ಬಿಜೆಪಿಯಿಂದ ಯಾರಿಗೆ ಸಿಗಲಿದೆ ಟಿಕೆಟ್..?
ಮೀಸಲು ಕ್ಷೇತ್ರವಿದು. ಹಾಲಿ ಶಾಸಕ ಬಿ. ಶಿವಣ್ಣ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ಯಾಗಲಿದ್ದಾರೆ. ಬಿಜೆಪಿಯಿಂದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರನ್ನೇ ಕಣಕ್ಕಿಳಿಸುವ ಸಂಭವ ಹೆಚ್ಚಾಗಿದೆ.
ಆನೇಕಲ್ : ಮೀಸಲು ಕ್ಷೇತ್ರವಿದು. ಹಾಲಿ ಶಾಸಕ ಬಿ. ಶಿವಣ್ಣ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ಯಾಗಲಿದ್ದಾರೆ. ಬಿಜೆಪಿಯಿಂದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಅವರನ್ನೇ ಕಣಕ್ಕಿಳಿಸುವ ಸಂಭವ ಹೆಚ್ಚಾಗಿದೆ.
ಈ ಬಾರಿ ಬಿಜೆಪಿಯಿಂದ ಹಲವರು ಪ್ರಯತ್ನ ನಡೆಸುತ್ತಿದ್ದಾರೆ. ಈ ಪೈಕಿ ನಿವೃತ್ತ ಐಎಎಸ್ ಅಧಿಕಾರಿಯೂ ಆಗಿರುವ ನಟ ಶಿವರಾಂ ಅವರೂ ಇದ್ದಾರೆ.
ಆದರೆ, ನಾರಾಯಣಸ್ವಾಮಿ ಅವರನ್ನು ಬಿಟ್ಟು ಬೇರೊಬ್ಬರಿಗೆ ಅವಕಾಶ ನೀಡುವ ಸಾಧ್ಯತೆ ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇನ್ನು ಈ ಕ್ಷೇತ್ರವನ್ನು ಮೈತ್ರಿಯ ಫಲವಾಗಿ ಬಿಎಸ್ಪಿಗೆ ಜೆಡಿಎಸ್ ಬಿಟ್ಟುಕೊಟ್ಟಿದೆ. ಇಲ್ಲಿ ಬಿಎಸ್ಪಿಗೆ ತಕ್ಕಮಟ್ಟಿಗೆ ನೆಲೆಯೂ ಇದೆ.