Asianet Suvarna News Asianet Suvarna News

ಶಶಿ ತರೂರ್‌ ಪ್ರಣಾಳಿಕೆಯಲ್ಲಿ ಭಾರತದ ನಕ್ಷೆಯೇ ತಪ್ಪು, ಕಾಶ್ಮೀರ, ಲಡಾಖ್‌ ಪ್ರದೇಶವೇ ನಾಪತ್ತೆ!

ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ಮೂವರು ವ್ಯಕ್ತಿಗಳ ಪೈಕಿ ಒಬ್ಬರಾಗಿರುವ ಸಂಸದ ಶಶಿ ತರೂರ್‌, ಚುನಾವಣೆಗೂ ಮುನ್ನ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಆದರೆ, ಅವರು ಪ್ರಕಟಿಸಿದ ಪ್ರಣಾಳಿಕೆಯಲ್ಲಿ ದೇಶದ ನಕ್ಷೆಯನ್ನೇ ತಪ್ಪಾಗಿ ಪ್ರಿಂಟ್‌ ಮಾಡಲಾಗಿದೆ. ಕಾಶ್ಮೀರ ಹಾಗೂ ಲಡಾಖ್‌ ಭಾಗವೇ  ಇವರ ನಕ್ಷೆಯಲ್ಲಿ ನಾಪತ್ತೆಯಾಗಿದೆ. ಈ ಕುರಿತು ಆಕ್ರೋಶ ಎದುರಾದ ಬೆನ್ನಲ್ಲಿಯೇ ಟ್ವಿಟರ್‌ನಲ್ಲಿ ಪ್ರಕಟಿಸಿದ್ದ ಪ್ರಣಾಳಿಕೆಯನ್ನು ಡಿಲೀಟ್‌ ಮಾಡಿದ್ದಾರೆ.
 

Wrong map of India in Shashi Tharoor manifesto Part of Jammu and Kashmir and Ladakh missing from map san
Author
First Published Sep 30, 2022, 7:29 PM IST

ನವದೆಹಲಿ (ಸೆ 30): ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಿರುವ ಸಂಸದ ಶಶಿ ತರೂರ್ ತಮ್ಮ ಚುನಾವಣಾ ಪ್ರಣಾಳಿಕೆ ಮೂಲಕ ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಪ್ರಣಾಳಿಕೆಯ ಎರಡನೇ ಪುಟದಲ್ಲಿ ಮುದ್ರಿಸಲಾದ ಭಾರತದ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಕೆಲವು ಭಾಗಗಳು ಕಾಣೆಯಾಗಿವೆ. ವಿವಾದ ತಾರಕಕ್ಕೇರುತ್ತಿದ್ದಂತೆ ತರೂರ್ ತಮ್ಮ ಟ್ವಿಟರ್ ಖಾತೆಯಿಂದ ವಿವಾದಾತ್ಮಕ ನಕ್ಷೆಯನ್ನು ಒಳಗೊಂಡ ಪೋಸ್ಟ್ ಅನ್ನು ತೆಗೆದುಹಾಕಿದ್ದಾರೆ. ನಕ್ಷೆಯ ಅಡಿಯಲ್ಲಿ, 'ಪಿಸಿಸಿ ಅಧ್ಯಕ್ಷರು ಅಧಿಕಾರವನ್ನು ಪಡೆಯಬೇಕು. ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನೀಡಲು ಪಿಸಿಸಿ ಅಧ್ಯಕ್ಷರಿಗೆ ನಿಜವಾದ ಅಧಿಕಾರ ಸಿಗಬೇಕು. ಇದರಿಂದ ಪಕ್ಷದ ಮೂಲ ಕಾರ್ಯಕರ್ತರು ನಿಜವಾಗಿಯೂ ಸಬಲರಾಗುತ್ತಾರೆ. ಪಕ್ಷ ಮತ್ತು ಆಡಳಿತದ ವಿಷಯಗಳಲ್ಲಿ ಬಿಜೆಪಿಯ ಅಧಿಕಾರ ಕೇಂದ್ರೀಕರಣಕ್ಕೆ ನಾವು ವಿಶ್ವಾಸಾರ್ಹ ಪರ್ಯಾಯವನ್ನು ಒದಗಿಸಬೇಕು. ರಾಜ್ಯ, ಜಿಲ್ಲೆ, ಬ್ಲಾಕ್ ದೇನಾ ಮತ್ತು ತಳಮಟ್ಟದ ಪದಾಧಿಕಾರಿಗಳನ್ನು ಸಬಲೀಕರಣಗೊಳಿಸುವುದರಿಂದ ಹೊಸ ನಾಯಕನನ್ನು ಅತಿಯಾದ ಆಡಳಿತದ ಭಾರದಿಂದ ಮುಕ್ತಗೊಳಿಸುವುದು ಮಾತ್ರವಲ್ಲದೆ ಬಲವಾದ ರಾಜ್ಯ ನಾಯಕತ್ವವನ್ನು ನಿರ್ಮಿಸಲು ಸಹಾಯ ಮಾಡುತ್ತದೆ' ಎಂದು ಬರೆದಿದ್ದಾರೆ.

ತರೂರ್ ಸೇರಿದಂತೆ ಮೂವರು ನಾಯಕರಿಂದ ನಾಮಪತ್ರ ಸಲ್ಲಿಕೆ: ಕಾಂಗ್ರೆಸ್, ಅಧ್ಯಕ್ಷರ ಆಯ್ಕೆಗೆ ಶುಕ್ರವಾರ 3 ನಾಮಪತ್ರಗಳು ಸಲ್ಲಿಕೆಯಾದವು. ಮೊದಲ ನಾಮಪತ್ರವನ್ನು ಶಶಿ ತರೂರ್, ಎರಡನೇ ನಾಮಪತ್ರವನ್ನು ಜಾರ್ಖಂಡ್‌ನಿಂದ ಕಾಂಗ್ರೆಸ್ ನಾಯಕ ಕೆಎನ್ ತ್ರಿಪಾಠಿ ಮತ್ತು ಮೂರನೇ ನಾಮಪತ್ರವನ್ನು ಮಲ್ಲಿಕಾರ್ಜುನ ಖರ್ಗೆ ಸಲ್ಲಿಸಿದ್ದಾರೆ. ಇದರೊಂದಿಗೆ ಮುಂದಿನ ಕಾಂಗ್ರೆಸ್‌ ಅಧ್ಯಕ್ಷರಾಗುವ ವ್ಯಕ್ತಿ, ಗಾಂಧಿಯೇತರರು ಎನ್ನುವುದು ಖಚಿತವಾಗಿದೆ.

ಖರ್ಗೆ ಅವರನ್ನೇ ಅಧಿಕೃತ ಅಭ್ಯರ್ಥಿ ಎಂದು ಬಿಂಬಿಸೋದೇಕೆ? ಹೈಕಮಾಂಡ್‌ಗೆ ಶಶಿ ತರೂರ್‌ ಪ್ರಶ್ನೆ

ಶಶಿ ತರೂರ್‌ (Shashi Tharoor) ಹಾಗೂ ಕೆಎನ್‌ ತ್ರಿಪಾಠಿ (KN Tripathi) ಅವರ ಪರವಾಗಿ ಕಾಂಗ್ರೆಸ್‌ ನಾಯಕರ (Congress Leaders) ಒಲವು ಕಡಿಮೆ ಇದೆ. ಆದರೆ, ಗಾಂಧಿ ಕುಟುಂಬದ ಆಪ್ತ ಹಾಗೂ ಸ್ವತಃ ಅವರ ಅಯ್ಕೆ ಎಂದು ಹೇಳಲಾಗುತ್ತಿರುವ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರ ಪರ 30 ದೊಡ್ಡ ನಾಯಕರು ಬೆಂಬಲ ಸೂಚಿಸಿದ್ದಾರೆ. ಇದರಲ್ಲಿ ಜಿ-23 ಬಣದಲ್ಲಿದ್ದ ಆನಂದ್‌ ಶರ್ಮ ಹಾಗೂ ಮನೀಷ್‌ ತಿವಾರಿಯಂಥ ದೊಡ್ಡ ಹೆಸರುಗಳೂ ಸೇರಿವೆ. ಮಲ್ಲಿಕಾರ್ಜುನ ಖರ್ಗೆ ಅವರ ನಾಮಪತ್ರ ಸಲ್ಲಿಕೆ ಮಾಡುವ ವೇಳೆಯಲ್ಲಿಯೇ ಕಾಂಗ್ರೆಸ್‌ನ ದೊಡ್ಡ ನಾಯಕರು ಸೇರಿದ್ದರು. ಇದರಿಂದಾಗಿ ಸ್ವತಃ ಶಶಿ ತರೂರ್‌ ಕೂಡ ಬೇಸರ ವ್ಯಕ್ತಪಡಿಸಿದ್ದರು. ಬಹುಶಃ ಕಾಂಗ್ರೆಸ್ (Congress) ಅಧ್ಯಕ್ಷ ಚುನಾವಣೆಯ ಫಲಿತಾಂಶ ಇದು ಎಂದು ಬಿಂಬಿಸಲಾಗಿದೆ.

Congress ಅಧ್ಯಕ್ಷ ಸ್ಥಾನಕ್ಕೆ ಮೂವರ ಸ್ಪರ್ಧೆ..? ಶಶಿ ತರೂರ್‌ ಸ್ಪರ್ಧೆಗೆ ಸೋನಿಯಾ ಸಮ್ಮತಿ..!

ಹೀಗೆ ನಡೆಯಲಿದೆ ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ: ಇಬ್ಬರಿಗಿಂತ ಹೆಚ್ಚು ಜನರಿದ್ದರೆ ಚುನಾವಣಾಧಿಕಾರಿ ( Congress President Election) ಆ ಹೆಸರುಗಳನ್ನು ಪ್ರದೇಶ ಕಾಂಗ್ರೆಸ್ ಸಮಿತಿಗೆ ಕಳುಹಿಸುತ್ತಾರೆ. ಮತದಾನದ ದಿನ ರಾಜ್ಯ ಸಮಿತಿಯ ಎಲ್ಲ ಸದಸ್ಯರು ಇದರಲ್ಲಿ ಭಾಗವಹಿಸುತ್ತಾರೆ. ಪಿಸಿಸಿಯ ರಾಜ್ಯ ಪ್ರಧಾನ ಕಛೇರಿಯಲ್ಲಿ ಮತದಾನ ಪತ್ರಗಳು ಮತ್ತು ಮತಪೆಟ್ಟಿಗೆಗಳ ಮೂಲಕ ಚುನಾವಣೆಗಳು ನಡೆಯುತ್ತವೆ. ಇಬ್ಬರು ಅಭ್ಯರ್ಥಿಗಳಿದ್ದರೆ ಮತದಾರರು ಒಬ್ಬರ ಹೆಸರನ್ನು ಬರೆದು ಮತಪೆಟ್ಟಿಗೆಗೆ ಹಾಕಬೇಕು. ಎರಡಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ, ಮತದಾರರು ಮೊದಲ ಎರಡು ಪ್ರಾಶಸ್ತ್ಯಗಳನ್ನು ಸಂಖ್ಯೆ 1 ಮತ್ತು 2 ಬಳಸಿ ಬರೆಯಬೇಕು. ಎರಡಕ್ಕಿಂತ ಕಡಿಮೆ ಪ್ರಾಶಸ್ತ್ಯಗಳನ್ನು ಬರೆದವರ ಮತಗಳನ್ನು ಅಮಾನ್ಯವೆಂದು ಘೋಷಿಸಲಾಗುತ್ತದೆ. ಆದಾಗ್ಯೂ, ಮತದಾರರು ಎರಡಕ್ಕಿಂತ ಹೆಚ್ಚು ಆದ್ಯತೆಗಳನ್ನು ನೀಡಬಹುದು. ಪಿಸಿಸಿಯಲ್ಲಿ ಠೇವಣಿ ಮಾಡಿದ ಮತಪೆಟ್ಟಿಗೆಯನ್ನು ಎಐಸಿಸಿಗೆ ಕಳುಹಿಸಲಾಗುತ್ತದೆ. ಸಾಕಷ್ಟು ವಿವಾದಗಳ ಬಳಿಕ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್‌ 17 ರಂದು ನಡೆಯಲಿದೆ. 

Follow Us:
Download App:
  • android
  • ios