Asianet Suvarna News Asianet Suvarna News

ಬಿಜೆಪಿ ಗೆಲ್ಲಿ​ಸಲು ಕಾಂಗ್ರೆಸ್‌ ಅಲ್ಪಸಂಖ್ಯಾತರಿಗೆ ಟಿಕೆಟ್‌: ಸಿ.ಎಂ.​ಇ​ಬ್ರಾಹಿಂ

ಜೆಡಿ​ಎಸ್‌ ಅಭ್ಯರ್ಥಿ ನಿಖಿಲ್‌ ಕುಮಾ​ರ​ಸ್ವಾಮಿ ಅವ​ರನ್ನು ಸೋಲಿ​ಸಿ ಬಿಜೆ​ಪಿಯನ್ನು ಗೆಲ್ಲಿ​ಸುವ ಉದ್ದೇ​ಶ​ದಿಂದಲೇ ಅಲ್ಪ​ಸಂಖ್ಯಾತ ಸಮು​ದಾ​ಯದ ಮುಖಂಡ​ನಿಗೆ ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡಿದೆ ಎಂದು ಜೆಡಿ​ಎಸ್‌ ರಾಜ್ಯಾ​ಧ್ಯಕ್ಷ ಸಿ.ಎಂ.​ಇ​ಬ್ರಾಹಿಂ ಟೀಕಿ​ಸಿ​ದರು.

Karnataka Election 2023 Congress minority ticket to win BJP Says CM Ibrahim gvd
Author
First Published Apr 30, 2023, 2:20 AM IST

ರಾಮನಗರ (ಏ.30): ಜೆಡಿ​ಎಸ್‌ ಅಭ್ಯರ್ಥಿ ನಿಖಿಲ್‌ ಕುಮಾ​ರ​ಸ್ವಾಮಿ ಅವ​ರನ್ನು ಸೋಲಿ​ಸಿ ಬಿಜೆ​ಪಿಯನ್ನು ಗೆಲ್ಲಿ​ಸುವ ಉದ್ದೇ​ಶ​ದಿಂದಲೇ ಅಲ್ಪ​ಸಂಖ್ಯಾತ ಸಮು​ದಾ​ಯದ ಮುಖಂಡ​ನಿಗೆ ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡಿದೆ ಎಂದು ಜೆಡಿ​ಎಸ್‌ ರಾಜ್ಯಾ​ಧ್ಯಕ್ಷ ಸಿ.ಎಂ.​ಇ​ಬ್ರಾಹಿಂ ಟೀಕಿ​ಸಿ​ದರು. ಜೆಡಿ​ಎಸ್‌ ಅಭ್ಯರ್ಥಿ ನಿಖಿಲ್‌ ಪರ ಪ್ರಚಾ​ರಕ್ಕೆ ತೆರ​ಳು​ವುದಕ್ಕು ಮುನ್ನ ನಗ​ರದ ಪೀರನ್‌ ಷಾ ವಲಿ ದರ್ಗಾ​ದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ನಿಖಿಲ್‌ರನ್ನು ಸೋಲಿಸಿ ಬಿಜೆಪಿ ಗೆಲ್ಲಿಸಲು ಕಾಂಗ್ರೆಸ್‌ ಪಕ್ಷ ಷಡ್ಯಂತ್ರ ನಡೆಸಿದೆ. ರಾಮನಗರ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಮತ್ತು ಜೆಡಿಎಸ್‌ ಪಕ್ಷದ ನಡುವೆ ವೈಮನಸ್ಸು ಸೃಷ್ಟಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿದೆ ಎಂದರು.

ರಾಮ​ನ​ಗರ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಗೆಲ್ಲ​ಬೇ​ಕಾ​ಗಿ​ದ್ದರೆ ಡಿ.ಕೆ.​ಶಿ​ವ​ಕು​ಮಾರ್‌ ಅವರಿಗೆ ಅಷ್ಟೊಂದು ಧೈರ್ಯ ಇದ್ದಿ​ದ್ದರೆ ತಮ್ಮ ಸಹೋ​ದರ ಡಿ.ಕೆ.​ಸು​ರೇಶ್‌ ಅಥವಾ ಅಳಿ​ಯ​ನ​ನ್ನು ಅಭ್ಯರ್ಥಿ ಮಾಡ​ಬೇ​ಕಿತ್ತು. ಅವ​ರಿಗೆ ಕಾಂಗ್ರೆಸ್‌ ಅಭ್ಯರ್ಥಿ ಸೋಲು​ತ್ತಾ​ರೆಂದು ಗೊತ್ತಿ​ರು​ವು​ದ​ರಿಂದ​ಲೇ ಮುಸ್ಲಿಂ ಅಭ್ಯ​ರ್ಥಿ​ಯನ್ನು ಕಣ​ಕ್ಕಿ​ಳಿ​ಸಿ ಬಲಿ ಪಶು ಮಾಡು​ತ್ತಿ​ದ್ದಾರೆ. ಅಂಗೈ ನೋಡ​ಲಿಕ್ಕೆ ಕನ್ನಡಿ ಬೇಕೆ ಎಂದು ಕಾಂಗ್ರೆಸ್‌ ವಿರು​ದ್ಧ ಗುಡು​ಗಿ​ದರು.

ಕೊನೆ ಚುನಾವಣೆ ಎನ್ನುವ ಗಿರಾಕಿಗಳನ್ನು ಎಂದಿಗೂ ನಂಬದಿರಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್

ನಿಖಿಲ್‌ ಕುಮಾರಸ್ವಾಮಿ ಯುವಕರಾಗಿದ್ದು, ವೈಯ​ಕ್ತಿಕ ವರ್ಚ​ಸ್ಸಿದೆ. ಎಲ್ಲ​ರನ್ನು ಒಟ್ಟಿಗೆ ಕರೆ​ದು​ಕೊಂಡು ಹೋಗುವ ಗುಣವೂ ಇದೆ. ಯಾವ ಭೂಮಿ ಕೆಂಗಲ್‌ ಹನುಂತಯ್ಯ, ದೇವೇಗೌಡ, ಕುಮಾರಸ್ವಾಮಿಗೆ ​ರಾ​ಜ​ಕೀ​ಯ​ದಲ್ಲಿ ಸ್ಥಾನ​ಮಾನ ಕಲ್ಪಿ​ಸಿತೊ ಅದೇ ಪುಣ್ಯ​ಭೂಮಿ ನಿಖಿಲ್‌ಗೆ ರಾಜ​ಕೀಯ ಅಸ್ತಿತ್ವ ಕಟ್ಟಿ​ಕೊ​ಡ​ಲಿದೆ. ಪಕ್ಷದ ಹೆಸರಿನಲ್ಲಿಯೇ ಜಾತ್ಯತೀತೆ ಇದೆ. ಹಾಗಾಗಿ ಕೇವಲ ಮುಸ್ಲಿಂ ಪ್ರದೇಶದಲ್ಲಿ ಮತಯಾಚನೆ ಮಾಡದೆ. ನಗರದ ಎಲ್ಲೆಡೆ ನಿಖಿಲ್‌ ಪರ ಮತಯಾಚನೆ ಮಾಡಲಾಗುತ್ತಿದೆ. ಇಬ್ರಾಹಿಂ ಹೇಳಿದರು. ಕಳೆದ ಚುನಾವಣೆಯಲ್ಲಿ ಸ್ವಾಭಾವಿಕವಾಗಿ ಮತದಾರರಲ್ಲಿ ಗೊಂದಲ ಇತ್ತು. ಈ ಬಾರಿ ಚುನಾವಣೆಯಲ್ಲಿ ಅಂತಹ ಗೊಂದಲಗಳು ಸಾಕಷ್ಟುಪರಿಹಾರವಾಗಿದೆ. ಹಾಗಾಗಿ ಮುಸ್ಲಿಂ ಸಮುದಾಯದ ಮತಗಳು ನಿಖಿಲ್‌ ಪರವಾಗಿ ಬಂದು ಅಧಿಕ ಮತ​ಗ​ಳಿಂದ ಗೆಲುವು ಸಾಧಿ​ಸ​ಲಿ​ದ್ದಾರೆ ಎಂದು ತಿಳಿ​ಸಿ​ದ​ರು.

ವೋಟಿ​ಗಾಗಿ ಫುಟ್‌ಪಾತ್‌ಗೆ ಬಂದ ಮೋದಿ: ಎಲ್ಲರು ಅಂಗಡಿ ಇಟ್ಟಿ​ಕೊಂಡು ಹಣ್ಣು ಮಾರಿ​ದರೆ, ಪ್ರಧಾನಿ ಮೋದಿ ಬಂಡಿ​ನಲ್ಲಿ ಇಟ್ಟು​ಕೊಂಡು ಹಣ್ಣು ಮಾರು​ತ್ತಿ​ದ್ದಾರೆ. ವೋಟಿ​ಗಾಗಿ ಅವರು ಫುಟ್‌ಪಾತ್‌ಗೆ ಬಂದಿ​ದ್ದಾರೆ. ಇದು ಒಳ್ಳೆಯ ಸಂಸ್ಕೃತಿ ಅಲ್ಲ. ಪ್ರಧಾನಿ ಈ ರೀತಿಯ ದುರ್ದೈವ ಬರ​ಬಾ​ರ​ದಿತ್ತು. ಗಂಡಿ ನೋಡಿ ಹೆಣ್ಣು ಕೊಡಿ ಎಂದು ಕೇಳ​ಬ​ಹುದು. ಆದರೆ, ಬಿಜೆಪಿಯವರು ಅಭ್ಯ​ರ್ಥಿ​ಯನ್ನು ನೋಡಿ ಮತ ಹಾಕ​ಬೇಡಿ, ಮೋದಿ​ರ​ವ​ರನ್ನು ನೋಡಿ ಮತ ಹಾಕು​ವಂತೆ ಕೇಳು​ತ್ತಿ​ದ್ದಾರೆ. ಇದು ಗಂಡಿನ ಬದಲು ಅವ​ರ​ಪ್ಪ​ನನ್ನು ನೋಡಿ ಹೆಣ್ಣು ಕೊಡಿ ಅನ್ನು​ವಂತಾ​ಗಿದೆ ಎಂದು ಇಬ್ರಾಹಿಂ ಲೇವಡಿ ಮಾಡಿ​ದ​ರು. ಈ ವೇಳೆ ಜೆಡಿಎಸ್‌ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಜೆಡಿ​ಎಸ್‌ ತಾಲೂಕು ಅಧ್ಯಕ್ಷ ರಾಜಶೇಖರ, ಮುಖಂಡರಾದ ಸುಹೇಲ್‌, ಮುನಾಜಿಲ ಆಗಾ, ಎಂ.ಜಿ.ಪೈರೋಜ್‌, ಆರಿಫ್‌ ಖುರೇಷಿ, ಗ್ಯಾಬ್ರಿಯಲ, ಮಹಮದ್‌, ಮತೀನ್‌ ಮತ್ತಿ​ತ​ರರು ಹಾಜ​ರಿ​ದ್ದರು.

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 22,18,055 ಮತದಾರರು: ಡಿಸಿ ಯಶವಂತ ಗುರುಕರ್

ನಿಖಿಲ್‌ ಪರ ಸಿ.ಎಂ.​ಇ​ಬ್ರಾಹಿಂ ಪ್ರಚಾರ: ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಶುಕ್ರವಾರ ಸಂಜೆ ನಗರದಲ್ಲಿ ಬೈಕ್‌ ರ್ಯಾಲಿ ನಡೆಸಿ, ಮತಯಾಚನೆ ಮಾಡಿದರು. ನಗರದ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ಪಕ್ಷದ ರಾಜ್ಯಾಧ್ಯಕ್ಷ ಇಬ್ರಾಹಿಂ ಹಾಗೂ ಸ್ಥಳೀಯ ಮುಸ್ಲಿಂ ಮುಖಂಡರು ನಂತರ ಬೈಕ್‌ ರ್ಯಾಲಿ ನಡೆಸಿದರು. ಇದಕ್ಕು ಮುನ್ನಾ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರು, ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಗರದಲ್ಲಿ ಸಂಜೆ ಆರಂಭವಾದ ಬೈಕ್‌ ರಾರ‍ಯಲಿ ವಿವಿಧ ಬಡಾವಣೆಯಲ್ಲಿ ಸಂಚಾರ ನಡೆಸಿತು. ಈ ವೇಳೆ ನಗರಸಭೆಯ ಜೆಡಿಎಸ್‌ ಸದಸ್ಯರು ಹಾಗೂ ಮುಖಂಡರು ಸಾಥ್‌ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Follow Us:
Download App:
  • android
  • ios