ಮೇಟಿ ಪ್ರಕರಣ: ವಿಜಯಲಕ್ಷ್ಮಿ ದೂರು ಸಿಐಡಿಗೆ ವರ್ಗಾವಣೆ
ತನಗೆ ಜೀವ ಬೆದರಿಕೆ ಇದೆಯೆಂದು, ಡಿಎಆರ್ ಪೇದೆ ಸುಭಾಷ್ ಮುಗಳಖೋಡ್ ಮತ್ತು ಮೂವರು ಸಹಚರರ ವಿರುದ್ಧ ವಿಜಯಲಕ್ಷ್ಮಿ ಬಾಗಲಕೋಟೆ ಎಸ್ಪಿಗೆ ಕಳೆದ ಡಿ.17ರಂದು ದೂರು ನೀಡಿದ್ದರು.
ಬೆಂಗಳೂರು (ಡಿ.25): ಪೊಲೀಸ್ ಮಹಾನಿರ್ದೇಶ ಓಂಪ್ರಕಾಶ್ ಆದೇಶ ಮೆರೆಗೆ ಮಾಜಿ ಸಚಿವ ಎಚ್.ವೈ.ಮೇಟಿ ಪ್ರಕರಣದ ಸಂತ್ರಸ್ತೆ ವಿಜಯಲಕ್ಷ್ಮಿ ನೀಡಿದ್ದ ದೂರನ್ನು ಸಿಐಡಿಗೆ ವರ್ಗಾಯಿಸಲಾಗಿದೆ.
ತನಗೆ ಜೀವ ಬೆದರಿಕೆ ಇದೆಯೆಂದು, ಡಿಎಆರ್ ಪೇದೆ ಸುಭಾಷ್ ಮುಗಳಖೋಡ್ ಮತ್ತು ಮೂವರು ಸಹಚರರ ವಿರುದ್ಧ ವಿಜಯಲಕ್ಷ್ಮಿ ಬಾಗಲಕೋಟೆ ಎಸ್ಪಿಗೆ ಕಳೆದ ಡಿ.17ರಂದು ದೂರು ನೀಡಿದ್ದರು.
ಕೊಲೆ ಬೆದರಿಕೆ ಹಾಕಿರುವವರು ಮಾಜಿ ಸಚಿವ ಮೇಟಿ ವಿರುದ್ಧ ಆರೋಪಿಸುವಂತೆ ಒತ್ತಾಯಿಸಿದ್ದರು ಎಂದು ವಿಜಯಲಕ್ಷ್ಮಿ ಆರೋಪಿಸಿದ್ದಳು.
ವಿಜಯಲಕ್ಷ್ಮಿ ದೂರು ಪ್ರಕರಣವನ್ನ ಡಿಎಸ್ಪಿ ರಾಮನಗೌಡ ಹಟ್ಟಿ ನೇತೃತ್ವದ ತಂಡ ತನಿಖೆ ನಡೆಸುತ್ತಿತ್ತು.