Asianet Suvarna News Asianet Suvarna News

ಟಿಕೆಟ್‌ಗೆ ಜಯವೇ ಮಾನದಂಡ, ಕರ್ನಾಟಕದಲ್ಲಿ 90 ವರ್ಷದ ವ್ಯಕ್ತಿ ಗೆದ್ದಿಲ್ಲವೇ: ಅಶೋಕ್‌ ಗೆಹ್ಲೋಟ್‌

ತಮ್ಮ 92ನೇ ವಯಸ್ಸಿನಲ್ಲೂ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ರಾಜ್ಯದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಶ್ಯಾಮನೂರು ಶಿವಶಂಕರಪ್ಪ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆಯೇ ಹೇಳಿಕೆ ನೀಡಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌

Victory Criteria for Assembly Elections Ticket Says Rajasthan CM Ashok Gehlot grg
Author
First Published Aug 21, 2023, 1:00 AM IST

ಜೈಪುರ್‌(ಆ.21):  ಚುನಾವಣೆಗೆ ಸ್ಪರ್ಧೆಗೆ ಟಿಕೆಟ್‌ ನೀಡಲು ಮೊದಲು ಗೆಲುವೇ ಮಾನದಂಡವಾಗಿದೆ. ಕರ್ನಾಟಕದಲ್ಲಿ 90 ವರ್ಷದ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿಲ್ಲವೇ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ.

ಇಲ್ಲಿ ನಡೆದ ರಾಜ್ಯ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಗೆಹ್ಲೋಟ್‌ ಪಕ್ಷದ ಟಿಕೆಟ್‌ ಹಂಚಿಕೆ ಕುರಿತು ಮಾತನಾಡಿ ‘ಟಿಕೆಟ್‌ ನೀಡಲು ಗೆಲುವು ಮತ್ತು ವ್ಯಕ್ತಿ ಮಾನದಂಡ, ಕರ್ನಾಟಕದಲ್ಲಿ 90 ವರ್ಷದ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿಲ್ಲವೇ’ ಎಂದರು.

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಭೇಟಿಯಾದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್: ಭೇಟಿಯ ಮಹತ್ವ ಹೀಗಿದೆ..

ತಮ್ಮ 92ನೇ ವಯಸ್ಸಿನಲ್ಲೂ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ರಾಜ್ಯದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಶ್ಯಾಮನೂರು ಶಿವಶಂಕರಪ್ಪ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆಯೇ ಗೆಹ್ಲೋಟ್‌ ಈ ಹೇಳಿಕೆ ನೀಡಿದ್ದಾರೆ. ರಾಜಸ್ಥಾನದಲ್ಲಿ ಶೀಘ್ರ ವಿಧಾನಸಭೆ ಚುನಾವಣೆ ನಡೆಯಲಿದ್ದು ಟಿಕೆಟ್‌ ಹಂಚಿಕೆಗೆ ಇಲ್ಲಿಯೂ ವಯಸ್ಸಿನ ಬಗ್ಗೆ ಯಾವುದೇ ತಕರಾರುಗಳಿಲ್ಲ ಎಂಬಂರ್ಥದಲ್ಲಿ ಮಾತನಾಡಿದ್ದಾರೆ.

Follow Us:
Download App:
  • android
  • ios