ರಾಜ್ಯದ ಎಲ್ಲಾ ಜೈಲುಗಳಲ್ಲಿ ಗೋಶಾಲೆ ತೆರೆಯುವ ಬಗ್ಗೆ ಉತ್ತರಪ್ರದೇಶದ ಬಂಧೀಖಾನೆ ಇಲಾಖೆ ಚಿಂತನೆ ನಡೆಸಿದೆ. ಜೈಲುಗಳಲ್ಲಿ ಸಾಕಷ್ಟು ಜಾಗದ ಲಭ್ಯತೆ ಇರುತ್ತದೆ, ರಕ್ಷಣೆಯೂ ಇರುತ್ತದೆ. ಹೀಗಾಗಿ ಸರ್ಕಾರೇತರ ಸಂಸ್ಥೆ ಗಳು ಮತ್ತು ಸಂಘ- ಸಂಸ್ಥೆಗಳ ನೆರವಿನಿಂದ ಗೋಶಾಲೆ ಆರಂಭಿಸಲು ಚಿಂತಿಸಲಾಗಿದೆ.

ಲಖನೌ: ರಾಜ್ಯದ ಎಲ್ಲಾ ಜೈಲುಗಳಲ್ಲಿ ಗೋಶಾಲೆ ತೆರೆಯುವ ಬಗ್ಗೆ ಉತ್ತರಪ್ರದೇಶದ ಬಂಧೀಖಾನೆ ಇಲಾಖೆ ಚಿಂತನೆ ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೈಲುಗಳಲ್ಲಿ ಸಾಕಷ್ಟು ಜಾಗದ ಲಭ್ಯತೆ ಇರುತ್ತದೆ, ರಕ್ಷಣೆಯೂ ಇರುತ್ತದೆ. ಹೀಗಾಗಿ ಸರ್ಕಾರೇತರ ಸಂಸ್ಥೆ ಗಳು ಮತ್ತು ಸಂಘ- ಸಂಸ್ಥೆಗಳ ನೆರವಿನಿಂದ ಗೋಶಾಲೆ ಆರಂಭಿಸಲು ಚಿಂತಿಸಲಾಗಿದೆ.

ಜೊತೆಗೆ ಕೈದಿಗಳ ಸೇವೆ ಬಳಸಿಕೊಳ್ಳಲಾಗುವುದು. ಗೋವುಗಳಿಂದ ಲಭ್ಯವಾಗುವ ಹಾಲನ್ನು ಜೈಲಿನಲ್ಲೇ ಬಳಸಿಕೊಳ್ಳಲಾಗುವುದು. ಜೊತೆಗೆ ಗೋವುಗಳಿಂದ ಲಭ್ಯವಾಗುವ ಗೊಬ್ಬರ ಬಳಸಿ ಜೈಲಿನ ಆವರಣದಲ್ಲಿಯೇ ಸಾವಯವ ಕೃಷಿ ನಡೆಸುವ ಆಲೋಚನೆ ಇದೆ ಎಂದು ಸರ್ಕಾರ ಹೇಳಿದೆ.