Asianet Suvarna News Asianet Suvarna News

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಬರೆದ 2 ದಾಖಲೆಗಳೇನು..?

ರಾಜ್ಯಸಭೆಯ ಸಭಾಪತಿಯಾಗಿ ಮೊದಲ ದಿನ ಕಲಾಪಕ್ಕೆ ಹಾಜರಾದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಶುಕ್ರವಾರ ಸದನದಲ್ಲಿ ಎರಡು ಹೊಸ ಸಂಪ್ರದಾಯಗಳ ದಾಖಲೆ ಬರೆದರು.

Venkaiah Naidu Tells MPs Not To Say I Beg To In Parliament Suggests This Instead

ನವದೆಹಲಿ (ಡಿ.16): ರಾಜ್ಯಸಭೆಯ ಸಭಾಪತಿಯಾಗಿ ಮೊದಲ ದಿನ ಕಲಾಪಕ್ಕೆ ಹಾಜರಾದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಶುಕ್ರವಾರ ಸದನದಲ್ಲಿ ಎರಡು ಹೊಸ ಸಂಪ್ರದಾಯಗಳ ದಾಖಲೆ ಬರೆದರು. ಮೊದಲನೆಯದಾಗಿ, ಸದಸ್ಯರು ತಮ್ಮ ಪೇಪರ್ಗಳನ್ನು ಸಭಾಪತಿ ಪೀಠಕ್ಕೆ ಸಲ್ಲಿಸುವಾಗ, `ನಾನು ಬೇಡುತ್ತಿದ್ದೇನೆ' ಎಂಬ ಪದ ಬಳಕೆ ಕೈಬಿಡುವಂತೆ ಸೂಚಿಸಿ ವಸಾಹತುಶಾಹಿ ಆಡಳಿತ ಸಂಪ್ರದಾಯ ಕೈಬಿಡುವುದಕ್ಕೆ ಚಾಲನೆ ನೀಡಿದರು.

ಮತ್ತೊಂದು, ದಿವಂಗತರಾದ ಗಣ್ಯರಿಗೆ ಶ್ರದ್ಧಾಂಜಲಿ ಟಿಪ್ಪಣಿ ಓದಿ ಹೇಳುವಾಗ ಎದ್ದು ನಿಂತು ಓದಿದರು. ಪೇಪರ್ ಸಲ್ಲಿಸುವಾಗ ಸದಸ್ಯರು `ನಾನು ಬೇಡುತ್ತಿದ್ದೇನೆ' ಎಂಬುದರ ಬದಲು, `ನಾನು ಮೇಜಿನ ಮೇಲೆ ಇಡಲು ಇಚ್ಛಿಸುತ್ತೇನೆ' ಎಂದು ಹೇಳುವಂತೆ ಸಲಹೆ ನೀಡಿದರು. ಆದಾಗ್ಯೂ, ಇದೊಂದು ಆದೇಶ ಅಲ್ಲ, ಸಲಹೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios