ಸಾಮಾನ್ಯವಾಗಿ ದೇವರಲ್ಲಿ ನಮಗೆ, ಊರಿಗೆಲ್ಲಾ ಒಳ್ಳೆಯದಾಗಲಿ ಅಂತ ಹರಕೆ ಹೊರೋದು ಕಾಮನ್ ಆದರೆ ಇಲ್ಲೊಬ್ಬರು ತನ್ನ ಶತ್ರು ನಾಶಕ್ಕೂ ದೇವರಿಗೆ ಪತ್ರವನ್ನು ಬರೆದು ಹುಂಡಿಯಲ್ಲಿ ಹಾಕಿರೋ ಘಟನೆ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯಲ್ಲಿ ನಡೆದಿದೆ.

ಬಾಗಲಕೋಟೆ(ಜೂ.10): ಸಾಮಾನ್ಯವಾಗಿ ದೇವರಲ್ಲಿ ನಮಗೆ, ಊರಿಗೆಲ್ಲಾ ಒಳ್ಳೆಯದಾಗಲಿ ಅಂತ ಹರಕೆ ಹೊರೋದು ಕಾಮನ್ ಆದರೆ ಇಲ್ಲೊಬ್ಬರು ತನ್ನ ಶತ್ರು ನಾಶಕ್ಕೂ ದೇವರಿಗೆ ಪತ್ರವನ್ನು ಬರೆದು ಹುಂಡಿಯಲ್ಲಿ ಹಾಕಿರೋ ಘಟನೆ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಉತ್ತರ ಕರ್ನಾಟಕದ ತಿರುಪತಿ ತಿಮ್ಮಪ್ಪನೆಂದೇ ಖ್ಯಾತಿ ಪಡೆದಿರುವ ತುಳಸಿಗೇರಿ ಹನಮಪ್ಪನಿಗೆ ಪತ್ರ ಬರೆದಿದ್ದಾನೆ. ಪ್ರತಿ ವಷ೯ದಂತೆ ಈ ವಷ೯ವೂ ದೇವರ ಕಾಣಿಕೆ ಹುಂಡಿಗಳಲ್ಲಿರುವ ಹಣದ ಎಣಿಕೆ ಮಾಡೋ ವೇಳೆ ಈ ಪತ್ರ ಪತ್ತೆಯಾಗಿದೆ. ಪತ್ರವನ್ನ ಯುವತಿ ಬರೆದಳೋ ಅಥವಾ ಯುವಕ ಬರೆದಿದ್ದಾನೋ ಅನ್ನೋದು ಕುತೂಹಲಕಾರಿಯಾಗಿದೆ.

ಈ ಬಾರಿ ೫ಲಕ್ಷಕ್ಕೂ ಅಧಿಕ ಹುಂಡಿ ಹಣ ಶೇಖರಣೆಯಾಗಿದ್ದು, ತಹಶೀಲ್ದಾರ ವಿನಯ್ ಕುಲಕರ್ಣಿ ನೇತೃತ್ವದಲ್ಲಿ ಎಣಿಕೆ ಕಾಯ೯ ನಡೆಸಲಾಗಿದೆ.