ಸ್ವಾತಂತ್ರ್ಯ ಬಂದೂ ಅರವತ್ತು ವರ್ಷ ಕಳೆದರೂ  ಈ ಭಾಗದ ಜನರು ಕುಡಿಯುವ ನೀರಿಗಾಗಿ ಹತ್ತಾರು ಕಿಲೋ ಮೀಟರ್ ಹಳ್ಳದಾಟಿ ನೀರು ತರುವ ಅನಿವಾರ್ಯ ಎದುರಾಗಿದೆ. 

ಕಾರವಾರ (ಜ.04): ಸ್ವಾತಂತ್ರ್ಯ ಬಂದೂ ಅರವತ್ತು ವರ್ಷ ಕಳೆದರೂ ಈ ಭಾಗದ ಜನರು ಕುಡಿಯುವ ನೀರಿಗಾಗಿ ಹತ್ತಾರು ಕಿಲೋ ಮೀಟರ್ ಹಳ್ಳದಾಟಿ ನೀರು ತರುವ ಅನಿವಾರ್ಯ ಎದುರಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾರವಾರ ತಾಲೂಕಿನ ಕಿನ್ನರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬೆಜೂಗ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಭಾರೀ ಕಷ್ಟ ಪಡುತ್ತಿದ್ದಾರೆ. ಈ ಮೊದಲು ಈ ಗ್ರಾಮಕ್ಕೆ ಕಟ್ಟಿಗೆಯ ಸೇತುವೆಯಿತ್ತು. ಆದರೆ ಈಗ ಆ ಸೇತುವೆ ಮುರಿದು ಬಿದ್ದು ಮೂರು ವರ್ಷಗಳಾಗಿವೆ. ಸಂಬಂಧ ಪಟ್ಟವರಿಗೆ ತಿಳಿಸಿದ್ರೂ ಸಹ ಹಳ್ಳಕ್ಕೆ ಮತ್ತೆ ಸೇತುವೆ ಭಾಗ್ಯ ಸಿಕ್ಕಿಲ್ಲ. ಅಂಬೆಜೂಗ ಜನರು ತೂಗು ಸೇತುವೆ ನಿರ್ಮಿಸಿ ಕೊಡುವಂತೆ ಅನೇಕ ಬಾರಿ ಸರಕಾರದ ಮುಂದೆ ಬೇಡಿಕೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಈ ಬಗ್ಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಗಲಿ ಗಮನ ನೀಡಿಲ್ಲ. ಈ ಜನರ ಕಷ್ಟಕ್ಕೆ ಇನ್ನಾದರೂ ಸರಕಾರ ಸ್ಪಂಧಿಸುತ್ತೋ ಅನ್ನೋದನ್ನ ಕಾದು ನೋಡಬೇಕಾಗಿದೆ.