Asianet Suvarna News Asianet Suvarna News

ಭ್ರಷ್ಟಾಚಾರದ ಬಗ್ಗೆ ಮಾತಾಡುವ ನೈತಿಕತೆ ಬಿಜೆಪಿಗಿಲ್ಲ: ಶೆಟ್ಟರ್‌ ಕಿಡಿ

ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ. ಹಿಂದೆ ಅಧಿಕಾರದಲ್ಲಿದ್ದ ವೇಳೆ ಅವರು 40% ಭ್ರಷ್ಟಾಚಾರ ಆರೋಪದ ಕುರಿತು ಉತ್ತರ ನೀಡಲಿಲ್ಲ. ಇದರಿಂ ದಾಗಿಯೇ ಜನಮನ್ನಣೆ ಕಳೆದುಕೊಂಡು ಸೋಲು ಅನುಭವಿಸುವಂತಾಯಿತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಕಿಡಿಕಾರಿದರು.

Congress MLC Jagadish Shettar Slams On BJP At Hubballi gvd
Author
First Published Aug 16, 2023, 11:26 AM IST

ಹುಬ್ಬಳ್ಳಿ (ಆ.16): ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ. ಹಿಂದೆ ಅಧಿಕಾರದಲ್ಲಿದ್ದ ವೇಳೆ ಅವರು 40% ಭ್ರಷ್ಟಾಚಾರ ಆರೋಪದ ಕುರಿತು ಉತ್ತರ ನೀಡಲಿಲ್ಲ. ಇದರಿಂ ದಾಗಿಯೇ ಜನಮನ್ನಣೆ ಕಳೆದುಕೊಂಡು ಸೋಲು ಅನುಭವಿಸುವಂತಾಯಿತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಕಿಡಿಕಾರಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ 120 ಸ್ಥಾನಗಳಿಂದ 60 ಸ್ಥಾನಕ್ಕೆ ಇಳಿಯುತ್ತದೆ ಎಂದರೆ ಏನರ್ಥ? ಈ ರೀತಿಯ ಆರೋಪ ಹೊರೆಸುವ ನೈತಿಕತೆ ಬಿಜೆಪಿ ಉಳಿದಿಲ್ಲ ಎಂದರು.

ಇನ್ನು, ‘ಅಡುಗೆ ಇದ್ದಾಗ ಶೆಟ್ಟರ್‌ ಊಟಕ್ಕೆ ಬರುತ್ತಾರೆ’ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಎರಡು ವರ್ಷದಿಂದ ಜಗದೀಶ್‌ ಶೆಟ್ಟರ್‌ ಯಾವ ಅಧಿಕಾರ ದಲ್ಲಿದ್ರು ಎಂಬುದು ಬಿಜೆಪಿಯವರಿಗೆ ಗೊತ್ತಿರಲಿಲ್ಲವೆ? ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ನಾನು ಸಚಿವನಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದಿದ್ದೆ. ಅವಾಗಲೇ ಬಿಜೆಪಿ ಸೋಲುತ್ತೆ ಅಂತ ಅವರಿಗೆ ಅನ್ನಿಸಿರಬೇಕು. ಅಂದರೆ, ಕಾಂಗ್ರೆಸ್‌ ಮೊದಲೇ ಗೆಲ್ಲುತ್ತೆ ಅಂತ ಬಿಜೆಪಿಯವರಿಗೂ ಖಾತ್ರಿ ಆಗಿತ್ತು ಎಂದು ತಿರುಗೇಟು ನೀಡಿದರು.

ಮೇಕೆದಾಟು ಯೋಜನೆಗೆ ಅಡ್ಡಿ ಬೇಡ: ತಮಿಳುನಾಡಿಗೆ ಡಿಕೆಶಿ ಮನವಿ

ರಾಜಕೀಯದಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲ: ಉನ್ನತ ಉದ್ಯೋಗಗಳಿಗೆ ವಿದ್ಯಾರ್ಹತೆ ಬೇಕಾಗಿದೆ. ಆದರೆ ರಾಜಕೀಯ ವ್ಯಕ್ತಿಗಳಿಗೆ ಬೇಕಾಗಿಲ್ಲ. ಅಲ್ಲದೇ ರಾಜಕೀಯದಲ್ಲಿ ಪ್ರಾಮಾಣಿಕ ಕೆಲಸ ಮಾಡಿದವರಿಗೆ ಬೆಲೆ ಇಲ್ಲದಂತಾಗಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ವಿಷಾದಿಸಿದರು. ಸಮೀಪದ ಸಿರಿಗೇರಿ ಗ್ರಾಮದಲ್ಲಿ ‘ಕರ್ನಾಟಕ ರಾಜಕೀಯ ಅಕಾಡೆಮಿ’ ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯದಿಂದ ಸಾಕಷ್ಟು ಅನುಭವಗಳನ್ನು ಕಲಿತಿದ್ದೇನೆ. ರಾಜಕೀಯವೇ ಎಲ್ಲವೂ ಅಲ್ಲ. ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಅಕಾಡೆಮಿಯಿಂದ ಉತ್ತಮ ತರಬೇತಿಗಳು ನಡೆಯಲಿ ಎಂದು ಶುಭ ಹಾರೈಸಿದರು.

ಸಚಿವ ಖೂಬಾ ನನ್ನನ್ನು ಲಂಬಾಣಿ ಚೋರ್‌ ಅಂತ ಕರೀತಾರೆ: ಪ್ರಭು ಚವ್ಹಾಣ್‌

ಸರ್ಕಾರದವರು ಮಾಡಬೇಕಾದ ಕೆಲಸವನ್ನು ಅಕಾಡೆಮಿಯ ಒಬ್ಬ ಸಾಮಾನ್ಯ ವ್ಯಕ್ತಿ ಕೈಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಮಾತನಾಡಿ, ರಾಜಕೀಯ ವ್ಯವಸ್ಥೆಯಲ್ಲಿ ಯಾವುದೂ ಶಾಶ್ವತವಲ್ಲ. ಸಾಮಾಜಿಕ ಜೀವನದಲ್ಲಿ ಏರುಪೇರನ್ನು ಎದುರಿಸಿ ಮುನ್ನಡೆಯಬೇಕು. ನಾನು ಬಸವಣ್ಣನವರ ಅನುಯಾಯಿ. ಯಾವುದೇ ಜಾತಿ, ಧರ್ಮಕ್ಕೆ ಸೀಮಿತರಾಗದೆ ಎಲ್ಲರೂ ಒಂದೇ ಎನ್ನುವ ಭಾವನೆ ಇಟ್ಟುಕೊಳ್ಳಬೇಕು. ಅಲ್ಲದೇ ಮುಂದಿನ ದಿನಮಾನಗಳಲ್ಲಿ ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದರು. ಕರ್ನಾಟಕ ಅಕಾಡೆಮಿಯ ಗೌರಾಧ್ಯಕ್ಷ ಸಿರಿಗೇರಿ ಎರ್ರಿಸ್ವಾಮಿ, ಶ್ರೀ ನಾಗನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿ ಮಹಾರುದ್ರಗೌಡ, ಗ್ರಾಪಂ ಉಪಾಧ್ಯಕ್ಷ ಎಸ್‌. ಎರ್ರೆಪ್ಪ, ಶಶಿ ಇದ್ದರು.

Follow Us:
Download App:
  • android
  • ios