Asianet Suvarna News Asianet Suvarna News

ಬಜೆಟ್ ಅಧಿವೇಶನಕ್ಕೆ ಬಾರದಿದ್ದರೆ ಜೋಕೆ, 'ಕೈ' ಮಾಸ್ಟರ್ ಸ್ಟ್ರೋಕ್

ಆಪರೇಷನ್ ಕಮಲ ಆಯ್ತು ಈಗ ಆಪರೇಷನ್ ಬಜೆಟ್ ಮೈತ್ರಿ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಹಿನ್ನಲೆಯಲ್ಲಿ ಬಜೆಟ್ ಅಧಿವೇಶನಕ್ಕೆ ಕಡ್ಡಾಯವಾಗಿ ಎಲ್ಲಾ ಶಾಸಕರು ಹಾಜರಾಗಬೇಕೆಂದು ಕಾಂಗ್ರೆಸ್ ಖಡಕ್ ಎಚ್ಚರಿಕೆ ನೀಡಿದೆ.

Karnataka Congress Planed VIP lanes to His MLAs For Budget Session 2019
Author
Bengaluru, First Published Feb 4, 2019, 4:51 PM IST

ಮೈಸೂರು, (ಫೆ.4): ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಹೈಡ್ರಾಮಾ ಶುರುವಾಗಿದೆ. ಇಷ್ಟು ದಿನ ಆಪರೇಷನ್ ಕಮಲ ಈಗ ಆಪರೇಷನ್ ಬಜೆಟ್ ಆಗಿದೆ.

ಅಂದರೆ ಕೆಲ ಅತೃಪ್ತ ಕಾಂಗ್ರೆಸ್ ಶಾಸಕರನ್ನು ರಾಜ್ಯ ಬಜೆಟ್ ಅಧಿವೇಶನಕ್ಕೆ ಬಾರದಂತೆ ಬಿಜೆಪಿ ತಂತ್ರ ರೂಪಿಸಿದ್ದು, ಈ ಮೂಲಕ ಮೈತ್ರಿ ಸರ್ಕಾರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ್ಲಾನ್ ಮಾಡಿದೆ. ಆದ್ರೆ, ಇದಕ್ಕೆ ಕಾಂಗ್ರೆಸ್ ಕೂಡ ಬಿಜೆಪಿ ತಂತ್ರಕ್ಕೆ  ಪ್ರತಿತಂತ್ರ ರೂಪಿಸಿದೆ. ಅದುವೇ ವಿಪ್.  

HDK ಬಜೆಟ್ ಮಂಡನೆ ಡೌಟ್ ಎಂದ BJP, ಅಲರ್ಟ್ ಆದ ಮೈತ್ರಿ ಸರ್ಕಾರ

ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ 'ವಿಪ್ ಉಲ್ಲಂಘನೆ ಮಾಡುವ ಶಾಸಕರಿಗೆ ಕಾನೂನು ಕ್ರಮ‌ ಕಟ್ಟಿಟ್ಟಬುತ್ತಿ' ಎಂದು ಶಾಸಕರಿಗೆ ಏಚ್ಚರಿಕೆ ನೀಡಿದ್ದಾರೆ.

 ಬಜೆಟ್​​​​ಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಜನರಿಗೆ ಅನುಕೂಲವಾಗುವ ರೀತಿ ಜನಪ್ರಿಯ ಬಜೆಟ್ ಮಂಡನೆಯಾಗಲಿದೆ.  ನಮ್ಮ‌ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಂತಹ ಬಜೆಟ್ ಮಂಡಿಸಲಿದ್ದಾರೆ.

ಅಧಿವೇಶನಕ್ಕೆ 80 ಶಾಸಕರು ಬಂದು ಭಾಗವಹಿಸುವ ವಿಶ್ವಾಸ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಒಂದು 3 ಜನ ಬಿಜೆಪಿಯವರ ಮಾತು ಕೇಳಿ ಈಗ ಸುಮ್ಮನಿರಬಹುದು.  

ಆದರೆ ಬಿಜೆಪಿಯಿಂದ ಹೋದವರಿಗೆ ಯಾವ ರೀತಿಯ ಪರಿಸ್ಥಿತಿ ಬರುತ್ತದೆ ಎಂಬುದು ಅವರಿಗೆ ಗೊತ್ತಿದೆ. ಈ ಹಿಂದೆ ಬಿಜೆಪಿ ಬೆಂಬಲಿಸಿದ್ದ ಪಕ್ಷೇತರರನ್ನು ಯಾವ ರೀತಿ ನಡೆಸಿಕೊಂಡು ಕೈ ಬಿಟ್ಟಿದ್ದರು ಎಂದು ಗೊತ್ತಿದೆ. 

ಒಂದು ವೇಳೆ ಯಾರಾದರೂ ವಿಪ್ ಉಲ್ಲಂಘಸಿದ್ರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗುಂಡೂರಾವ್ ಸಮ್ಮಿಶ್ರ ಸರ್ಕಾರದ ಶಾಸಕರಿಗೆ ಏಚ್ಚರಿಕೆ ನೀಡಿದ್ದಾರೆ.

Follow Us:
Download App:
  • android
  • ios