ಉಪ್ಪಿ ಪರಭಾಷೆಯ ಚಿತ್ರಗಳ ಬಗ್ಗೆ ಹೇಳಿದ್ದೇನು ನೀವೊಮ್ಮೆ ನೋಡಿ...
ಬೆಂಗಳೂರು(ಏ.28): ಬಾಹುಬಲಿ 2 ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿದ್ದ ಚಿತ್ರ ಗುರುವಾರವಷ್ಟೇ ದೇಶದಾದ್ಯಂತ ತೆರೆಕಂಡು ಸದ್ದು ಮಾಡುತ್ತಿದೆ.
ಎಸ್ಎಸ್ ರಾಜಮೌಳಿ ನಿರ್ದೇಶನದ ಬಹುತಾರಾಗಣದ ಚಿತ್ರ ನಾನಾ ಕಾರಣಗಳಿಂದ ಕರ್ನಾಟಕದಲ್ಲಿ ಸಾಕಷ್ಟು ವಿವಾದಕ್ಕೂ ಗುರಿಯಾಗಿದ್ದು ಗೊತ್ತೇ ಇದೆ. ಸಾಕಷ್ಟು ವಿವಾದ ಹಾಗೂ ವಿರೋಧದ ಬಳಿಕ ಗುರುವಾರ ತಡರಾತ್ರಿಯೇ ಬೆಂಗಳೂರಿನ ಹಲವೆಡೆ ಚಿತ್ರ ತೆರೆಕಂಡಿದ್ದು ಭರ್ಜರಿ ರೆಸ್ಫಾನ್ಸ್ ಕೂಡಾ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಕನ್ನಡಿಗರ ಕುರಿತು ರಿಯಲ್ ಸ್ಟಾರ್ ಉಪೇಂದ್ರ ನಾವು ಕನ್ನಡಿಗರಲ್ಲವೋ ವಿಶಾಲ ಹೃದಯದವರು, ಕನ್ನಡ ಚಿತ್ರಗಳಿಗಿಂತ ಬೇರೆ ಭಾಷೆಯ ಚಿತ್ರಗಳನ್ನೇ ಜಾಸ್ತಿ ನೋಡ್ತೇವೆ ಎಂಬರ್ಥದ ಮಾತುಗಳನ್ನಾಡಿದ್ದಾರೆ.
ಅಷ್ಟಕ್ಕೂ ಉಪ್ಪಿ ಪರಭಾಷೆಯ ಚಿತ್ರಗಳ ಬಗ್ಗೆ ಹೇಳಿದ್ದೇನು ನೀವೊಮ್ಮೆ ನೋಡಿ...
