Asianet Suvarna News Asianet Suvarna News

ಮೈಸೂರು ಮೇಯರ್ ಮೈತ್ರಿ ದಂಗಲ್: ಮಧ್ಯಪ್ರವೇಶಿಸಿದ ಕಾಂಗ್ರೆಸ್ ಹೈಕಮಾಂಡ್

ಮೈಸೂರು ಪಾಲಿಕೆ ಮೇಯರ್ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ ಮಾಡಿದೆ.

Congress High Command Entered In Mysuru Mysuru municipal-corporation-president Poll Row rbj
Author
Bengaluru, First Published Mar 1, 2021, 10:12 PM IST

ಬೆಂಗಳೂರು, (ಮಾ.01): ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್​ ಹಾಗೂ ಕಾಂಗ್ರೆಸ್​ ಮೈತ್ರಿ ಮುಂದುವರಿಸಿರುವ ಕುರಿತು ಹೈಕಮಾಂಡ್​ಗೆ ವರದಿ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ. 

ಈ ಹಿನ್ನೆಲೆ ಎಐಸಿಸಿ ಆಂತರಿಕ ತನಿಖಾ ಜವಾಬ್ದಾರಿಯನ್ನು ಎಐಸಿಸಿ ಕಾರ್ಯದರ್ಶಿ ಮಧು ಯಷ್ಕಿ ಗೌಡ್ ಅವರ​ ಹೆಗಲಿಗೆ ಹಾಕಲಾಗಿದೆ. ಇದರಿಂದ ಮಧು ಯಷ್ಕಿ ಗೌಡ್ ನಾಳೆಯೇ ಮೈಸೂರಿಗೆ ಬಂದು ಕಾರ್ಪೋರೆಟರ್​ಗಳ ಜೊತೆ ಒನ್ ಟು ಒನ್ ಸಭೆ ನಡೆಸಲಿದ್ದಾರೆ.

ಬಿಜೆಪಿಯನ್ನ ಅಧಿಕಾರದಿಂದ ದೂರ ಇಡುವಲ್ಲಿ ಕೈ ಸಕ್ಸಸ್, ಆದ್ರೂ ಸಿದ್ದುಗೆ ಹಿನ್ನಡೆ

ಕಾಂಗ್ರೆಸ್​​​ ನಾಯಕರ ನಡುವೆ ಮಾತಿನ ಜಟಾಪಟಿಗೆ ಕಾರಣವಾಗಿದ್ದ ಮೈಸೂರು ಪಾಲಿಕೆ ಮೈತ್ರಿಯಿಂದ ಸಿದ್ದರಾಮಯ್ಯ ಅವರಿಗೆ ಭಾರೀ ಹಿನ್ನಡೆಯಾಗಿತ್ತು. ಅಲ್ಲದೇ ಸಿದ್ದರಾಮಯ್ಯ ಬೆಂಬಲಿತ ನಾಯಕರು ಮೈತ್ರಿ ಕುರಿತಂತೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. 

ಇದರ ನಡುವೆಯೇ ತನ್ವೀರ್ ಸೇಠ್​ ಕೂಡ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಇದಲ್ಲದೇ ರಾಜ್ಯ ಕಾಂಗ್ರೆಸ್‌ನಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳಿದ್ದವು. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ಹೈಕಮಾಂಡ್​ ಆಂತರಿಕ ತನಿಖೆಗೆ ತನಿಖಾಧಿಕಾರಿಯನ್ನು ನೇಮಿಸಿದೆ.

Follow Us:
Download App:
  • android
  • ios