ಹಣ ಕಳೆದುಕೊಂಡವರಲ್ಲಿ ಕೆಲವರು ಇಂದು ಬೆಳಗ್ಗೆ ಸಿಎಂ ಕಚೇರಿ ಕೃಷ್ಣಗೆ ತೆರಳಿ ಅಳಲು ತೋಡಿಕೊಂಡರು. ನೊಂದವರ ಅಳಲು ಕೇಳಿಸಿಕೊಂಡ ಸಿಎಂ ಈ ಸಂಬಂಧ ಕ್ರಮಕೈಗೊಳ್ಳಲು ಗೃಹ ಸಚಿವರು ಹಾಗೂ ನಗರ ಪೊಲೀಸ್​ ಆಯುಕ್ತರಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಬೆಂಗಳೂರು (ಜ.21): ಸುವರ್ಣ ನ್ಯೂಸ್ ವರದಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಗಳ ತಲುಪಿದೆ. ಮನೆ ಹಾಗೂ ಸೈಟ್​​ ನೀಡುವುದಾಗಿ ನೂರಾರು ಕೋಟಿ ರೂಪಾಯಿ ಹಣ ವಂಚಿಸಿರುವ ಟಿಜಿಎಸ್​​, ಡ್ರೀಮ್ಸ್​​ ಜಿಕೆ ಕಂಪನಿ ಮಾಲಿಕ ಸಚಿನ್ ನಾಯಕ್ ವಿರುದ್ಧ ಕ್ರಮಕೈಗೊಳ್ಳುವಂತೆ ನೊಂದವರು ಸಿಎಂ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದ್ದಾರೆ.

ಹಣ ಕಳೆದುಕೊಂಡವರಲ್ಲಿ ಕೆಲವರು ಇಂದು ಬೆಳಗ್ಗೆ ಸಿಎಂ ಕಚೇರಿ ಕೃಷ್ಣಗೆ ತೆರಳಿ ಅಳಲು ತೋಡಿಕೊಂಡರು. ನೊಂದವರ ಅಳಲು ಕೇಳಿಸಿಕೊಂಡ ಸಿಎಂ ಈ ಸಂಬಂಧ ಕ್ರಮಕೈಗೊಳ್ಳಲು ಗೃಹ ಸಚಿವರು ಹಾಗೂ ನಗರ ಪೊಲೀಸ್​ ಆಯುಕ್ತರಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಅಲ್ಲದೆ, ಇಂದು ಬೆಳಗ್ಗೆ ಇದೇ ತಂಡ ಗೃಹ ಸಚಿವ ಜಿ.ಪರಮೇಶ್ವರ್​​ ಅವರ ನಿವಾಸಕ್ಕೂ ಭೇಟಿ ಮಾಡಿ ಮನವಿ ಸಲ್ಲಿಸಲು ಮುಂದಾಗಿದ್ದರು. ಗೃಹ ಸಚಿವರು ತಮ್ಮ ಕಚೇರಿ ಬಂದು ಮನವಿ ಸಲ್ಲಿಸುವಂತೆ ಸೂಚಸಿ ತೆರಳಿದಿದ್ದಾರೆ.