ಹಲವು ಯೋಜನೆಗಳನ್ನು ಜಾರಿಗೆ ತಂದು ದೇಶದಲ್ಲಿ ಸರ್ಕಾರ ಬಡತನ ನಿವಾರಣೆ ಮಾಡಲು ಪ್ರಯತ್ನ ಮಾಡುತ್ತಿರುವ ಹೊರತಾಗಿಯೂ, ದೇಶದಲ್ಲಿ ಬಡತನ ಮಾತ್ರ ನಿವಾರಣೆಯಾಗಿಲ್ಲ.  ಉತ್ತರ ಪ್ರದೇಶದ ಮಹಾದಲಿತ ಸಮುದಾಯದಲ್ಲಿ ಹಸಿವಿನಿಂದ ಸರಣಿ ಸಂಭವಿಸುತ್ತಿದೆ. 

ಕುಶಿನಗರ(ಉತ್ತರ ಪ್ರದೇಶ): ಬಡತನ ನಿವಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದ ಹೊರತಾಗಿಯೂ, ದೇಶದಲ್ಲಿ ಬಡತನ ಮಾತ್ರ ನಿವಾರಣೆಯಾಗಿಲ್ಲ. 

Add Asianetnews Kannada as a Preferred SourcegooglePreferred

ಇದರ ಪರಿಣಾಮ ಇಲಿಗಳನ್ನೇ ಆಹಾರವಾಗಿ ನೆಚ್ಚಿಕೊಂಡಿದ್ದ ಮಹಾದಲಿತ ಸಮುದಾಯದವರು ಇದೀಗ ಆಹಾರವಿಲ್ಲದೆ ಸರಣಿ ಸಾವನ್ನಪ್ಪುತ್ತಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. 

ಇತ್ತೀಚೆಗಷ್ಟೇ ಇಲ್ಲಿನ ರಕ್ಬಾ ದುಲ್ಮಾ ಪಟ್ಟಿಗ್ರಾಮದಲ್ಲಿ ವಾಸವಾಗಿದ್ದ ವೀರೇಂದ್ರ ಮುಸಾಹರ್‌ ಎಂಬಾತನ ಪತ್ನಿ, 6 ವರ್ಷದ ಮಗ ಮತ್ತು 2 ವರ್ಷದ ಮಗಳು ಹಸಿವಿನ ನರಳಾಟದಿಂದ ಸಾವನ್ನಪ್ಪಿದ್ದರು. ಆದರೆ, ಈ ಆರೋಪವನ್ನು ಅಲ್ಲಗೆಳೆದಿರುವ ಸರ್ಕಾರಿ ಅಧಿಕಾರಿಗಳು, ಯಾವುದೇ ಕುಟುಂಬಸ್ಥರು ಹಸಿವಿನಿಂದ ಸಾವನ್ನಪ್ಪಿಲ್ಲ ಎಂದು ಹೇಳಿದ್ದಾರೆ.