರೆಸ್‌ ಪಕ್ಷದ ಶಕ್ತಿ ಮತ್ತಷ್ಟುಹೆಚ್ಚಿ​ದಂತಾ​ಗಿ​ದೆ.

-ಎ.ಬಿ. ಚೇತನ್‌ಕುಮಾರ್‌ ಅಧ್ಯಕ್ಷ, ಕಾಂಗ್ರೆಸ್‌ ನಗರ ಘಟಕ, ರಾಮ​ನ​ಗ​ರ.

ದೆಹಲಿ ಹೈಕೋರ್ಟ್‌ ಡಿ.ಕೆ.ಶಿವಕುಮಾರ್‌ ಅವರಿಗೆ ಜಾಮೀನು ನೀಡಿರುವುದು ನಮ್ಮೆಲ್ಲರಿಗೂ ಸಮಾಧಾನ ತಂದಿದೆ. ಅವರ ಮೇಲಿನ ಆರೋಪಗಳ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ಮಾನಸಿಕ ಸ್ಥೈರ್ಯ ತುಂಬಿದೆ. ಸದ್ಯ ನಾನೂ ದೆಹಲಿಯಲ್ಲಿಯೇ ಇದ್ದೇನೆ. ಶಿವಕುಮಾರ್‌ ಕಾನೂನು ಪ್ರಕ್ರಿಯೆ ಮುಗಿಸಿ ಗುರುವಾರ ಬೆಂಗಳೂರಿಗೆ ಮರಳಲಿದ್ದಾರೆ.

-ಎಸ್‌.ರವಿ ವಿಧಾನ ಪರಿಷತ್‌ ಸದಸ್ಯರು.

Follow Us:
Download App:
  • android
  • ios