Asianet Suvarna News Asianet Suvarna News

ಡಿಕೆಶಿ ಎಚ್ಚರಿಕೆ ವಿಚಾರ : ಸ್ಪಷ್ಟನೆ ಕೊಟ್ಟ ಜಮೀರ್‌

  • ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಜಮೀರ್ ವಾಗ್ದಾಳಿ
  • ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಚ್ಚರಿಕೆ ವಿಚಾರಕ್ಕೆ ಜಮೀರ್ ಸ್ಪಷ್ಟನೆ
  • ಕುಮಾರಸ್ವಾಮಿಗೂ ನನಗೂ ಆಪ್ತ ಸ್ನೇಹ ಸಂಬಂಧವಿದೆ ಎಂದ ಜಮೀರ್
Congress Leader Zameer Ahmed reacts on DK Shivakumar Warning snr
Author
Bengaluru, First Published Jun 13, 2021, 7:39 AM IST

ಬೆಂಗಳೂರು (ಜೂ.13): ನಾನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಮಾತನಾಡಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನನಗೆ ಎಚ್ಚರಿಕೆ ನೀಡಿಲ್ಲ ಎಂದು ಶಾಸಕ ಜಮೀರ್‌ ಅಹಮದ್‌ ಖಾನ್‌ ಸಮಜಾಯಿಷಿ ನೀಡಿದ್ದಾರೆ.

‘ಕುಮಾರಸ್ವಾಮಿ ಹೇಗೆ ಮಾತಾಡುತ್ತಾರೋ ನಾನೂ ಅದೇ ರೀತಿ ಮಾತನಾಡುತ್ತೇನೆ. ಅವರ ಜೊತೆ ನನಗೆ ಅಂತಹ ಸ್ನೇಹ ಸಂಬಂಧವಿದೆ. 

ಜಮೀರ್‌ ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತಾಡಲಿ: ನಿಖಿಲ್‌ ಗರಂ ..

ಮುಖ್ಯಮಂತ್ರಿ ಆಗಿದ್ದಾಗಲೂ ಏಕವಚನದಲ್ಲೇ ಮಾತನಾಡುತ್ತಿದ್ದರು. ಶಿವಕುಮಾರ್‌ ಅವರು ನನಗೆ ವಾರ್ನಿಂಗ್‌ ಕೊಟ್ಟಿಲ್ಲ. ಮಾತನಾಡುವಾಗ ನೋಡಿಕೊಂಡು ಮಾತನಾಡಿ ಎಂದಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಪಕ್ಷದ ಬಗ್ಗೆ ಮಾತನಾಡಿಲ್ಲ. ವೈಯಕ್ತಿಕವಾಗಿ ಮಾತನಾಡಿದ್ದೇನೆ. ಇದು ಇಲ್ಲಿಗೇ ಮುಗಿದ ವಿಚಾರ ಎಂದು ಹೇಳಿದರು.

Follow Us:
Download App:
  • android
  • ios