Asianet Suvarna News Asianet Suvarna News

ರೇವಣ್ಣ ವಿರುದ್ಧ ಸಿಡಿದೆದ್ದ ಎ. ಮಂಜು; ‘ಸೂಪರ್ ಸಿಎಂ’ ವಿರುದ್ಧ ಬಾಂಬ್!

ವಿಧಾನಸೌಧದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಮಾಡಿಕೊಂಡಿವೆಯಾದರೂ, ದೇವೇಗೌಡರ ತವರುಜಿಲ್ಲೆಯಲ್ಲಿ ಉಭಯಪಕ್ಷದ ನಾಯಕರ ನಡುವೆ ಕುಸ್ತಿ ಮುಂದುವರೆದಿದೆ. ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎ. ಮಂಜು ಎಂದಿನಂತೆ ಗೌಡರ ಕುಟುಂಬದ ವಿರುದ್ಧ ಘರ್ಜಿಸಿದ್ದಾರೆ. ಎಚ್.ಡಿ. ರೇವಣ್ಣ ವಿರುದ್ಧ ಭೂಕಬಳಿಕೆಯ ಗಂಭೀರ ಆರೋಪ ಮಾಡಿರುವ ಎ. ಮಂಜು,  ನ್ಯಾಯಾಲಯದ ಮೆಟ್ಟಿಲೇರುವ ಬೆದರಿಕೆ ಹಾಕಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿರುವ ಎ. ಮಂಜು, ರೇವಣ್ಣ ಮತ್ತು ಕುಟುಂಬದವರು ಹೇಗೆ ವ್ಯವಸ್ಥಿತವಾಗಿ ಭೂಕಬಳಿಕೆ ಮಾಡಿದ್ದಾರೆ ಎಂಬುವುದನ್ನು ಬಿಚ್ಚಿಟ್ಟಿದ್ದಾರೆ. 

ವಿಧಾನಸೌಧದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಮಾಡಿಕೊಂಡಿವೆಯಾದರೂ, ದೇವೇಗೌಡರ ತವರುಜಿಲ್ಲೆಯಲ್ಲಿ ಉಭಯಪಕ್ಷದ ನಾಯಕರ ನಡುವೆ ಕುಸ್ತಿ ಮುಂದುವರೆದಿದೆ. ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎ. ಮಂಜು ಎಂದಿನಂತೆ ಗೌಡರ ಕುಟುಂಬದ ವಿರುದ್ಧ ಘರ್ಜಿಸಿದ್ದಾರೆ. ಎಚ್.ಡಿ. ರೇವಣ್ಣ ವಿರುದ್ಧ ಭೂಕಬಳಿಕೆಯ ಗಂಭೀರ ಆರೋಪ ಮಾಡಿರುವ ಎ. ಮಂಜು,  ನ್ಯಾಯಾಲಯದ ಮೆಟ್ಟಿಲೇರುವ ಬೆದರಿಕೆ ಹಾಕಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿರುವ ಎ. ಮಂಜು, ರೇವಣ್ಣ ಮತ್ತು ಕುಟುಂಬದವರು ಹೇಗೆ ವ್ಯವಸ್ಥಿತವಾಗಿ ಭೂಕಬಳಿಕೆ ಮಾಡಿದ್ದಾರೆ ಎಂಬುವುದನ್ನು ಬಿಚ್ಚಿಟ್ಟಿದ್ದಾರೆ.