ದಲಿತರ ಜೊತೆ ಕುಳಿತು ಊಟ ಮಾಡಿದ ಯೋಗಿ!
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ತವರಾದ ಗೋರಖ್;ಪುರದಲ್ಲಿ ದಲಿತರ ಜೊತೆ ಊಟ ಮಾಡಿದ್ದಾರೆ.
ಗೋರಕ್’ಪುರ (ಜೂ.14): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ತವರಾದ ಗೋರಖ್;ಪುರದಲ್ಲಿ ದಲಿತರ ಜೊತೆ ಊಟ ಮಾಡಿದ್ದಾರೆ.
ಇಲ್ಲಿನ ಹರ್ನಾಂಪುರ ಗ್ರಾಮದಲ್ಲಿ ಸುಮಾರು 150 ದಲಿತರ ಜೊತೆ ಸೇರಿ ಭೋಜನ ಸೇವಿಸಿದ್ದಾರೆ. ಕಳೆದ ತಿಂಗಳು ಠಾಕೂರರು ಹಾಗೂ ದಲಿತರ ನಡುವೆ ನಡೆದ ಗಲಾಟೆಯಲ್ಲಿ ಮೂವರು ದಲಿತರು ಮೃತಪಟ್ಟಿದ್ದರು. ಆಡಳಿತಾರೂಡ ಬಿಜೆಪಿಗೆ ದಲಿತ ವಿರೋಧಿ ಎಂದು ಜನರು ಜರಿದರು. ಈ ಹಿನ್ನಲೆಯಲ್ಲಿ ಸೌಹಾರ್ದ ಕಾಪಾಡಲು ಯೋಗಿ ಆದಿತ್ಯನಾಥ್ ದಲಿತರ ಜೊತೆ ಊಟ ಮಾಡಿ ನಾವು ನಿಮ್ಮ ವಿರೋಧಿಗಳಲ್ಲ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಬಿಂಬಿಸಿದ್ದಾರೆ.