ಇದಕ್ಕೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್​​, ಶಾಂತಿಯುತ ಪ್ರತಿಭಟನೆಗೆ ನಮ್ಮ ಆಕ್ಷೇಪ ಇಲ್ಲ, ಆದರೆ ಪ್ರತಿಭಟನೆ ವೇಳೆ 12 ಕಚೇರಿಗಳನ್ನು ಸುಟ್ಟು ಹಾಕಿದ್ದಾರೆ. ಈ ಘಟನೆ ನಡೆಯಬಾರದಿತ್ತು, ಆದರೆ ಬಗ್ಗೆ ವಿಷಾದಿಸುತ್ತೇನೆ, ಅಮಾಯಕ ರೈತರ ಮೇಲಿನ ಕೇಸ್​​ ಹಿಂಪಡೆಯತ್ತೇವೆ ಎಂದು ಪರಮೇಶ್ವರ್​​ ಹೇಳಿದ್ದಾರೆ.

ಬೆಳಗಾವಿ (ನ.22): ಎರಡನೇ ದಿನವೂ ವಿಧಾನ ಮಂಡಲ ಅಧಿವೇಶನದಲ್ಲಿ ಮಹದಾಯಿ ಪ್ರತಿಭಟನೆ ವೇಳೆ ರೈತರ ಬಂಧನ ಬಗ್ಗೆ ಚರ್ಚೆ ನಡೆಯಿತು.

ಅಮಾಯಕ ರೈತರ ಮೇಲಿನ ಎಲ್ಲಾ ಕೇಸ್​ ಹಿಂಪಡೆಯುವಂತೆ ವಿಪಕ್ಷಗಳು ಆಗ್ರಹಿಸಿದವು. ವಿಧಾನಸಭೆ ಪ್ರಶ್ನೋತ್ತರ ವೇಳೆ ಕುಡುಚಿ ಶಾಸಕ ರಾಜೀವ್, ರೈತರ ಮೇಲೆ ಡಕಾಯಿತಿ ಪ್ರಕರಣ​​ ಹಾಕಿದ್ದಾರೆ, ಚಳವಳಿ ಹತ್ತಿಕ್ಕುವ ಅಧಿಕಾರ ಸರ್ಕಾರಕ್ಕೆ ಇದೆಯಾ? ಕೂಡಲೇ ರೈತರ ಮೇಲಿನ ಕೇಸ್​​ ತೆಗೆದುಹಾಕಿ ಅಂತ ರಾಜೀವ್​ ಆಗ್ರಹಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್​​, ಶಾಂತಿಯುತ ಪ್ರತಿಭಟನೆಗೆ ನಮ್ಮ ಆಕ್ಷೇಪ ಇಲ್ಲ, ಆದರೆ ಪ್ರತಿಭಟನೆ ವೇಳೆ 12 ಕಚೇರಿಗಳನ್ನು ಸುಟ್ಟು ಹಾಕಿದ್ದಾರೆ. ಈ ಘಟನೆ ನಡೆಯಬಾರದಿತ್ತು, ಆದರೆ ಬಗ್ಗೆ ವಿಷಾದಿಸುತ್ತೇನೆ, ಅಮಾಯಕ ರೈತರ ಮೇಲಿನ ಕೇಸ್​​ ಹಿಂಪಡೆಯತ್ತೇವೆ ಎಂದು ಪರಮೇಶ್ವರ್​​ ಹೇಳಿದ್ದಾರೆ.