Asianet Suvarna News Asianet Suvarna News

Ramanagara: ಬಿಜೆಪಿಯ ನಿಜ​ವಾದ ಬಿ ಟೀಮ್‌ ಕಾಂಗ್ರೆಸ್‌: ನಿಖಿಲ್‌ ಕುಮಾ​ರ​ಸ್ವಾಮಿ

ಕೋಮು​ವಾದಿ ಪಕ್ಷ ಅಧಿ​ಕಾ​ರಕ್ಕೆ ಬರಲು ಸಹ​ಕಾರ ನೀಡಿದ ಹಾಗೂ ಹಿಜಾಬ್‌, ಹಲಾಲ್‌ ಪರ​ವಾಗಿ ಧ್ವನಿ ಎತ್ತದ ಕಾಂಗ್ರೆಸ್‌ ಪಕ್ಷ ಬಿಜೆ​ಪಿಯ ನಿಜ​ವಾದ ಬಿ ಟೀಮ್‌ ಎಂದು ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಹರಿ​ಹಾ​ಯ್ದರು. 

Congress is the real B team of BJP Says Nikhil Kumaraswamy At Ramanagara gvd
Author
First Published Jan 12, 2023, 8:24 PM IST

ರಾಮ​ನ​ಗರ (ಜ.12): ಕೋಮು​ವಾದಿ ಪಕ್ಷ ಅಧಿ​ಕಾ​ರಕ್ಕೆ ಬರಲು ಸಹ​ಕಾರ ನೀಡಿದ ಹಾಗೂ ಹಿಜಾಬ್‌, ಹಲಾಲ್‌ ಪರ​ವಾಗಿ ಧ್ವನಿ ಎತ್ತದ ಕಾಂಗ್ರೆಸ್‌ ಪಕ್ಷ ಬಿಜೆ​ಪಿಯ ನಿಜ​ವಾದ ಬಿ ಟೀಮ್‌ ಎಂದು ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಹರಿ​ಹಾ​ಯ್ದರು. ನಗ​ರದ ಆರ್‌ ಎನ್‌ ಫಂಕ್ಷನ್‌ ಹಾಲ್‌ನಲ್ಲಿ ನಡೆದ ಕಾಂಗ್ರೆಸ್‌ ಮುಖಂಡರ ಜೆಡಿ​ಎಸ್‌ ಸೇರ್ಪಡೆ ಕಾರ್ಯ​ಕ್ರ​ಮ​ದಲ್ಲಿ ಮಾತ​ನಾ​ಡಿದ ಅವರು, ಕೋಮು​ವಾದಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಸಾಮ್ಯತೆ ಇದೆ. ಹೀಗಾ​ಗಿಯೇ ಬಿಜೆಪಿ ಹಿಂದೂ-ಮುಸ​ಲ್ಮಾ​ನರ ನಡುವೆ ಸಂಘ​ರ್ಷದ ವಾತಾ​ವ​ರ​ಣ ಸೃಷ್ಟಿ​ಸು​ತ್ತಿ​ದ್ದರೂ ಕಾಂಗ್ರೆಸ್‌ ಪ್ರತ್ಯು​ತ್ತರ ನೀಡುವ ಕೆಲಸ ಮಾಡು​ತ್ತಿಲ್ಲ ಎಂದು ಟೀಕಿ​ಸಿ​ದರು.

ಬಿಜೆಪಿಯವರು ಟಿಪ್ಪು ಸುಲ್ತಾನ್‌, ಹಿಜಾಬ್‌, ಹಲಾಲ್‌ ವಿಚಾ​ರ​ಗ​ಳನ್ನು ಮುಂದಿ​ಟ್ಟು​ಕೊಂಡು ಅಲ್ಪ​ಸಂಖ್ಯಾ​ತರ ಮೇಲೆ ನಿರಂತ​ರ​ವಾಗಿ ದಾಳಿ ಮಾಡುತ್ತಿದೆ. ಇದಕ್ಕೆ ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾ​ಮಿ​ರ​ವರು ದಿಟ್ಟಉತ್ತರ ನೀಡುವ ಮೂಲಕ ಜೆಡಿ​ಎಸ್‌ ನ ಜಾತ್ಯ​ತೀತ ಬದ್ಧ​ತೆ​ಯನ್ನು ಪ್ರದ​ರ್ಶಿ​ಸಿ​ದರು. ಈ ಕೆಲ​ಸ​ವನ್ನು ಕಾಂಗ್ರೆಸ್‌ ನಾಯ​ಕರು ಏಕೆ ಮಾಡ​ಲಿಲ್ಲ ಎಂದು ಪ್ರಶ್ನಿ​ಸಿ​ದರು. ರಾಜ್ಯ​ದಲ್ಲಿ ಮೂರು​ವರೆ ವರ್ಷಗಳಿಂದ ಬಿಜೆ​ಪಿ​ಯ​ವರು ಆಡ​ಳಿತ ನಡೆ​ಸು​ತ್ತಿ​ದ್ದಾರೆ. ಇಷ್ಟುವರ್ಷ ರಾಮ​ನ​ಗ​ರ​ದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಆಲೋ​ಚನೆ ಬರ​ಲಿಲ್ಲ. ಈಗ ಚುನಾ​ವಣೆ ಸಮ​ಯ​ದಲ್ಲಿ ರಾಮ ಮಂದಿರ ನಿರ್ಮಾ​ಣಕ್ಕೆ ಮುಂದಾ​ಗಿ​ದ್ದಾರೆ. 

ಜೆಡಿ​ಎಸ್‌ ಅಧಿ​ಕಾ​ರಕ್ಕೆ ಬಂದಲ್ಲಿ ಪಂಚ​ರತ್ನ ಜಾರಿಗೆ: ನಿಖಿಲ್‌ ಕುಮಾ​ರ​ಸ್ವಾ​ಮಿ

ನಾವು ಹಿಂದು​ಗ​ಳೇ ಆಗಿ​ದ್ದೇವೆ. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ಥರು ಸಹೋ​ದ​ರ​ರಂತೆ ಬಾಳ್ವೆ ಮಾಡ​ಬೇ​ಕೆಂದು ನಮ್ಮ ಹಿಂದುತ್ವ ಹೇಳಿ​ಕೊ​ಡು​ತ್ತದೆ. ಬಿಜೆ​ಪಿ​ಯ​ವರು ಹಿಂದು ಧರ್ಮವನ್ನು ಗುತ್ತಿಗೆ ಪಡೆ​ದ​ವ​ರಂತೆ ವರ್ತಿ​ಸು​ವುದು ಬೇಡ ಎಂದು ಹೇಳಿ​ದ​ರು. 2018ರ ಚುನಾ​ವ​ಣೆ​ಯಲ್ಲಿ ಅಲ್ಪ​ಸಂಖ್ಯಾ​ತ​ರನ್ನು ಸೆಳೆ​ಯುವ ಸಲು​ವಾಗಿ ಜೆಡಿ​ಎಸ್‌ ಪಕ್ಷ​ವನ್ನು ಬಿಜೆ​ಪಿಯ ಬಿ ಟೀಮ್‌ ಎಂದು ಕಾಂಗ್ರೆಸ್‌ ನಾಯ​ಕರು ಅಪ​ಪ್ರ​ಚಾರ ಮಾಡಿ​ದರು. ಅಂತಿ​ಮ​ವಾಗಿ ಯಾವ ಪಕ್ಷಕ್ಕೂ ಸ್ಪಷ್ಟಬಹು​ಮತ ಬರ​ದಿ​ದ್ದಾಗ ಕಾಂಗ್ರೆಸ್‌ ನಾಯ​ಕರು ಜೆಡಿ​ಎಸ್‌ನೊಂದಿಗೆ ಮೈತ್ರಿ​ಗಾಗಿ ನಮ್ಮ ಮನೆ ಬಾಗಿ​ಲಿಗೆ ಬಂದರು. ಮುಂಬಾ​ಗ​ಲಲ್ಲಿ ಬಂದು ಅಧಿ​ಕಾರ ನೀಡಿ, ಹಿಂಬಾ​ಗಿ​ಲಿ​ನಿಂದ ಸರ್ಕಾರ ಉರು​ಲಿ​ಸುವ ಕೆಲಸ ಮಾಡಿ​ದ​ರು. 

ಬಿಜೆಪಿ ಸೇರ್ಪಡೆ​ಯಾಗಿ ಮೈತ್ರಿ ಸರ್ಕಾರ ಉರು​ಳಿ​ಸಿದ ಕಾಂಗ್ರೆಸ್‌ 17 ಶಾಸ​ಕರು ಯಾರ ಶಿಷ್ಯರು ಎಂಬುದು ಎಲ್ಲ​ರಿಗೂ ಗೊತ್ತಿದೆ. ಕಾಂಗ್ರೆಸ್‌ ಪಕ್ಕೆ ಯಾವ ನೈತಿ​ಕತೆ ಉಳಿ​ದಿದೆ ಎಂದು ನಿಖಿಲ್‌ ಕುಮಾ​ರ​ಸ್ವಾಮಿ ಟೀಕಿ​ಸಿ​ದರು. ಜೆಡಿ​ಎಸ್‌ ಮುಖಂಡ ಗಜ​ಫರ್‌ ಆಲಿಬಾಬು ಮಾತ​ನಾಡಿ, ರಾಮ​ನ​ಗ​ರ​ದಲ್ಲಿ ಹಿಂದೂ ಮುಸ್ಲಿಂ ಸಹೋ​ದ​ರ​ರಂತೆ ಜೀವನ ನಡೆಸುವ ಶಾಂತಿಯ ವಾತಾ​ವ​ರಣ, ಗುಣ​ಮ​ಟ್ಟದ ಶಿಕ್ಷಣ, ಉದ್ಯೋಗ ಹಾಗೂ ಸರ್ಕಾರಿ ಕಚೇ​ರಿ​ಗ​ಳಲ್ಲಿ ಜನರ ಕೆಲಸ ಕಾರ್ಯ​ಗಳು ಸುಗ​ಮ​ವಾಗಿ ನಡೆ​ಯಲು ಮಾಜಿ ಪ್ರಧಾನಿ ದೇವೇ​ಗೌಡ ಮತ್ತು ಮಾಜಿ ಸಿಎಂ ಕುಮಾ​ರ​ಸ್ವಾಮಿ ಕಾರ​ಣ​ವೆಂದು ಹೇಳಿ​ದ​ರು.

ಮಾಜಿ ಸಿಎಂ ಕುಮಾ​ರ​ಸ್ವಾ​ಮಿ​ರ​ವರು ರಾಮ​ನ​ಗ​ರ​ವನ್ನು ಜಿಲ್ಲೆ​ಯ​ನ್ನಾಗಿ ರಚನೆ ಮಾಡದೆ ಹೋಗಿ​ದ್ದರೆ ಇನ್ನೂ 25 ವರ್ಷ​ಗ​ಳಾ​ಗಿ​ದ್ದರು ಯಾರಿಂದಲೂ ಸಾಧ್ಯ​ವಾ​ಗು​ತ್ತಿ​ರ​ಲಿಲ್ಲ. ಜನರು ಬೆಂಗ​ಳೂ​ರಿಗೆ ಅಲೆ​ದಾ​ಡು​ವು​ದನ್ನು ತಪ್ಪಿ​ಸಿ​ದರು. ರಾಮ​ನ​ಗ​ರ​ದಲ್ಲಿ ನಾಲ್ಕು ಕಟ್ಟ​ಡ​ಗ​ಳನ್ನು ನಿರ್ಮಿ​ಸಿದ್ದು ಮಾತ್ರ​ವ​ಲ್ಲದೆ ರಾಜೀವ್‌ ಗಾಂಧಿ ವಿವಿ, ಹೈಟೆಕ್‌ ಜಿಲ್ಲಾ​ಸ್ಪತ್ರೆ ನಿರ್ಮಾಣ ಸೇರಿ​ದಂತೆ ಕೋಟ್ಯಂತರ ರುಪಾಯಿ ಅನು​ದಾನ ತಂದು ಅಭಿ​ವೃ​ದ್ಧಿಗೆ ಮುನ್ನುಡಿ ಬರೆ​ದರು ಎಂದು ತಿಳಿ​ಸಿ​ದರು. ಕೋಮು​ವಾದಿ ಬಿಜೆಪಿ ಹಿಜಾಬ್‌, ಹಲಾಲ್‌, ಅಜಾನ್‌ ಹೆಸ​ರಿ​ನಲ್ಲಿ ದಾಳಿ ಮಾಡಿ​ದಾ​ಗ​ಲೆಲ್ಲ ಕುಮಾ​ರ​ಸ್ವಾಮಿ ಅಲ್ಪ​ಸಂಖ್ಯಾ​ತರ ಬೆನ್ನಿಗೆ ನಿಂತರು. ಅಲ್ಪ​ಸಂಖ್ಯಾ​ತರೇ ಹೆಚ್ಚಾಗಿ ವಾಸಿ​ಸುವ ವಾರ್ಡು​ಗ​ಳ ಅಭಿ​ವೃದ್ದಿಗೆ ಹೆಚ್ಚಿನ ಅನು​ದಾನ ನೀಡಿ​ದರು. 

ನೆರೆ ಹಾವಳಿಯಲ್ಲಿ ಸಂತ್ರ​ಸ್ತ​ರಾ​ದ​ವ​ರಿಗೆ ಪರಿ​ಹಾರ ಒದ​ಗಿ​ಸಿ​ದರು. ಇಷ್ಟಾ​ದರು ರಾಮ​ನಗರ ಕ್ಷೇತ್ರಕ್ಕೆ 25 ವರ್ಷ​ಗ​ಳಲ್ಲಿ ಕುಮಾ​ರ​ಸ್ವಾಮಿ ಕೊಡುಗೆ ಏನೆಂದು ಕೆಲ​ವರು ಪ್ರಶ್ನಿ​ಸು​ತ್ತಿ​ದ್ದಾರೆ. ಅವ​ರದೇ ಪಕ್ಷ ಅಧಿ​ಕಾ​ರ​ದ​ಲ್ಲಿ​ದ್ದಾಗ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನೆಂದು ಕಾಂಗ್ರೆಸ್‌ ಮತ್ತು ಬಿಜೆಪಿ ನಾಯ​ಕರು ಉತ್ತ​ರಿ​ಸಲಿ ಎಂದು ಗಜ​ಫರ್‌ ಆಲಿ ಬಾಬು ಸವಾ​ಲು ಹಾಕಿ​ದರು. ನಗ​ರ​ಸಭಾ ಸದ​ಸ್ಯ​ರಾದ ಗ್ಯಾಬ್ರಿ​ಯಲ್‌, ಮುನ​ಜಿಲ್‌ ಆಗಾ, ಜೆಡಿ​ಎಸ್‌ ತಾಲೂಕು ಅಧ್ಯಕ್ಷ ರಾಜ​ಶೇ​ಖರ್‌, ರಾಜ್ಯ ವಕ್ತಾರ ಉಮೇಶ್‌, ನಗರ ಘಟಕ ಅಧ್ಯಕ್ಷ ಸುಹೇಲ್‌ ಪಾಷ , ಮುಖಂಡ​ರಾದ ಅತಾ​ವುಲ್ಲಾ, ಸುಹೇಲ್‌ ಪಾಷ, ಇರ್ಷಾದ್‌ ಅಹ​ಮದ್‌, ಮತೀನ್‌ ಮತ್ತಿ​ತ​ರರು ಉಪ​ಸ್ಥಿ​ತ​ರಿ​ದ್ದ​ರು.

ಡಿಕೆ ಸಹೋ​ದ​ರ​ರ ಪಾಲಿಗೆ ಇಕ್ಬಾಲ್‌ ಕುರಿ ಇದ್ದಂತೆ: ರಾಮ​ನ​ಗರ ಕ್ಷೇತ್ರ​ದಲ್ಲಿ ತಮ್ಮ ವೋಟ್‌ ಬ್ಯಾಂಕ್‌ ಅನ್ನು ಭದ್ರಪಡಿ​ಸಿ​ಕೊ​ಳ್ಳಲು ಡಿಕೆ ಸಹೋ​ದ​ರರು ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಅವ​ರನ್ನು ಕುರಿ​ಯಂತೆ ಬಳ​ಸಿ​ಕೊ​ಳ್ಳು​ತ್ತಿ​ದ್ದಾರೆ ಎಂದು ಜೆಡಿ​ಎಸ್‌ ನಗರ ಘಟಕ ಅಧ್ಯಕ್ಷ ಸುಹೇಲ್‌ ಪಾಷಾ ವ್ಯಂಗ್ಯ​ವಾ​ಡಿ​ದರು. ಡಿಕೆ ಸಹೋ​ದ​ರ​ರಿಗೆ ಸಂಸತ್‌ ಚುನಾ​ವ​ಣೆಗಾಗಿ ವೋಟ್‌ ಬ್ಯಾಂಕ್‌ ಕಾಪಾ​ಡಿ​ಕೊ​ಳ್ಳಲು ಒಂದು ಕುರಿ ಬೇಕು. ಅದ​ಕ್ಕಾಗಿ ಇಕ್ಬಾಲ್‌ ಅವ​ರನ್ನು ಕ್ಷೇತ್ರ​ದಲ್ಲಿ ಬಿಟ್ಟಿ​ದ್ದಾರೆ ಎಂದು ಟೀಕಿ​ಸಿ​ದರು. ರಾಮ​ನ​ಗರ ಕ್ಷೇತ್ರಕ್ಕೆ ಕುಮಾ​ರ​ಸ್ವಾಮಿ ಕೊಡುಗೆ ಏನೆಂದು ಪ್ರಶ್ನಿಸುವ ಕಾಂಗ್ರೆಸ್‌ ನಾಯ​ಕರು, ಸಂಸ​ದರು ಎಷ್ಟುಅನು​ದಾನ ನೀಡಿ​ದ್ದಾರೆ.

ಮಾತೃದ್ರೋಹ ಮಾಡಿದವರಿಗೆ ಬುದ್ಧಿ ಕಲಿಸಿ: ನಿಖಿಲ್‌ ಕುಮಾರಸ್ವಾಮಿ

ಅವರ ಕೊಡುಗೆ ಏನೆಂದು ಉತ್ತ​ರಿ​ಸಲಿ. ಅಭಿ​ವೃದ್ಧಿ ಹೆಸ​ರಿ​ನಲ್ಲಿ ಮತ ಕೇಳ​ಲಾ​ಗದೆ ಬಟ್ಟೆ, ಪಾತ್ರೆ ನೀಡಿ ಮತ​ಗ​ಳ ಖರೀದಿಗೆ ಮುಂದಾ​ಗಿ​ದ್ದಾರೆ ಎಂದು ಕಿಡಿ​ಕಾ​ರಿ​ದರು. ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ರವರ ಬಗ್ಗೆ ವೈಯ​ಕ್ತಿ​ಕ​ವಾಗಿ ಗೌರವ ಇದೆ. ಆದರೆ, ಶಾಸ​ಕ​ರಾಗಿ ಕ್ಷೇತ್ರ​ವನ್ನು ಅಭಿ​ವೃ​ದ್ಧಿ​ಯತ್ತ ಕೊಂಡೊ​ಯ್ಯುವ ಸಾಮ​ಥ್ಯ​ರ್‍ ಅವ​ರಲ್ಲಿ ಕಾಣು​ತ್ತಿಲ್ಲ. ಅಲ್ಪ​ಸಂಖ್ಯಾ​ತರು ಸಮು​ದಾ​ಯದ ನಾಯಕ ಎಂಬ ಭ್ರಮೆ​ಯಿಂದ ಹೊರ ಬರ​ಬೇಕು. ಯಾವ ಶಾಸಕ ಶಕ್ತಿ​ಯು​ತ​ರಾಗಿ​ರು​ತ್ತಾರೊ ಅವರು ಮಾತ್ರ ವಿಶೇಷ ಅನು​ದಾನ ತಂದು ಅಭಿ​ವೃದ್ಧಿ ಕೆಲಸ ಮಾಡಲು ಸಾಧ್ಯ. ಬೇರೆ ಶಾಸ​ಕಿ​ಯ​ರಿಗೆ ಹೋಲಿ​ಸಿ​ದರೆ ಅನಿ​ತಾ​ರ​ವರು ಕ್ಷೇತ್ರಕ್ಕೆ ಹೆಚ್ಚಿನ ಅನು​ದಾನ ತಂದಿ​ದ್ದಾರೆ. ನಗ​ರ​ಸಭೆಗೆ 50 ರಿಂದ 60 ಕೋಟಿ ಅನು​ದಾನ ಬಂದಿದ್ದು, ಅದರ ಸದ್ಬ​ಳಕೆ ಸರಿ​ಯಾಗಿ ಆಗು​ತ್ತಿಲ್ಲ ಎಂದು ಸುಹೇಲ್‌ ಪಾಷಾ ದೂರಿ​ದರು.

ನಿಖಿಲ್‌ ಗೆಲುವಿಗೆ ಅಲ್ಲಾ ಹೆಸ​ರಲ್ಲಿ ಶಪಥ: ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಸಮ್ಮು​ಖ​ದಲ್ಲಿ ಅಲ್ಪ​ಸಂಖ್ಯಾ​ತ ಕಾರ್ಯ​ಕ​ರ್ತ​ರಿಗೆ ಅಲ್ಲಾನ ಹೆಸ​ರಿ​ನಲ್ಲಿ ಪ್ರತಿ​ಜ್ಞಾ​ವಿಧಿ ಬೋಧಿ​ಸಿದ ಪ್ರಸಂಗ ನಡೆ​ಯಿತು. ಜೆಡಿ​ಎಸ್‌ ಸೇರ್ಪಡೆ ಕಾರ್ಯ​ಕ್ರ​ಮ​ದಲ್ಲಿ ಮುಖಂಡ ಗಜ​ಫರ್‌ ಆಲಿ ಬಾಬುರವರು ಅಲ್ಲಾನ ಹೆಸ​ರಲ್ಲಿ ಅಲ್ಪ​ಸಂಖ್ಯಾತ ಕಾರ್ಯ​ಕ​ರ್ತ​ರಿಗೆ ಕುಮಾ​ರ​ಸ್ವಾಮಿ ಕೈ ಬಲ​ಪ​ಡಿ​ಸುವ ಹಾಗೂ ನಿಖಿಲ್‌ ಕುಮಾ​ರ​ಸ್ವಾಮಿ ಅವ​ರನ್ನು ಗೆಲ್ಲಿ​ಸುವ ಶಪಥ ಮಾಡಿ​ಸಿ​ದರು. ನಿಖಿಲ್‌ ಅವ​ರನ್ನು 1 ಲಕ್ಷಕ್ಕೂ ಅಧಿಕ ಮತ​ಗಳ ಅಂತ​ರ​ದಿಂದ ಗೆಲ್ಲಿ​ಸುತ್ತೇವೆ. ಇದ್ಕ​ಕಾಗಿ ನಾವೆ​ಲ್ಲರು ಒಗ್ಗ​ಟ್ಟಿ​ನಿಂದ ಪ್ರಾಮಾ​ಣಿ​ಕ​ವಾಗಿ ಶ್ರಮಿ​ಸು​ತ್ತೇವೆ ಎಂದು ಕಾರ್ಯ​ಕ​ರ್ತರು ಪ್ರತಿಜ್ಞೆ ಸ್ವೀಕರಿಸಿದರು.

Follow Us:
Download App:
  • android
  • ios