Asianet Suvarna News Asianet Suvarna News

ಕೇಂದ್ರ ಸಚಿವನನ್ನು ಎಳೆದಾಡಿ, ಕಪಾಳಕ್ಕೆ ಹೊಡೆದ ಯುವಕ

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರನ್ನು ಯುವಕನೊಬ್ಬ ಎಳೆದಾಡಿ, ಕಪಾಳಕ್ಕೆ ಹೊಡೆದು ರದ್ದಾಂತ ಮಾಡಿದ್ದಾನೆ.

Union Minister Ramdas Athawale slapped at public event in Maharashtra
Author
Bengaluru, First Published Dec 9, 2018, 2:59 PM IST

ಥಾಣೆ,[ಡಿ.09]: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್​ ಅತವಾಲೆ ಅವರನ್ನು ಎಳೆದಾಡಿ ಹಲ್ಲೆ ಮಾಡಿರುವ ಘಟನೆ  ಮಹಾರಾಷ್ಟ್ರದ ಅಂಬೇರ್​ನಾಥ್​ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಮದಾಸ್ ಅತವಾಲೆ ಅವರು ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿಯುತ್ತಲೇ ಅವರತ್ತ ನುಗ್ಗಿ ಬಂದ ಪ್ರವೀಣ್​ ಗೋಸಾವಿ ಎಂಬ ಯುವಕ, ಸಚಿವರನ್ನ ಕೆಳಗೆ ತಳ್ಳಿ, ಬಳಿಕ ಎಳೆದಾಡಿ ಕಪಾಳಕ್ಕೆ ಹೊಡೆದಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಸಚಿವರ ಮೇಲೆ ಹಲ್ಲೆ ನಡೆಯುತ್ತಲೇ ಅವರ ನೆರವಿಗೆ ಧಾವಿಸಿದ ಅವರ ಬೆಂಬಲಿಗರು ಮತ್ತು ಅಂಗರಕ್ಷಕರು, ಯುವಕ ಪ್ರವೀಣ್​ನನ್ನು ಪಕ್ಕಕ್ಕೆ ಎಳೆದು ಬೀಳಿಸಿ, ಹೊಡೆದಿದ್ದಾರೆ. 

 ಆ ನಂತರ ಸಚಿವರ ಬೆಂಬಲಿಗರು ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ. ಸಚಿವರ ಮೇಲೆ ಹಲ್ಲೆ ನಡೆಸಿದ ಯುವಕ ಪ್ರವೀಣ್​ ಅವರದ್ದೇ ಪಕ್ಷವಾದ ರಿಪಬ್ಲಿಕನ್​ ಪಾರ್ಟಿ ಆಫ್​ ಇಂಡಿಯಾದ (ಆರ್​ಪಿಐ) ಕಾರ್ಯಕರ್ತ ಎನ್ನಲಾಗಿದ್ದು, ಪ್ರವೀಣ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Follow Us:
Download App:
  • android
  • ios