1 ಲಕ್ಷಕ್ಕೂ ಅಧಿಕ ಮಂದಿ ರೈತರ ಸಾಲ ಮನ್ನಾ ಮಾಡಿ ಇದೀಗ ಸರ್ಕಾರ ಘೋಷಣೆ ಮಾಡಿದೆ. ರಾಜಸ್ಥಾನದ ವಸುಂಧರಾ ರಾಜೆ ಸರ್ಕಾರ  ಸಾಲ ಮನ್ನಾ ಮಾಡಿ ಆದೇಶ ನೀಡಿದೆ

ಜೈಪುರ: ರಾಜಸ್ಥಾನದಲ್ಲಿ ಇತ್ತೀಚೆಗೆ ಸಾಲಬಾಧಿತ ರೈತನೊಬ್ಬ ಆತ್ಮಹತ್ಯೆಗೈದ ಬೆನ್ನಲ್ಲೇ, ಮುಖ್ಯಮಂತ್ರಿ ವಸುಂಧರಾ ರಾಜೇ ಅಲ್ಲಿನ 12,000ಕ್ಕೂ ಹೆಚ್ಚು ರೈತರ ಸಾಲ ಸಂಪೂರ್ಣ ಮನ್ನಾ ಮಾಡಿದ್ದಾರೆ. 

Add Asianetnews Kannada as a Preferred SourcegooglePreferred

ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರಾದ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ದಕ್ಷಿಣ ರಾಜಸ್ಥಾನದ ಜಿಲ್ಲೆಗಳ ರೈತರ ಸಾಲ ಮನ್ನಾ ಮಾಡಲಾಗಿದೆ. ಇದರಿಂದ ರಾಜ್ಯದ ರೈತರ ಸಾಲ ಮನ್ನಾದ 8,000 ಕೋಟಿ ರು.ಗೆ, 100 ಕೋಟಿ ರು. ಹೆಚ್ಚುವರಿ ಹೊರೆಯಾಗಲಿದೆ. 

ಚುನಾವಣೆಗೆ ಕೇವಲ ಮೂರು ತಿಂಗಳಿರುವಾಗ ಸಾಲಮನ್ನಾ ಘೋಷಿಸಲಾಗಿದೆ. ಇಂತಹ ಘೋಷಣೆಗಳು ಜಾರಿಯಾಗುವುದಿಲ್ಲ. ರೈತರಿಗೂ ಇದು ಗೊತ್ತು ಎಂದು ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಸಚಿನ್‌ ಪೈಲಟ್‌ ಹೇಳಿದ್ದಾರೆ.