Asianet Suvarna News Asianet Suvarna News

ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸಲು ಸಿಎಂ ಭೇಟಿಯಾಗಿದ್ದ ಕುಮಾರಸ್ವಾಮಿ..!

ಮೊನ್ನೇ ಅಷ್ಟೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ಅಸಲಿ ಕಾರಣ ಬಹಿರಂಗವಾಗಿದೆ.

JDS BJP congress alliance in Mandya central cooperative bank Election rbj
Author
Bengaluru, First Published Nov 16, 2020, 7:52 PM IST

ಮೈಸೂರು, (ನ.16): ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಸಿಎಂ ಬಿಎಸ್ ಯಡಿಯೂರಪ್ಪನವರನ್ನ ಭೇಟಿ ಮಾಡಿರುವ ಉದ್ದೇಶ ಬಹಿರಂಗವಾಗಿದ್ದು, ಅಧಿಕಾರಿಂದ ಕಾಂಗ್ರೆಸ್‌ ಅನ್ನು ದೂರವಿಡಲು ಈ ಭೇಟಿ ನಡೆದಿದೆ ಎಂದು ತಿಳಿದುಬಂದಿದೆ.

ಹೌದು..ನಾಳೆ ಅಂದ್ರೆ ನವೆಂಬರ್ 17 ರಂದು ನಡೆಯಲಿರುವ ಮಂಡ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನೆಲೆ ಜಾತ್ಯಾತೀತ ಜನತಾ ದಳ (ಜೆಡಿಎಸ್) ತನ್ನ ಹಳೆ ಮಿತ್ರ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೊಮ್ಮೆ ತಮ್ಮ ಮಿತ್ರತ್ವವನ್ನು ಸ್ಥಾಪಿಸುವ ನಿರೀಕ್ಷೆ ಇದೆ.

ಯಡಿಯೂರಪ್ಪ-ಕುಮಾರಸ್ವಾಮಿ ದಿಢೀರ್ ಭೇಟಿ: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ

 ಕಾಂಗ್ರೆಸ್ ಅನ್ನು ಅಧ್ಯಕ್ಷ ಸ್ಥಾನದಿಂದ ದೂರವಿಡಲು ಎರಡೂ ಪಕ್ಷಗಳು ಮತ್ತೆ ಒಂದಾಗಲಿದೆ ಎನ್ನಲಾಗಿದೆ. ಅತೃಪ್ತ, ನ್ಯಾಮಿನಿ ಡೈರೆಕ್ಟರ್ ಹಾಗೂ ಮತದಾನದ ಹಕ್ಕು ಹೊಂದಿರುವ ಇಬ್ಬರು ನಿರ್ದೇಶಕ ಬೆಂಬಲ ಪಡೆದು ಗದ್ದುಗೆ ಹಿಡಿಯುವ ಕಸರತ್ತು  ಜೆಡಿಎಸ್ ನಡೆಸಿದೆ. ಈ ಸಂಬಂಧ ಕುಮಾರಸ್ವಾಮಿ ಅವರು ಯಡಿಯೂರಪ್ಪನವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಜೆಡಿಎಸ್ ಲೆಕ್ಕಾಚಾರ
12ಸದಸ್ಯ ಬಲ ಹೊಂದಿರುವ MDCC ಬ್ಯಾಂಕ್ 12ರ ಪೈಕಿ 8ಕಾಂಗ್ರೆಸ್, 4 ಜೆಡಿಎಸ್, ಓರ್ವ ನಾಮನಿರ್ದೇಶಿತ, ಜಿಲ್ಲಾ ರಿಜಿಸ್ಟ್ರಾರ್, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಅಧಿಕಾರಿಗೂ ಮತದಾನದ ಹಕ್ಕು ಇದೆ. ಈ ಮೂರು ಮತಗಳು ಬಹುತೇಕ ಬಿಜೆಪಿ ಸರ್ಕಾರದ ಪರವೇ ಬರಲಿವೆ. ಹಾಗಾಗಿ ಬಿಜೆಪಿ ಸರ್ಕಾರದ ಬೆಂಬಲ ಪಡೆದು ಕೈ ಅತೃಪ್ತ ಸದಸ್ಯನ ಸೆಳೆದು ಅಧಿಕಾರ ಹಿಡಿಯಲು ಜೆಡಿಎಸ್ ಪ್ಲಾನ್ ಮಾಡಿದೆ.

ಈ ಹಿನ್ನೆಲೆಯಲ್ಲಿ ನವೆಂಬರ್ 17 ರಂದು ನಡೆಯಲಿರುವ ಮಂಡ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಭಾರೀ ಕುತೂಹಲ ಮೂಡಿಸಿದ್ದು, ಕೊನೆ ಹಂತದಲ್ಲಿ ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios